- ರಾತ್ರಿ ವೇಳೆ ಚಾಕು, ಚೂರಿ ತೋರಿಸಿ ದರೋಡೆ ಮಾಡುತ್ತಿದ್ದ ಆರೋಪಿ
- ಮಾ. 29ರಂದು ಸ್ಕ್ರಾಪ್ ಕಾರೊಂದರಲ್ಲಿ ಅನುಮಾನಸ್ಪಾದ ವ್ಯಕ್ತಿಯ ಮೃತದೇಹ ಪತ್ತೆ
ಮನೆಯಲ್ಲಿದ್ದ ಮಕ್ಕಳನ್ನು ಕದ್ದೊಯುತ್ತಿದ್ದ ಆರೋಪಿ ನಂದಿನಿ ಅಲಿಯಾಸ್ ಆಯೇಷಾಳನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ನಂದಿನಿ ಯಾವುದೋ ಒಂದು ಸಂಸ್ಥೆಯ ಬ್ರೋಷರ್ ಹಿಡಿದುಕೊಂಡು ಈ ಸಂಸ್ಥೆಗೆ ಧನ ಸಹಾಯ ಮಾಡಿ ಎಂದು ಜನರ ಮನೆ ಬಾಗಿಲಿಗೆ ತೆರಳಿ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಳು. ಈ ವೇಳೆ, ಮನೆಯವರು ಹಣ ತೆಗೆದುಕೊಂಡು ಬರಲು ಮನೆ ಒಳಗೆ ಹೋದಾಗ, ಮಗು ಅಥವಾ ಮನೆಯಲ್ಲಿರುವ ವಸ್ತುಗಳನ್ನು ಎತ್ತಿಕೊಂಡು ಪರಾರಿಯಾಗುತ್ತಿದ್ದಳು.
ಈ ಹಿಂದೆ, ಸಣ್ಣ ಪುಟ್ಟ ಪ್ರಕರಣಗಳಲ್ಲಿ ನಂದಿನಿ ಅಲಿಯಾಸ್ ಆಯೇಷಾ ಪೊಲೀಸರ ಅತಿಥಿಯಾಗಿದ್ದಳು. ಈಕೆ ಹೆಚ್ಚಾಗಿ ಬುರ್ಖಾ ಧರಿಸಿ ಮನೆಗಳಿಗೆ ತೆರಳುತ್ತಿದ್ದರಿಂದ ಸಿಸಿಟಿವಿಯಲ್ಲೂ ಈಕೆ ಯಾರು ಎಂಬ ಗುರುತುಗಳೂ ಸರಿಯಾಗಿ ಪತ್ತೆಯಾಗುತ್ತಿರಲಿಲ್ಲ ಎನ್ನಲಾಗಿದೆ.
ಮೊಬೈಲ್, ಹಣ ಕದಿಯುತ್ತಿದ್ದ ಈಕೆ, ಇತ್ತೀಚೆಗೆ ರಾತ್ರಿ ವೇಳೆ ಚಾಕು, ಚೂರಿ ತೋರಿಸಿ ದರೋಡೆ ಕೂಡ ಮಾಡುತ್ತಿದ್ದಳು. ಮಕ್ಕಳನ್ನೂ ಕದಿಯುತ್ತಿದ್ದಳು ಎಂದು ಆರೋಪಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಶಿವರಾಮ ಕಾರಂತರ ಆಪ್ತ ಸಹಾಯಕಿ ಮಾಲಿನಿ ಮಲ್ಯ ಇನ್ನಿಲ್ಲ
ಕೆಲವು ದಿನಗಳ ಹಿಂದೆ, ಈಕೆ ಒಂದು ಮಗುವನ್ನು ಕಳ್ಳತನ ಮಾಡಿದ್ದಳು. ಆ ಮಗುವನ್ನು ತನ್ನ ಮನೆಯಲ್ಲಿಯೇ ಇಟ್ಟುಕೊಂಡಿದ್ದಳು. ಒಂದು ತಿಂಗಳ ಮಗುವಿಗೆ ಹಾಲು ಉಣಿಸದೇ ಮಗುವಿಗೆ ಉಪ್ಪಿಟ್ಟು ಕೊಟ್ಟಿದ್ದಳು. ಈ ವೇಳೆ, ಮಗು ಅಳುವುದನ್ನು ಕೇಳಿಸಿಕೊಂಡ ಅಕ್ಕಪಕ್ಕದವರು ಅನುಮಾನಗೊಂಡು ಮನೆಗೆ ನುಗ್ಗಿ ಮಗುವನ್ನು ರಕ್ಷಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕದ್ದ ಮಕ್ಕಳನ್ನು ಯಾರಿಗೆ ಕೊಡುತ್ತಿದ್ದಳು ಅಥವಾ ಏನು ಮಾಡುತ್ತಿದ್ದಳು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸ್ಕ್ರಾಪ್ ಕಾರಿನಲ್ಲಿ ಅನುಮಾನಾಸ್ಪದ ವ್ಯಕ್ತಿಯ ಮೃತದೇಹ ಪತ್ತೆ
ಮಾರ್ಚ್ 29ರಂದು ಬೆಳಗ್ಗೆ ಸ್ಕ್ರಾಪ್ ಕಾರೊಂದರಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಸ್ಥಳೀಯರು ಸುಟ್ಟು ಕರಕಲಾಗಿರುವ ಕಾರೊಂದರಲ್ಲಿ ವ್ಯಕ್ತಿಯ ಶವ ಇರುವುದು ತಿಳಿದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.