2040ರ ವೇಳೆಗೆ ಭಾರತದ ಗಗನಯಾತ್ರಿಯೊಬ್ಬರು ಚಂದ್ರನ ಮೇಲೆ ಕಾಲಿಡುವುದು ಹಾಗೂ 2035ರ ವೇಳೆಗೆ ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದುವುದು ಭಾರತದ ಮಹತ್ವಾಕಾಂಕ್ಷೆ ಯೋಜನೆಗಳಾಗಿವೆ. ಇವೆರೆಡು ಯೋಜನೆಗಳು ಪ್ರಗತಿಯ ಹಾದಿಯಲ್ಲಿವೆ ಎಂದು ಇಸ್ರೋ ಚಂದ್ರಯಾನ ಯೋಜನೆಯ ಯೋಜನಾ ನಿರ್ದೇಶಕರಾದ ಪಿ ವೀರಮುತ್ತುವೇಲ್ ತಿಳಿಸಿದ್ದಾರೆ.
ಊಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಸ್ರೋ ಅಧ್ಯಕ್ಷರು 2040ರ ವೇಳೆಗೆ ಭಾರತದ ಗಗನಯಾತ್ರಿ ಚಂದ್ರನ ಮೇಲೆ ಕಾಲಿಡುವುದು ಹಾಗೂ 2035ರ ವೆಳೆಗೆ ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದುವುದರ ಬಗ್ಗೆ ಈಗಾಗಲೆ ತಿಳಿಸಿದ್ದಾರೆ. ಇವೆರೆಡು ಮಹತ್ವಾಕಾಂಕ್ಷೆ ಯೋಜನೆಗಳನ್ನು ಇಸ್ರೋ ಕೈಗೆತ್ತಿಕೊಂಡಿದೆ. ನಾವು ಈ ಹಾದಿಯಲ್ಲಿ ಮುನ್ನಡೆಯುತ್ತಿದ್ದೇವೆ” ಎಂದು ತಿಳಿಸಿದರು.
ಚಂದ್ರಯಾನ 3ರ ಪ್ರೊಪಲ್ಷನ್ ಮಾಡಲ್ ಅನ್ನು ಭೂಮಿಗೆ ಕರೆತಂದ ಇಸ್ರೋ ಯಶಸ್ಸಿನ ಬಗ್ಗೆ ಮಾತನಾಡಿದ ವೀರಮುತ್ತುವೇಲ್,” ಚಂದ್ರಯಾನ 3ಕ್ಕೆ ಸಂಬಂಧಿಸಿದಂತೆ ಲ್ಯಾಂಡರ್ ಹಾಗೂ ರೋವರ್ ಯೋಜನೆ ಯಶಸ್ವಿಯಾಗಿ ಒಂದು ದಿನ ಪೂರ್ಣಗೊಳಿಸಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಯ ಚುನಾವಣಾ ಬಾಂಡ್ ಮತ್ತು ಕಾರ್ಪೊರೇಟ್ ಕಪ್ಪು ಹಣ
“ಚಂದ್ರಯಾನ 3ರಲ್ಲಿ ನಾವು ಹಾಪ್ ಆನ್ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ನಾವು ಕಕ್ಷೆಗೆ ಇಳಿದ ಅದೇ ಇಂಜಿನ್ಅನ್ನು ಬಳಸಿದ್ದೇವೆ. ನಾವು ಮತ್ತೊಮ್ಮೆ ಒಂದು ಭೂಮಿಯ ದಿನಕ್ಕೆ ಪೇಲೋಡ್ ಅನ್ನು ನಿರ್ವಹಿಸಿದ್ದೇವೆ” ಎಂದು ಇಸ್ರೋ ನಿರ್ದೇಶಕ ಹೇಳಿದರು.
ಪ್ರೊಪಲ್ಷನ್ ಮಾಡಲ್ ಚಂದ್ರನ ಸುತ್ತ ಪರಿಭ್ರಮಿಸಬೇಕಿದ್ದ ಯೋಜನೆಯ ಎಲ್ಲ ಉದ್ದೇಶಗಳನ್ನು ಯಶಸ್ವಿಯಾಗಿ ಪೂರೈಸಿದೆ. “ನಾವು ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಭೂಮಿಯ ಕಕ್ಷೆಗೆ ಮರಳಿ ತಂದಿದ್ದೇವೆ. ಏಕೆಂದರೆ ನಾವು ಪ್ರೊಪಲ್ಷನ್ ಮಾಡ್ಯೂಲ್ನಲ್ಲಿ ಕೆಲವು ಪ್ರೊಪೆಲೆಂಟ್ಗಳನ್ನು ಪಡೆದುಕೊಂಡಿದ್ದೇವೆ ಮತ್ತು ಚಂದ್ರನ ಕಕ್ಷೆಯಿಂದ ಭೂಮಿಯ ಕಕ್ಷೆಗೆ ಯಶಸ್ವಿಯಾಗಿ ತರುವ ಮೂಲಕ ನಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದೇವೆ” ಎಂದು ಪಿ ವೀರಮುತ್ತುವೇಲ್ ಹೇಳಿದರು.