‘LPG ಇಂದ ಉದ್ಯಮಕ್ಕೆ ಹೊಡೆತ’ ಎಂದ ಸುಪ್ರೀಂ; ಕೋರ್ಟ್‌ಅನ್ನು ಹಾಸ್ಯಮಯಗೊಳಿಸಿದ ಎಜಿ ಪ್ರತಿಕ್ರಿಯೆ

Date:

ಗಲ್ಫ್ ಪ್ರದೇಶದಲ್ಲಿನ ಯುದ್ಧದ ಕಾರಣದಿಂದಾಗಿ ಅಡುಗೆ ಅನಿಲದ (LPG) ಕೊರತೆಯ ಬಗ್ಗೆ ಆತಂಕಗಳು ಉಂಟಾಗಿವೆ. ಇದೇ ಸಮಯದಲ್ಲಿ, ‘ಉದ್ಯಮ’ ಎಂಬ ಪದಕ್ಕೆ 1978ರಲ್ಲಿ ನ್ಯಾಯಾಲಯ ನೀಡಿದ್ದ ವ್ಯಾಖ್ಯಾನವನ್ನು ಪರಿಶೀಲಿಸುತ್ತಿದ್ದ ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಾಧೀಶರ ಪೀಠವು, ‘LPG ಉದ್ಯಮಕ್ಕೆ ಹೊಡೆತ ನೀಡಿದೆ’ ಎಂಬುದನ್ನು ಗಮನಿಸಿದೆ. ಆದರೆ, ನ್ಯಾಯಾಲಯದ ಈ ಹೇಳಿಕೆ ಕೋರ್ಟ್‌ ಅವರಣದಲ್ಲಿದ್ದವರನ್ನು ಅಚ್ಚರಿಗೊಳಿಸಿದೆ. ಯಾಕೆಂದರೆ, ನ್ಯಾಯಾಲಯವು ‘ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣ’ (ಎಲ್‌ಪಿಜಿ) ಕುರಿತು ಮಾತನಾಡಿದ್ದರೆ, ಅಲ್ಲಿದ್ದವರು ಅಡುಗೆ ಅನಿಲದ (ಎಲ್‌ಪಿಜಿ) ಎಂದು ಅರ್ಥೈಸಿಕೊಂಡಿದ್ದಾರೆ.

- Advertisement -

ಸುಮಾರು 50 ವರ್ಷಗಳಷ್ಟು ಹಳೆಯದಾದ ‘ಉದ್ಯಮ’ ಎಂಬ ಪದದ ವಿಸ್ತಾರವಾದ ವ್ಯಾಖ್ಯಾನವು ಈಗಿನ ಕಾಲಕ್ಕೆ ಹೇಗೆ ಅಪ್ರಸ್ತುತವಾಗಿದೆ ಎಂದು ಅಟಾರ್ನಿ ಜನರಲ್ (AG) ಆರ್. ವೆಂಕಟರಮಣಿ ನ್ಯಾಯಾಲಯದಲ್ಲಿ ವಿವರಿಸುತ್ತಿದ್ದರು. ಈ ವೇಳೆ, ಪೀಠದ ಭಾಗವಾಗಿದ್ದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, “LPG ಉದ್ಯಮಗಳಿಗೆ ಗಣನೀಯ ಹೊಡೆತ ನೀಡಿದೆ’ ಎಂದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಎಜಿ, “ದೇಶದಲ್ಲಿ ಇಂದು ಅಡುಗೆ ಅನಿಲದ (LPG) ಕೊರತೆಯಿಲ್ಲ” ಎಂದು ಹೇಳಿದರು. ಅವರ ಹೇಳಿಕೆಯು ನ್ಯಾಯಾಲಯವನ್ನು ಹಾಸ್ಯಮಯಗೊಳಿಸಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸಾಕ್ಷ್ಯ ಚಿತ್ರಗಳಿರದ ದೇಶವು ಚರಿತ್ರೆ ಇರದ ರಾಷ್ಟ್ರದಂತೆ ಎಂದಿದ್ದ...

ಚಿಲಿ ದೇಶದ ಜನರ ಸಾಮಾಜಿಕ ಬದುಕು ಹಾಗೂ ರಾಜಕೀಯ ಬೆಳವಣಿಗೆಗಳು ಹೆಣೆದುಕೊಂಡ ಘನವಾದ ಚರಿತ್ರೆಯ ಸಂಪುಟವಾಗಿ ಕಟ್ಟಿದ ಧೀಮಂತ ಸಿನೆಮಾ ಕಲಾವಿದ ಪ್ಯಾಟ್ರಿಷಿಯೊ ಗುಜ್ಮಾನ್, ಇತ್ತೀಚಿಗೆ ಇಲ್ಲವಾದರು. ಅವರ ಸೃಜನಶೀಲತೆ, ತುಡಿತ ಮತ್ತು...

ಸೂಕ್ತ ಸಮಯಕ್ಕಾಗಿ ಕಾಯುತ್ತಲೇ ಇರುವ ಕುಮಾರಸ್ವಾಮಿ!

“ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ, ಅವ್ಯವಹಾರದ ಬಗ್ಗೆ ಜನರ ಮುಂದೆ ಇಡುವುದರಲ್ಲಿ ಯಾವುದೇ ರಾಜಿಯಿಲ್ಲ. ರಾಜ್ಯದಲ್ಲಿನ ಘಟನೆ ಬಗ್ಗೆ ಬಾಯಿ ಮುಚ್ಚಿಕೊಂಡಿರಲು ಆಗಲ್ಲ" ಎಂದಿದ್ದಾರೆ ಕುಮಾರಸ್ವಾಮಿ. ಈ ಬಾರಿಯಾದರೂ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಾರೆಯೇ? ‘ಸ್ಪೋಟಕ ಹೇಳಿಕೆ’,...

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ....

ಎಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗರತ್ನ, ತಾವು ‘LPG’ ಎಂದರೆ ಉದಾರೀಕರಣ (Liberalisation), ಖಾಸಗೀಕರಣ (Privatisation) ಮತ್ತು ಜಾಗತೀಕರಣ (Globalisation) ಎಂಬುದನ್ನು ಉಲ್ಲೇಖಿಸಿದ್ದಾಗಿ ವಿವರಿಸಿದರು.

“1970ರ ದಶಕದ ನಂತರ ಈ ಮೂರೂ (LPG) ರಂಗಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ನ್ಯಾಯಾಲಯವು ಈ ಬೆಳವಣಿಗೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. 1978ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪೀಠವು ನೀಡಿದ ಉದ್ಯಮದ ವ್ಯಾಖ್ಯಾನವನ್ನು ಮರುಪರಿಶೀಲಿಸಲು ಪ್ರಯತ್ನಿಸುತ್ತದೆ” ಎಂದು ಪೀಠವು ಹೇಳಿದೆ.

ತಮ್ಮ ವಾದವನ್ನು ಮುಂದಿಟ್ಟ ಎಜಿ, “ಸಮಾಜವಾದವು ರಾಜಕೀಯ ಮತ್ತು ಆರ್ಥಿಕತೆಯ ಪ್ರಮುಖ ಲಕ್ಷಣವಾಗಿದ್ದ 50 ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ಉದ್ಯಮದ ವ್ಯಾಖ್ಯಾನವನ್ನು ನೀಡಿತ್ತು. 1990ರ ದಶಕದಿಂದ ಮಾರುಕಟ್ಟೆಗಳು ಗಣನೀಯವಾಗಿ ಮುಕ್ತವಾಗಿವೆ,” ಎಂದು ವಿವರಿಸಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಕ್ಷ್ಯ ಚಿತ್ರಗಳಿರದ ದೇಶವು ಚರಿತ್ರೆ ಇರದ ರಾಷ್ಟ್ರದಂತೆ ಎಂದಿದ್ದ ಪ್ಯಾಟ್ರಿಷಿಯೊ ಗುಜ್ಮಾನ್

ಚಿಲಿ ದೇಶದ ಜನರ ಸಾಮಾಜಿಕ ಬದುಕು ಹಾಗೂ ರಾಜಕೀಯ ಬೆಳವಣಿಗೆಗಳು ಹೆಣೆದುಕೊಂಡ...

ಹೊಸ ತಿದ್ದುಪಡಿ ಕಾಯ್ದೆ ಜಾರಿ: ಅ.1ರಿಂದ ಜನನ, ಮರಣ ನೋಂದಣಿ ತಡ ಮಾಡಿದ್ರೆ ಕೋರ್ಟ್ ಅಲೆಯಬೇಕಾದೀತು

ಜನನ ಮತ್ತು ಮರಣಗಳ ವಿಳಂಬ ನೋಂದಣಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ನಿಯಮಗಳನ್ನು...

ಕರ್ನಾಟಕದ 85% ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಅಳತೆಯಲ್ಲಿ ಮೋಸ

ರಾಜ್ಯದ ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ಇಂಧನ ಅಳತೆಯಲ್ಲಿ ಮೋಸವಾಗುತ್ತಿದೆ. ಇದನ್ನು ತಡೆಗಟ್ಟಲು...

ವಿಜಯಪುರ | ಭೀಮ್ ಆರ್ಮಿ ಜಿಲ್ಲಾಧ್ಯಕ್ಷರಾಗಿ ರಾಕೇಶ್ ಕುಮಟಗಿ ನೇಮಕ

ನ್ಯಾಯ, ಸಮಾನತೆ ಹಾಗೂ ಸಂವಿಧಾನದ ಆಶಯಗಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಭೀಮ್ ಆರ್ಮಿ ಭಾರತ್...