ಐಪಿಎಲ್ 2023 |ರೋಚಕ ಪಂದ್ಯದಲ್ಲಿ ಮಿಂಚಿದ ರವೀಂದ್ರ ಜಡೇಜಾ; ಚೆನ್ನೈ ಸೂಪರ್‌ ಕಿಂಗ್ಸ್‌ 5ನೇ ಬಾರಿ ಚಾಂಪಿಯನ್

Date:

ಆಲ್‌ರೌಂಡರ್‌ ರವಿಂದ್ರ ಜಡೇಜಾ ಅಂತಿಮ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್‌ ಹಾಗೂ ಬೌಂಡರಿ ಸಿಡಿಸುವ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಐದನೇ ಬಾರಿಗೆ ಐಪಿಎಲ್ ಟ್ರೋಫಿ ತಂದುಕೊಟ್ಟರು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡದ ಹೆಸರಿನಲ್ಲಿ ಇದ್ದ ದಾಖಲೆಯನ್ನು ಚೆನ್ನೈ ತಂಡ ಸರಿಗಟ್ಟಿತು.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌2023ರ 16ನೇ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ 171 ರನ್‌ಗಳ ಗುರಿಯನ್ನು 15ನೇ ಓವರ್‌ನ ಕೊನೆಯ ಎಸೆತದಲ್ಲಿ ಜಯ ದಾಖಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಚೆನ್ನೈ ಬ್ಯಾಟಿಂಗ್‌ ಶುರುವಾದ ಮೊದಲ ಓವರ್‌ನಲ್ಲಿಯೇ ಸುರಿದ ಮಳೆಯಿಂದಾಗಿ ಎರಡೂವರೆ ಗಂಟೆ ತಡವಾಗಿ ಪಂದ್ಯ ಆರಂಭವಾಯಿತು. ಆಟವನ್ನು ರಾತ್ರಿ 12.10ಕ್ಕೆ ಮುಂದುವರಿಸಲು ಅಂಪೈರ್ ಗಳು ನಿರ್ಧರಿಸಿದರು. ಡೆಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 15 ಓವರ್‌ಗಳಿಗೆ ಸೀಮಿತಗೊಳಿಸಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡಕ್ಕೆ ಗುಜರಾತ್‌ ಟೈಟಾನ್ಸ್ ನೀಡಿದ 215 ರನ್‌ಗಳ ಗುರಿಗೆ ಬದಲಾಗಿ 171 ರನ್‌ಗಳ ಗುರಿ ನೀಡಲಾಯಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಗುಜರಾತ್‌ ನೀಡಿದ ಸವಾಲನ್ನು ಬೆನ್ನಟ್ಟಿದ ಚೆನ್ನೈ ತಂಡ, ಶಿವಂ ದುಬೆ ಅಜೇಯ 32, ರವೀಂದ್ರ ಜಡೇಜಾ ಅಜೇಯ 15, ಡೆವೋನ್‌ ಕಾನ್ವೆ(47),ಅಜಿಂಕ್ಯಾ ರಹಾನೆ(27),ಅಂಬಟಿ ರಾಯುಡು(19) ಹಾಗೂ ಋತುರಾಜ್‌ ಗಾಯಕ್ವಾಡ್ (26) ಅವರ ಸಮಯೋಚಿತ ಹಾಗೂ ಸ್ಫೋಟಕ ಆಟದ ನೆರವಿನಿಂದ 5 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತು.

ಗುಜರಾತ್‌ ಪರ ನೂರ್ ಅಹ್ಮದ್ 17/2 ಹಾಗೂ ಮೋಹಿತ್ ಶರ್ಮಾ 36/3 ವಿಕೆಟ್‌ ಪಡೆದು ಸೋಲಿನಲ್ಲೂ ಮಿಂಚಿದರು.

ಆರಂಭಿಕರಾಗಿ ಬ್ಯಾಟಿಂಗ್‌ ಮಾಡಿದ ಋತುರಾಜ್‌ ಗಾಯಕ್‌ವಾಡ್ ಹಾಗೂ ಡೆವೋನ್‌ ಕಾನ್ವೆ ಸ್ಟೋಟಕ ಬ್ಯಾಟಿಂಗ್‌ ಶುರು ಮಾಡಿದರು. ಋತುರಾಜ್‌ ಕೇವಲ 16 ಚೆಂಡುಗಳಲ್ಲಿ3 ಬೌಂಡರಿ ಹಾಗೂ 1 ಸಿಕ್ಸರ್‌ನೊಂದಿಗೆ 26 ರನ್‌ ಗಳಿಸಿ ಔಟಾದರೆ, ಕಾನ್ವೆ ಕೇವಲ 25 ಎಸೆತಗಳಲ್ಲಿ 4 ಬೌಂಡರಿ 2 ಸಿಕ್ಸರ್‌ನೊಂದಿಗೆ 47 ರನ್ ಚಚ್ಚಿದರು.

ನಂತರ ಆಗಮಿಸಿದ ನಾಲ್ಕನೇ ಕ್ರಮಾಂಕದ ಬ್ಯಾಟ್ಸಮೆನ್‌ ಅಜಿಂಕ್ಯ ರಹಾನೆ ಕೂಡ ಸ್ಪೋಟಕ ಬ್ಯಾಟಿಂಗ್‌ ಆಡಿ 13 ಚೆಂಡುಗಳಲ್ಲಿ 2 ಸಿಕ್ಸರ್ ಹಾಗೂ 2 ಬೌಂಡರಿಗಳೊಂದಿಗೆ 27 ರನ್‌ ಬಾರಿಸಿ ಮೋಹಿತ್‌ ಶರ್ಮಾ ಬೌಲಿಂಗ್‌ನಲ್ಲಿ ಔಟಾದರು.

ಇದಕ್ಕೂ ಮೊದಲು ಟಾಸ್‌ ಸೋತ ಗುಜರಾತ್‌ ಟೈಟಾನ್ಸ್ ತಂಡ ಸಾಯಿ ಸುದರ್ಶನ್ ಸ್ಫೋಟಕ ಬ್ಯಾಟಿಂಗ್ ಹಾಗೂ ವೃದ್ಧಿಮಾನ್ ಸಾಹ ಆಕರ್ಷಕ ಅರ್ಧ ಶತಕದ ನೆರವಿನಿಂದ ಚೆನ್ನೈ ಸೂಪರ್‌ಕಿಂಗ್ಸ್ ತಂಡಕ್ಕೆ 215 ರನ್‌ ಗುರಿ ನೀಡಿತು.

ಶುಭಮನ್ ಗಿಲ್ ಹಾಗೂ ವೃದ್ದಿಮಾನ್ ಸಾಹ ಜೊತೆಯಾಟಕ್ಕೆ ಚೆನ್ನೈ ಬೌಲರ್‌ಗಳು ಸುಸ್ತಾದರು. ಕಳೆದ ಕೆಲ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದ ವೃದ್ಧಿಮಾನ್‌ ಸಾಹ ಫೈನಲ್‌ನಲ್ಲಿ ಅಬ್ಬರಿಸಿದರು.

ಆರಂಭದಲ್ಲಿ 20 ಚೆಂಡುಗಳಲ್ಲಿ 7 ಬೌಂಡರಿಗಳೊಂದಿಗೆ  39 ರನ್ ಸಿಡಿಸಿ ಶುಭಮನ್ ಗಿಲ್ ಧೋನಿ ಮಿಂಚಿನ ಸ್ಟಂಪಿಂಗ್‌ಗೆ ಔಟ್ ಆದರು. ಗಿಲ್ ವಿಕೆಟ್ ಪತನ ಬಳಿಕ ಸಾಹ ಹಾಗೂ ಸಾಯಿ ಸುದರ್ಶನ್ ಆರ್ಭಟ ಆರಂಭಗೊಂಡಿತು. ಸಾಹ 39 ಎಸೆತದಲ್ಲಿ 5 ಬೌಂಡರಿ 1 ಸಿಕ್ಸರ್‌ನೊಂದಿಗೆ 54 ರನ್ ಗಳಿಸಿ ಔಟಾದರು. ಆದರೆ ಸಾಯಿ ಸುದರ್ಶನ್ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದರು. 

ಬೌಂಡರಿ , ಸಿಕ್ಸರ್ ಆಟದ ಮೂಲಕ ಚೆನ್ನೈ ಬೌಲರ್‌ಗಳ ಬೆವರಿಳಿಸಿದರು. ಶತಕದ ಸಮೀಪದಲ್ಲಿದ್ದಾಗ ಸಾಯಿ ಸುದರ್ಶನ್ ಪತಿರಾಣ ಬೌಲಿಂಗ್‌ ಎಲ್‌ಬಿ ಬಲೆಗೆ ಬಿದ್ದರು. 47 ಎಸೆತದಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್ ಮೂಲಕ 96 ರನ್ ಸಿಡಿಸಿದರು.

ರಶೀದ್ ಖಾನ್ ಈ ಪಂದ್ಯದಲ್ಲಿ ಅಬ್ಬರಿಸಲಿಲ್ಲ. ಆದರೆ ನಾಯಕ ಹಾರ್ದಿಕ್ ಪಾಂಡ್ಯ 12 ಎಸೆತದಲ್ಲಿ ಅಜೇಯ 21 ರನ್ ಸಿಡಿಸಿದರು. ಅಂತಿಮವಾಗಿ ಗುಜರಾತ್ ಟೈಟಾನ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಪೇರಿಸಿತು. 

ಪಂದ್ಯ ಶ್ರೇಷ್ಠ; ಡೆವೋನ್‌ ಕಾನ್ವೆ

ಸರಣಿ ಶ್ರೇಷ್ಠ; ಶುಭಮನ್‌ ಗಿಲ್‌

ಗುಜರಾತ್‌ ಆಟಗಾರರಿಗೆ ಒಲಿದ ಆರೆಂಜ್‌, ಪರ್ಪಲ್‌ ಕ್ಯಾಪ್‌

ಟೂರ್ನಿಯಲ್ಲಿ ಅತಿಹೆಚ್ಚು ರನ್‌ ಗಳಿಸಿದವರಿಗೆ ನೀಡುವ ‘ಆರೆಂಜ್‌ ಕ್ಯಾಪ್‌’ ಮತ್ತು ಹೆಚ್ಚು ವಿಕೆಟ್ ಕಬಳಿಸಿದವರಿಗೆ ಕೊಡುವ ‘ಪರ್ಪಲ್‌ ಕ್ಯಾಪ್‌’ ಗುಜರಾತ್ ಟೈಟಾನ್ಸ್ ತಂಡದ ಆಟಗಾರರ ಪಾಲಾದವು.

ಟೂರ್ನಿಯುದ್ದಕ್ಕೂ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ ಭರವಸೆಯ ಬ್ಯಾಟರ್‌ ಶುಭಮನ್ ಗಿಲ್‌ ‘ಆರೆಂಜ್‌ ಕ್ಯಾಪ್‌’ ಮತ್ತು ಅತಿಹೆಚ್ಚು ವಿಕೆಟ್ ಕಬಳಿಸಿದ ಸಾಧನೆ ಮಾಡಿದ ಮೊಹಮ್ಮದ್‌ ಶಮಿ ‘ಪರ್ಪಲ್‌ ಕ್ಯಾಪ್‌’ ತೊಟ್ಟರು.

ಗಿಲ್‌ 17 ಪಂದ್ಯಗಳಲ್ಲಿ ಮೂರು ಶತಕ ಸಹಿತ 890 ರನ್‌ ಗಳಿಸಿದ್ದಾರೆ. ಶಮಿ ಕೂಡ ಇಷ್ಟೇ ಪಂದ್ಯಗಳಿಂದ 28 ವಿಕೆಟ್‌ ಉರುಳಿಸಿದ್ದಾರೆ.

ಅತಿ ಹೆಚ್ಚು ರನ್ ಗಳಿಸಿದ ಐವರು
01.ಶುಭಮನ್‌ ಗಿಲ್‌ (ಗುಜರಾತ್‌ ಟೈಟನ್ಸ್‌) – 890 ರನ್‌
02. ಪಫ್‌ ಡುಪ್ಲೆಸಿ (ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು) – 730 ರನ್‌
03. ಡೆವೋನ್‌ ಕಾನ್ವೆ (ಚೆನ್ನೈ ಸೂಪರ್‌ ಕಿಂಗ್ಸ್‌) – 672 ರನ್‌
04. ವಿರಾಟ್‌ ಕೊಹ್ಲಿ (ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು) – 639 ರನ್‌
05. ಯಶಸ್ವಿ ಜೈಸ್ವಾಲ್‌ (ರಾಜಸ್ಥಾನ ರಾಯಲ್ಸ್) – 625 ರನ್‌

ಅತಿ ಹೆಚ್ಚು ವಿಕೆಟ್‌ ಪಡೆದ ಐವರು
01. ಮೊಹಮ್ಮದ್‌ ಶಮಿ (ಗುಜರಾತ್‌ ಟೈಟನ್ಸ್‌) – 28 ವಿಕೆಟ್‌
02. ಮೋಹಿತ್‌ ಶರ್ಮಾ (ಗುಜರಾತ್‌ ಟೈಟನ್ಸ್‌) – 27 ವಿಕೆಟ್‌
03. ರಶೀದ್‌ ಖಾನ್ (ಗುಜರಾತ್‌ ಟೈಟನ್ಸ್‌) – 27 ವಿಕೆಟ್‌
04. ಪಿಯೂಶ್‌ ಚಾವ್ಲಾ (ಮುಂಬೈ ಇಂಡಿಯನ್ಸ್‌) – 22 ವಿಕೆಟ್‌
05. ಯಜುವೇಂದ್ರ ಚಾಹಲ್‌ (ರಾಜಸ್ಥಾನ ರಾಯಲ್ಸ್) – 21 ವಿಕೆಟ್‌

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್ | ‘ಮ್ಯಾಚ್ ವಿನ್ನರ್’ ಆದ ದಿನೇಶ್ ಕಾರ್ತಿಕ್: ಆರ್‌ಸಿಬಿಗೆ ರೋಚಕ ಜಯ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ದಿನೇಶ್...

ಐಪಿಎಲ್ | ಅಲ್‌ಝಾರಿ ಜೋಸೆಫ್ ದುಬಾರಿ ಬೌಲಿಂಗ್; ಆರ್‌ಸಿಬಿಗೆ ಗೆಲ್ಲಲು 177 ರನ್‌ಗಳ ಗುರಿ ನೀಡಿದ ಪಂಜಾಬ್

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ನ 6ನೇ ಪಂದ್ಯವು ರಾಯಲ್ ಚಾಲೆಂಜರ್ಸ್‌...

ಐಪಿಎಲ್ ಸಂಪೂರ್ಣ ವೇಳಾಪಟ್ಟಿ ಪ್ರಕಟ: ಫೈನಲ್ ಪಂದ್ಯ ದಕ್ಷಿಣ ಭಾರತದಲ್ಲಿ ಆಯೋಜನೆ

ಬಿಸಿಸಿಐ ಇಂದು ಐಪಿಎಲ್‌ 2024ರ ಎರಡನೇ ಆವೃತ್ತಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ....

ಐಪಿಎಲ್ | ಉಮೇಶ್ ಯಾದವ್ ಸಾಹಸ: ಮುಂಬೈ ವಿರುದ್ಧ ಗುಜರಾತ್‌ಗೆ 6 ರನ್‌ಗಳ ರೋಚಕ ಜಯ

ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್‌ನ 5ನೇ...