ನರೋಡಾ ಗಾಮ್‌ ಹತ್ಯಾಕಾಂಡ | ಆರೋಪಿಗಳ ಖುಲಾಸೆ ನ್ಯಾಯದ ಕೊಲೆ; ಸಾಕ್ಷಿಗಳ ಅಳಲು

Date:

  • ನರೋಡಾ ಗಾಮ್‌ ಹತ್ಯಾಕಾಂಡ ಪ್ರಕರಣದಲ್ಲಿ 67 ಆರೋಪಿಗಳು ಖುಲಾಸೆ
  • 2002ರಲ್ಲಿ ನರೋಡಾ ಗಾಮ್‌ನಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ 11 ಮಂದಿ ಹತ್ಯೆ

ನರೋಡಾ ಗಾಮ್‌ ಹತ್ಯಾಕಾಂಡ ಪ್ರಕರಣದಲ್ಲಿ ಆರೋಪಿಗಳನ್ನು ನ್ಯಾಯಾಲಯ ಖುಲಾಸೆ ಮಾಡಿದೆ. ಇದು ನ್ಯಾಯದ ನಿಜವಾದ ಕೊಲೆ ಎಂದು ಪ್ರಕರಣದ ಸಾಕ್ಷಿಗಳು ಹೇಳಿದ್ದಾರೆ.

ಹತ್ಯಾಕಾಂಡ ಪ್ರಕರಣದಲ್ಲಿ ಗುರುವಾರ (ಏಪ್ರಿಲ್‌ 20) ಗುಜರಾತ್ ವಿಶೇಷ ತನಿಖಾ ತಂಡದ (ಎಸ್‌ಐಟಿ) ವಿಶೇಷ ನ್ಯಾಯಾಲಯ ಎಲ್ಲ 67 ಆರೋಪಿಗಳನ್ನು ಖುಲಾಸೆಗೊಳಿಸಿದೆ.

ನ್ಯಾಯಾಲಯದ ತೀರ್ಪು ಬಂದಿರುವ ಈ ಸಮಯ ಸಂತ್ರಸ್ತರಿಗೆ ಕರಾಳ ದಿನ. ನರೋಡಾ ಗಾಮ್‌ ಹತ್ಯಾಕಾಂಡ ಪ್ರಕರಣದ ತೀರ್ಪು ಆತ್ಮಸಾಕ್ಷಿ ರಹಿತ ಎಂದು ಸಾಕ್ಷಿಗಳು ಬಣ್ಣಿಸಿರುವುದಾಗಿ ‘ಇಂಡಿಯನ್‌ ಎಕ್ಸ್‌ಪ್ರೆಸ್‌‘ ವರದಿ ಮಾಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪ್ರಾಸಿಕ್ಯೂಷನ್ ಸಾಕ್ಷಿಯಾಗಿದ್ದ ಇಮ್ತಿಯಾಜ್ ಅಹ್ಮದ್ ಹುಸೇನ್ ಕುರೇಶಿ (50) ತಾವು ಕಂಡ ಕಹಿ ಸತ್ಯವನ್ನು ಹೇಳಿದ್ದಾರೆ.

“ನರೋಡಾ ಗಾಮ್‌ ಹತ್ಯಾಕಾಂಡ ಪ್ರಕರಣದಲ್ಲಿ ಜೈದೀಪ್ ಪಟೇಲ್ (ಮಾಜಿ ವಿಎಚ್‌ಪಿ ನಾಯಕ), ಪ್ರದ್ಯುಮಾನ್ ಪಟೇಲ್, ಆಗಿನ ಹಾಲಿ ಪಾಲಿಕೆ ಸದಸ್ಯರಾದ ವಲ್ಲಭ್ ಪಟೇಲ್ ಮತ್ತು ಅಶೋಕ್ ಪಟೇಲ್ ಸೇರಿದಂತೆ 17 ಆರೋಪಿಗಳನ್ನು ನಾನು ಗುರುತಿಸಿದ್ದೇನೆ” ಎಂದು ಕುರೇಶಿ ಹೇಳಿದ್ದಾರೆ.

“ಆರೋಪಿಗಳು ಮಸೀದಿ ಸುಟ್ಟುಹಾಕಲು, ನಿರ್ದಿಷ್ಟ ಸ್ಥಳಗಳ ಮೇಲೆ ದಾಳಿ ಮಾಡಲು ಉದ್ರಿಕ್ತ ಗುಂಪಿಗೆ ಸೂಚಿಸುವುದನ್ನು ನಾನು ನೋಡಿದ್ದೇನೆ. ನನ್ನ ಕಣ್ಣ ಮುಂದೆಯೇ ಐವರು ಬೆಂಕಿಯಲ್ಲಿ ಸುಟ್ಟು ಮೃತಪಟ್ಟರು. ನಾನು ಆರೋಪಿಗಳನ್ನು ಗುರುತಿಸಿ ಎಲ್ಲ ಸಾಕ್ಷ್ಯ ನೀಡಿದ್ದೇನೆ. ಆದರೂ ಅವರು ಆರೋಪ ಮುಕ್ತವಾಗಿದ್ದಾರೆ” ಎಂದು ಕಂಬನಿ ಮಿಡಿದರು.

“ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು. ಆದರೆ ಖುಲಾಸೆಗೊಳಿಸುವ ಮೂಲಕ ನ್ಯಾಯಾಂಗ ನಂಬಿಕೆ ಕಳೆದುಕೊಂಡಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ನಾವು ಹೋರಾಟ ಮುಂದುವರಿಸುತ್ತೇವೆ. ಆರೋಪಿಗಳ ಖುಲಾಸೆಯನ್ನು ಗುಜರಾತ್ ಹೈಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ. 21 ವರ್ಷಗಳು ಕಳೆದಿವೆ, ಆದರೆ ಹತ್ಯಾಕಾಂಡದ ಭೀಕರತೆ ಮರೆಯಲು ಸಾಧ್ಯವಿಲ್ಲ. ಆಗಷ್ಟೆ ಮದುವೆಯಾಗಿ ಕುಂಭರ್ ವಾಸ್‌ಗೆ ಬಂದಿದ್ದ ನವವಧುವನ್ನು ನನ್ನ ಕಣ್ಣ ಮುಂದೆ ಇರಿದು ಕೊಲ್ಲಲಾಯಿತು. ಆಕೆಯ ಇಡೀ ಕುಟುಂಬ ಹತ್ಯೆಯಾಯಿತು” ಎಂದು ಹತ್ಯಾಕಾಂಡದ ಕರಾಳತೆ ವಿವರಿಸಿದರು.

“ನರೋಡಾ ಗಾಮ್‌ ಹತ್ಯಾಕಾಂಡ ಪ್ರಕರಣದಲ್ಲಿ 21 ವರ್ಷಗಳ ಕಾಯುವಿಕೆ ಹೊರತಾಗಿಯೂ ನಾವು ನ್ಯಾಯಾಲಯದ ಮೇಲೆ ಭರವಸೆ ಹೊಂದಿದ್ದೆವು. ನ್ಯಾಯಾಲಯಕ್ಕೆ ಆತ್ಮಸಾಕ್ಷಿ ಇರುತ್ತದೆ ಎಂದು ಭಾವಿಸಿದ್ದೆವು. ಕೆಲವರನ್ನಾದರೂ ತಪ್ಪಿತಸ್ಥರೆಂದು ಪ್ರಕಟಿಸುತ್ತಾರೆ ಎಂದು ಆಶಿಸಿದ್ದೆವು. 2002ರ ದುರಂತದಲ್ಲಿ 11 ಮಂದಿಯ ಹತ್ಯೆ ಮಾಡಲಾಗಿತ್ತು. ನ್ಯಾಯಾಲಯದ ಈ ತೀರ್ಪಿನಿಂದ ಇಂದು ನ್ಯಾಯದ ಕೊಲೆಯಾಗಿದೆ” ಎಂದು ಅಳಲು ತೋಡಿಕೊಂಡರು.

ಪ್ರಕರಣದ ಮತ್ತೊಬ್ಬ ಸಾಕ್ಷಿ ಶರೀಫ್ ಮಾಲೆಕ್ (42) ನ್ಯಾಯಾಲಯದಲ್ಲಿ ಆರೋಪಿಗಳ ಪೈಕಿ ಮಾಯಾ ಕೊಡ್ನಾನಿ ಮತ್ತು ಜೈದೀಪ್ ಪಟೇಲ್ ಸೇರಿದಂತೆ 13 ಆರೋಪಿಗಳನ್ನು ಗುರುತಿಸಿ ಸಾಕ್ಷ್ಯ ನುಡಿದಿದ್ದರು.

“ನರೋಡಾ ಗಾಮ್‌ ಹತ್ಯಾಕಾಂಡ ಪ್ರಕರಣದ ಈ ತೀರ್ಪು ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರದಲ್ಲಿ ಭಾಗವಹಿಸವವರು ಆರೋಪ ಮುಕ್ತಗೊಳ್ಳುತ್ತಾರೆ ಎಂದು ತೋರಿಸಿದೆ. ಇದು ನ್ಯಾಯಾಂಗದ ಮೇಲಿನ ನಂಬಿಕೆ ಕುಗ್ಗಿಸುತ್ತದೆ” ಎಂದು ಶರೀಫ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಗುಜರಾತ್‌ನ ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಸಚಿವೆ ಮಾಯಾ ಕೊಡ್ನಾನಿ ಮತ್ತು ಬಜರಂಗದಳದ ಮಾಜಿ ನಾಯಕ ಬಾಬು ಬಜರಂಗಿ ಸೇರಿದಂತೆ ಪ್ರಕರಣದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ಎಸ್‌ಐಟಿ ಪ್ರಕರಣಗಳ ವಿಶೇಷ ನ್ಯಾಯಾಲಯ ಗುರುವಾರ ತೀರ್ಪ ನೀಡಿತ್ತು.

2002ರಲ್ಲಿ ಗುಜರಾತ್‌ನಲ್ಲಿ ನಡೆದಿದ್ದ ಕೋಮು ಗಲಭೆಯಲ್ಲಿ ಮುಸ್ಲಿಂ ಸಮುದಾಯದ 11 ಜನರನ್ನು ಹತ್ಯೆಗೈಯಲಾಗಿತ್ತು. ಈ ಪ್ರಕರಣದಲ್ಲಿ ಒಟ್ಟು 86 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.

ಒಟ್ಟು ಆರೋಪಿಗಳಲ್ಲಿ 18 ಜನರು ಈಗಾಗಲೇ ಮೃತಪಟ್ಟಿದ್ದರು. ಉಳಿದ 68 ಮಂದಿಯನ್ನು ಪ್ರಕರಣದಿಂದ ಆರೋಪ ಮುಕ್ತಗೊಳಿಸಿ ಎಸ್ಐಟಿ ಪ್ರಕರಣಗಳ ವಿಶೇಷ ನ್ಯಾಯಾಧೀಶ ಎಸ್‌ ಕೆ ಬಾಕ್ಸಿ ಅವರು ತೀರ್ಪು ನೀಡಿದರು.

ಪ್ರಕರಣ ಸಂಬಂಧ 2010ರಲ್ಲಿ ಆರಂಭವಾದ ವಿಚಾರಣೆಯ ಸಂದರ್ಭದಲ್ಲಿ ಪ್ರಾಸಿಕ್ಯೂಷನ್ 187 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಸುಮಾರು 13 ವರ್ಷಗಳ ಕಾಲ 6 ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸಿದ್ದಾರೆ ಎಂದು ವಿಶೇಷ ಪ್ರಾಸಿಕ್ಯೂಟರ್ ಸುರೇಶ್ ಶಾ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ದೆಹಲಿಯ ಸಾಕೇತ್‌ ಕೋರ್ಟ್‌ನಲ್ಲಿ ಮಹಿಳೆ, ವಕೀಲರ ಮೇಲೆ ಗುಂಡಿನ ದಾಳಿ

2002ರ ಫೆ. 27ರಂದು ಗೋಧ್ರಾದಲ್ಲಿ ಅಯೋಧ್ಯೆಯಿಂದ ಮರಳುತ್ತಿದ್ದ ಕರಸೇವಕರಿದ್ದ ಸಾಬರಮತಿ ಎಕ್ಸ್‌ಪ್ರೆಸ್‌ನ ಎಸ್- 6 ಭೋಗಿಗೆ ಬೆಂಕಿ ಹಚ್ಚಿಲಾಗಿತ್ತು. ಘಟನೆಯಲ್ಲಿ 58 ಜನರು ಮೃತಪಟ್ಟಿದ್ದರು.

ಘಟನೆಯಿಂದ ಗುಜರಾತ್‌ನಾದ್ಯಂತ ಕೋಮು ಹಿಂಸಾಚಾರ ಭುಗಿಲೆದ್ದಿತ್ತು. ಅಹಮದಾಬಾದ್ ನಗರದ ನರೋಡಾ ಗಾಮ್‌ನಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ 11 ಮಂದಿಯನ್ನು ಹತ್ಯೆ ಮಾಡಲಾಗಿತ್ತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಧರ್ಮ ರಾಜಕಾರಣ ಮಾಡುವ ಬಗ್ಗೆ ಎಂದಿಗೂ ಯೋಚಿಸಿಲ್ಲ ಎಂದ ರಾಜನಾಥ್ ಸಿಂಗ್!

ರಾಜಸ್ಥಾನದ ಬನ್ಸ್ವಾರಾದಲ್ಲಿ ಚುನಾವಣಾ ಪ್ರಚಾರ ಮಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು...

ಲೋಕಸಭೆ ಚುನಾವಣೆ| ಮಣಿಪುರದಲ್ಲಿ 3 ಬಾರಿ ಸ್ಫೋಟ; ಸೇತುವೆಗೆ ಹಾನಿ

ಮಣಿಪುರದ ಕೆಲವು ತಿಂಗಳುಗಳ ಕಾಲ ಕೊಂಚ ಕಡಿಮೆಯಾಗಿದ್ದ ಹಿಂಸಾಚಾರವು ಲೋಕಸಭೆ ಚುನಾವಣೆ...

ದಾರಿತಪ್ಪಿಸುವ ಜಾಹೀರಾತು ಪ್ರಕರಣ: ಮತ್ತೆ ಪತ್ರಿಕೆಗಳಲ್ಲಿ ಕ್ಷಮೆಯಾಚನೆ ಪ್ರಕಟಿಸಿದ ರಾಮ್‌ದೇವ್

ಪತಂಜಲಿ ಆಯುರ್ವೇದ್ ಲಿಮಿಟೆಡ್ ವಿರುದ್ಧ ದಾರಿತಪ್ಪಿಸುವ ಜಾಹೀರಾತು ಪ್ರಕರಣ ದಾಖಲಾಗಿದ್ದು, ಸುಪ್ರೀಂ...

ʼಈ ದಿನʼ ಸಮೀಕ್ಷೆ | ರೈತರಿಗೆ ಮೋದಿ ಮಹಾ ಮೋಸ; ‘ಬೆಂಬಲ ಬೆಲೆ’ ಕೊಡೋರಿಗೆ ನಮ್ಮ ಬೆಂಬಲ ಎಂದ ಮತದಾರರು!

ಭಾರತವು ಜಾಗತಿಕ ಆರ್ಥಿಕತೆಯಲ್ಲಿ 5ನೇ ಸ್ಥಾನದಲ್ಲಿದೆ. ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ...