ಬೆಂಗಳೂರು ಮಹಿಳೆಗೆ ಆಕಸ್ಮಿಕವಾಗಿ ಪರಿಚಯವಾದ ತಮಿಳುನಾಡು ಮೂಲದ ವ್ಯಕ್ತಿಯೊಬ್ಬ ʼಸ್ನೇಹವನ್ನು ಮುರಿದರೆ ಕೊಲ್ಲುವೆನು. ಇಲ್ಲದಿದ್ದರೆ ಪಾಕಿಸ್ತಾನಕ್ಕೆ ಕಣ್ಮರೆ ಮಾಡುವೆನುʼ ಎಂದು ಆತಂಕ ಹುಟ್ಟುಹಾಕಿದ್ದಲ್ಲದೆ, ತಾನು ಗುಪ್ತಚರ ಪೊಲೀಸ್ ಅಧಿಕಾರಿ ಎಂದು ಬೆದರಿಸುತ್ತಿದ್ದವನ ವಿರುದ್ಧ ಇದೀಗ ಬೆಳ್ಳಂದೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬೆಳ್ಳಂದೂರಿನ ಸುಕನ್ಯಾ(35) (ಹೆಸರು ಬದಲಾಯಿಸಲಾಗಿದೆ), ಖಾಸಗಿ ಕಂಪನಿಯ ಉದ್ಯೋಗಿ. ಆಕೆ ಜುಲೈನಲ್ಲಿ ತಮಿಳುನಾಡಿಗೆ ತೆರಳಿದ್ದಾಗ ಜು.9ರಿಂದ 11ರವರೆಗೆ ಕೊಡೈಕೆನಾಲ್ ಪ್ರವಾಸದಲ್ಲಿ ನರೇಶ್(ಹೆಸರು ಬದಲಾಯಿಸಲಾಗಿದೆ) ಎಂಬುವವನೊಂದಿಗೆ ಸ್ನೇಹ ಬೆಳೆಸಿದ್ದಳು. ಬೆಂಗಳೂರಿಗೆ ಹಿಂದಿರುಗಿದ ಕೆಲವೇ ದಿನಗಳಲ್ಲಿ ಸ್ನೇಹಿತರಾದರು. ಕೆಲವು ವಾರಗಳ ಬಳಿಕ ಆ ವ್ಯಕ್ತಿ ಆಕೆಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದನು.
ಅಲ್ಲದೆ, ನರೇಶ್ ಅಶ್ಲೀಲವಾಗಿ ವರ್ತಿಸುತ್ತಿದ್ದನು. ಸಂಬಂಧ ಮುಂದುವರಿಸಲು ನಿರಾಕರಿಸಿದಾಗ ಅವನು ಸಾರ್ವಜನಿಕವಾಗಿ ದೂರು ಹೇಳಿ, ಹೋಟೆಲ್ ಕೋಣೆಯಲ್ಲಿ ಅವಳನ್ನು ಬಂಧಿಸಿದನು. ಅವಳು ಅವನನ್ನು ತಪ್ಪಿಸಿ ನಂಬರ್ ಬ್ಲಾಕ್ ಮಾಡಿದಾಗ, ನಕಲಿ ಇಮೇಲ್ ಐಡಿ ಮತ್ತು ಫೋನ್ ನಂಬರ್ಗಳ ಮೂಲಕ ಕಿರುಕುಳ ನೀಡಿ, ಅವಳನ್ನು ʼಕಾಲ್ ಗರ್ಲ್ʼ ಎಂದು ಆರೋಪ ಹೊರಿಸಿದನು.
ಇದನ್ನೂ ಓದಿದ್ದೀರಾ? ಉರ್ದು ಸೇರಿ ಭಾಷಾ ಶಿಕ್ಷಕರ ನೇಮಕಾತಿ: ಸರ್ಕಾರ ಮಾತಿಗೆ ತಪ್ಪಿದರೆ ತೀವ್ರ ಹೋರಾಟದ ಎಚ್ಚರಿಕೆ
“ನರೇಶ್ ತಾನು ಪೊಲೀಸ್ ಇಲಾಖೆಯ ನಾರ್ಕೋಟಿಕ್ಸ್ ವಿಭಾಗದವನೆಂದು ಹೇಳುತ್ತಿದ್ದನು” ಎಂದು ಸುಕನ್ಯಾ ಹೇಳಿದರುವ ದೂರಿನ ಅನ್ವಯ ಬೆಳ್ಳಂದೂರು ಪೊಲೀಸರು ಸ್ಟಾಕಿಂಗ್, ಮಹಿಳೆಯ ಮರ್ಯಾದೆಗೆ ಅವಮಾನ ತರುವ ಸನ್ನೆಗಳು ಮತ್ತು ಕ್ರಿಮಿನಲ್ ಬೆದರಿಕೆ ಆರೋಪಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.




