ಹಾವೇರಿ | ಸೆ. 29ರಂದು ಹುಬ್ಬಳ್ಳಿಯ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮನೆ ಎದುರು ಲಕ್ಷ ರೈತರು ಪ್ರತಿಭಟನೆ

Date:

ಇದೇ ಸೆ. 29ರಂದು ಹುಬ್ಬಳ್ಳಿಯ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ನಿವಾಸದ ಎದರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷರು ಚೂನಪ್ಪ ಪೂಜಾರಿ ಹಾಗೂ ರಾಜ್ಯ ಗೌರವಾಧ್ಯಕ್ಷರು ಶಿಶಿಕಾಂತ ಪಡಸಲಗಿ ಗುರುಜಿ ಅವರ ನೇತೃತ್ವದಲ್ಲಿ ಲಕ್ಷ ರೈತರು ಪ್ರತಿಭಟನೆಗೆ ಆಗಮುಸಬೇಕೆಂದು ರೈತ ಮುಖಂಡರು ಕರೆ ನೀಡಿದರು.

- Advertisement -

ಹಾವೇರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಾಧಾನ ಕಾರ್ಯದರ್ಶಿ ರುದ್ರಪ್ಪ ಬಳಿಗಾರ ಮಾತನಾಡಿ, “ಈ ಪ್ರತಿಭಟನೆಯಲ್ಲಿ ನಮ್ಮ ರೈತ ಸಂಘದ ಹಾವೇರಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಹುಬ್ಬಳ್ಳಿಯ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಮನೆ ಮುಂದು ಪ್ರತಿಭಟನೆ ಮಾಡಲಾಗುವುದು” ಎಂದರು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೂಕ್ತ ಸಮಯಕ್ಕಾಗಿ ಕಾಯುತ್ತಲೇ ಇರುವ ಕುಮಾರಸ್ವಾಮಿ!

“ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ, ಅವ್ಯವಹಾರದ ಬಗ್ಗೆ ಜನರ ಮುಂದೆ ಇಡುವುದರಲ್ಲಿ ಯಾವುದೇ ರಾಜಿಯಿಲ್ಲ. ರಾಜ್ಯದಲ್ಲಿನ ಘಟನೆ ಬಗ್ಗೆ ಬಾಯಿ ಮುಚ್ಚಿಕೊಂಡಿರಲು ಆಗಲ್ಲ" ಎಂದಿದ್ದಾರೆ ಕುಮಾರಸ್ವಾಮಿ. ಈ ಬಾರಿಯಾದರೂ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಾರೆಯೇ? ‘ಸ್ಪೋಟಕ ಹೇಳಿಕೆ’,...

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ....

ಬಳ್ಳಾರಿ ಚಲೋ | ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಪಾದಯಾತ್ರೆ:...

ಬಳ್ಳಾರಿ ಚಲೋ ಒಂದೆಡೆ ಎಸ್‌ಟಿ ಮತಗಳನ್ನು ಮರಳಿ ಸೆಳೆಯಲು ಶ್ರೀರಾಮುಲು ಅವರನ್ನು ಮುನ್ನಲೆಗೆ ತರುವ ಬಿಜೆಪಿ ತಂತ್ರವಾದರೆ, ಮತ್ತೊಂದೆಡೆ ವಿಜಯೇಂದ್ರ ನಾಯಕತ್ವದ ಶಕ್ತಿ ಪ್ರದರ್ಶನ ಮತ್ತು ಮೈತ್ರಿ ಪಕ್ಷ ಜೆಡಿಎಸ್‌ ಪಾದಯಾತ್ರೆಗೆ ಗೈರಾಗಿರುವಂತಹ...

“ಪ್ರತಿಭಟನೆಗೆ ಮುಖ್ಯ ಕಾರಣ, ಕೇಂದ್ರ ಸರಕಾರ ಒಂಬತ್ತು ವರ್ಷಗಳ ಹಿಂದೆ ಸಕ್ಕರೆಗೆ ರೂ31 ಎಮ್.ಎಸ್.ಪಿ ಘೋಷಣೆ ಮಾಡಿತ್ತು. ಇದುವರೆಗೂ ಇದು ರಿವೈಜ್ಡ್ ಆಗಿರುವುದಿಲ್ಲ. ಪ್ರತಿ ವರ್ಷ ಎಮ್.ಎಸ್.ಪಿ ಘೋಷಣೆ ಮಾಡುತ್ತ ಬಂದಿದ್ದರೆ, ಇವತ್ತು ಸಕ್ಕರೆಗೆ 50ರಿಂದ 55ರೂ ವರೆಗೆ ಹೆಚ್ಚಿಗೆ ಆಗಬೇಕಿತ್ತು. ಆದರೆ ಇವತ್ತು ಸಕ್ಕರೆ ಬೆಲೆ 31ರೂ ಇದೆ. ಇದರಿಂದ ಕಬ್ಬು ಉತ್ಪಾದಕರಿಗೆ ಕಂಪನಿಯವರು ಕೊಡುವೆ ಬೆಲೆಯಲ್ಲಿ ವ್ಯತ್ಯಾಸ ಆಗುತ್ತಿದೆ. ಹಾಗಾಗಿ  ಪ್ರಲ್ಹಾದ್ ಜೋಶಿ ಅವರು ಆಹಾರ ಮಂತ್ರಿ ಆಗಿರುವುದರಿಂದ, ಎಮ್.ಎಸ್.ಪಿ ಘೋಷಣೆ ಮಾಡುವ ಅಧಿಕಾರ ಅವರಿಗೆ ಇರುವುದರಿಂದ, ಕಬ್ಬಿಗೆ ಇಳುವರಿ, ಒಳ್ಳೆ ಬೆಲೆ ಸಿಗಬೇಕೆಂದರೆ ಸಕ್ಕರೆಗೆ 50-55ರೂ ಎಮ್.ಎಸ್.ಪಿ ಘೋಷಣೆ ಮಾಡಬೇಕು” ಎಂದು ಒತ್ತಡ ಮಾಡುತ್ತಿದ್ದೇವೆ. 

“ಸ್ವಾಮಿನಾಥನ್ ಆಯೋಗವನ್ನು ಯತಾವತ್ತಾಗಿ ಶಾಸನ ಬದ್ಧಗೊಳಿಸಬೇಕು. ಎಥನಾಲ್ ಅನ್ನು ಸರಕಾರವೇ ಖರೀದಿಸಬೇಕು. ಸಕ್ಕರೆ ಎಮ್.ಎಸ್.ಪಿ ಜಾಸ್ತಿ ಮಾಡಿದರೇ ಇವೆಲ್ಲವೂ ಆಗಬಹುದು” ಎಂದಯ ಹೇಳಿದರು.

“ಈ ಎಲ್ಲ ಬೇಡಿಕೆಗಳನ್ನು ಇಟ್ಟುಕೊಂಡು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಹುಬ್ಬಳ್ಳಿಯ ಪ್ರಲ್ಹಾದ್ ಜೋಶಿ ಅವರ ನಿವಾಸದ ಎದುರು ಹಾವೇರಿ ಜಿಲ್ಲೆಯಿಂದ ಇಪ್ಪತ್ತೈದು ಸಾವಿರ ಜನರು ಹೋರಾಟ ಭಾಗವಹಿಸುತ್ತವೆ” ಎಂದು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹನಮಂತಪ್ಪ ಹುಚ್ಚಣ್ಣನವರ ಮಾತನಾಡಿ, “ಹಾವೇರಿ ಜಿಲ್ಲೆಗೆ ಸಾಕಷ್ಟು ಅನ್ಯಾಯವಾಗುತ್ತಿದೆ. ಕಬ್ಬಿನ ದರಕ್ಕೆ ಕಳೆದ ವರ್ಷ ಬೆಳಗಾವಿ ಜಿಲ್ಲೆಗೆ 3300ರೂ ಕೊಟ್ಟರು. ಆದರೆ ಹಾವೇರಿ ಜಿಲ್ಲೆಗೆ 2800ರೂ ಕೊಟ್ಟರು. ಕಬ್ಬಿನ ದರದಲ್ಲಿ ಜಿಲ್ಲೆ ಜಿಲ್ಲೆಗೆ ವ್ಯತ್ಯಾಸ ಕಂಡು ಬಂದಿದೆ. ಇದನ್ನು ಖಂಡಿಸಿ, ನಮ್ಮ ರೈತ ಸಂಘದ ನೇತೃತ್ವದಲ್ಲಿ ಹುಬ್ಬಳ್ಳಿಯ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಮನೆ ಎದುರು ಪ್ರತಿಭಟನೆ ಮಾಡುತ್ತಿದ್ದು, ಆ ಪ್ರತಿಭಟನೆಗೆ  ಎಲ್ಲ ರೈತ ಬಾಂಧವರು ಹೆಚ್ವಿನ ಸಂಖ್ಯೆಯಲ್ಲಿ ಬರಬೇಕು” ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಹನಮಂತಪ್ಪ ಸಿದ್ದಾಪೂರು, ಜಿಲ್ಲಾ ಗೌರವಾಧ್ಯಕ್ಷರು ಈರಪ್ಪ ಮುದಿಯಪ್ಪನವರ, ರಟ್ಟಿಹಳ್ಳಿ ತಾಲೂಕು ಅಧ್ಯಕ್ಷರು ನಾಗರಾಜ ನನ್ನೋರೆ, ಶಿಗ್ಗಾಂವಿ ತಾಲೂಕು ಅಧ್ಯಕ್ಷ ಶಿವಾನಂದ ಜಡಿಮಠ, ಜಿಲ್ಲಾ ಸಂಚಾಲಕರು ದೇಸವರಾಜ ದೊಡ್ಡಮನಿ, ಹಾವೇರಿ ತಾಲೂಕು ಅಧ್ಯಕ್ಷರು ಶಿವನಗೌಡ ಗಾಜಿಗೌಡ್ರ, ಬಸನಗೌಡ ಪಾಟೀಲ್,  ರೈತ ಮುಖಂಡರು ಮಂಜುನಾಥ ಮಾಳಗಿ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಪರಿಸರ ರಕ್ಷಿಸಿದರೆ ಮಾನವ ಸಮಾಜದ ರಕ್ಷಣೆ: ಮಲ್ಲಿಕಾರ್ಜುನ್ ಎಂಎಸ್

ಭೂಮಿ ತಾಯಿಯಿದ್ದಂತೆ. ಗಿಡಮರಗಳನ್ನು ನೆಟ್ಟು ಪರಿಸರವನ್ನು ರಕ್ಷಿಸಿದರೆ ಅದು ಮಾನವ ಸಮಾಜವನ್ನು...

ಕಲಬುರಗಿ | ಆಧಾರ್ ತಿದ್ದುಪಡಿಗೆ ಜನರ ಪರದಾಟ: ಹೆಚ್ಚುವರಿ ಕೇಂದ್ರ ತೆರೆಯಲು ಆಗ್ರಹ

ಜೇವರ್ಗಿ ಹಾಗೂ ಯಡ್ರಾಮಿ ಅವಳಿ ತಾಲೂಕಿನ ಗ್ರಾಮೀಣ ಪ್ರದೇಶಗಳ ಜನರು ಆಧಾರ್...

ಯಾದಗಿರಿ | ದಲಿತ ಸಭೆಯೋ, ಚಹಾ, ಫೋಟೋ ಕೂಟವೋ? ಅಧಿಕಾರಿಗಳ ವಿರುದ್ಧ ವಿಶ್ವ ನಾಟೇಕಾರ್ ಕಿಡಿ

ದಲಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆ, ಸಾಮಾಜಿಕ ಅಸ್ಪೃಶ್ಯತೆ, ಭೂಮಿ ಹಾಗೂ ಮೂಲಭೂತ...

​ಚಿಂತಾಮಣಿ | ಮಳೆ ಮುನ್ಸೂಚನೆ, ಕಲ್ಯಾಣ ಮಂಟಪದ ಅಭಾವ:ಸೆ.18ರ ಜೆಡಿಎಸ್ ಬೃಹತ್ ಸಮಾವೇಶ ಚಿಂತಾಮಣಿಗೆ ಸ್ಥಳಾಂತರ

ನಗರದ ಹೊರವಲಯದ ಜೆ.ಕೆ.ಭವನದಲ್ಲಿ ಇಂದು ತುರ್ತು ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ...