1% ಕುಬೇರರ ಬಳಿಯಿದೆ ಭಾರತದ 60% ಸಂಪತ್ತು: ಬರ್ನ್‌ಸ್ಟೈನ್ ವರದಿ

Date:

ಭಾರತದ ಒಟ್ಟು ಸಂಪತ್ತಿನಲ್ಲಿ 60% ಮತ್ತು ದೇಶದ ಒಟ್ಟು ಹಣಕಾಸು ಆಸ್ತಿಗಳಲ್ಲಿ 70% ಸಂಪತ್ತನ್ನು ಭಾರತದ ಕೇವಲ 1% ಕುಟುಂಬಗಳು ನಿಯಂತ್ರಿಸುತ್ತಿವೆ. ಭಾರತದ ಬಹುತೇಕ ಆರ್ಥಿಕ ಆಸ್ತಿಯು 1% ಕುಟುಂಬಗಳ ಬಳಿ ಇದೆ ಎಂದು ಬರ್ನ್‌ಸ್ಟೈನ್‌ ವರದಿ ಹೇಳಿದೆ.

- Advertisement -

ಖಾಸಗಿ ಹಣಕಾಸು ನಿರ್ವಹಣೆ ಸಂಸ್ಥೆಯಾಗಿರುವ ‘ಬರ್ನ್‌ಸ್ಟೈನ್‌’ ತನ್ನ ಹೊಸ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಅದರಲ್ಲಿ; ಭಾರತದ ಅತ್ಯಂತ ಶ್ರೀಮಂತ ಕುಟುಂಬಗಳನ್ನು ‘ಉಬರ್ ರಿಚ್’ (ಕುಬೇರರು) ಎಂದು ಕರೆದಿದೆ. ಈ 1% ಇರುವ ಕುಬೇರರು ಭಾರತದ ಒಟ್ಟು ಸಂಪತ್ತಿನಲ್ಲಿ 60% ಪಾಲು ಹೊಂದಿದ್ದಾರೆ. ಇವರ ಬಹುತೇಕ ಹೂಡಿಕೆಗಳು ರಿಯಲ್‌ ಎಸ್ಟೇಟ್‌ ಮತ್ತು ಚಿನ್ನದಲ್ಲಿವೆ ಎಂದು ವಿವರಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಅಸ್ಸಾಂ, ಬಿಹಾರ ಕತ್ತಲಲ್ಲಿ ಮುಳುಗಿದಾಗ ಮೋದಿಗೆ ‘ಆಶೀರ್ವಾದ್ ಕಾ...

ದೆಹಲಿಯಲ್ಲಿ ಕಟ್ಟಡ ಕುಸಿದು ವಿದ್ಯಾರ್ಥಿಗಳು ಹೆಣವಾದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆಘಾತಗೊಂಡು ಎಳೆ ಜೀವಗಳು ಸಾವಿನ ದಾರಿ ಹಿಡಿದಾಗ, ತಮ್ಮ ಹಕ್ಕುಗಳಿಗಾಗಿ ದೇಶದ ಯುವಜನ ಬೀದಿಗಿಳಿದಾಗ, ಕೊನೆಗೆ ನೈಸರ್ಗಿಕ ವಿಕೋಪದಿಂದ ದೇಶದ ಜನ...

ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ –...

ಮತದಾನಕ್ಕೂ ಮುನ್ನ ಎದುರಾಳಿಯೇ ಕಣದಿಂದ ಮಾಯವಾದರೆ, ಅದನ್ನು ಚುನಾವಣೆ ಎನ್ನಬಹುದೇ? ನಂದಿಗ್ರಾಮದ ಬೆಳವಣಿಗೆಗಳು 2027ರ ಉತ್ತರ ಪ್ರದೇಶ ಚುನಾವಣೆಗೂ ಗಂಭೀರ ಸವಾಲು ಒಡ್ಡುವಂತಿವೆ ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ನಂದಿಗ್ರಾಮದ...

ಡಿಜಿಟಲ್ ಇಂಡಿಯಾಕ್ಕೆ ಹಿನ್ನಡೆ; ಮೋದಿ ನೀತಿಯಿಂದ ಮತ್ತೆ ನಗದಿನತ್ತ...

ಸರ್ಕಾರದ ಈ ನಿರ್ಧಾರ ಜನಸಾಮಾನ್ಯರಿಗೆ ಎಷ್ಟು ಕಿರಿಕಿರಿ ಉಂಟುಮಾಡಿದೆ ಎಂಬುದನ್ನು 'ಲೋಕಲ್ ಸರ್ಕಲ್ಸ್' (Local Circles) ನಡೆಸಿದ 32,000ಕ್ಕೂ ಹೆಚ್ಚು ಜನರ ಸಮೀಕ್ಷೆ ಬಟಾಬಯಲು ಮಾಡಿದೆ. ಸಮೀಕ್ಷೆಯ ಪ್ರಕಾರ, ಕೇವಲ ಶೇ.17ರಷ್ಟು ವರ್ತಕರು...

ಭಾರತದ ಒಟ್ಟು ಸಂಪತ್ತು 19.6 ಲಕ್ಷ ಕೋಟಿ ಡಾಲರ್‌ ಎಂದು ಅಂದಾಜಿಸಲಾಗಿದೆ. ಇದರಲ್ಲಿ, 59% (11.6 ಲಕ್ಷ ಕೋಟಿ ಡಾಲರ್‌) ಸಂಪತ್ತು ಕೇವಲ 1% ಶ್ರೀಮಂತರ ಬಳಿ ಕೇಂದ್ರೀಕರಣಗೊಂಡಿದೆ ಎಂದು ವರದಿ ಹೇಳಿದೆ.

ಈ ಕುಬೇರರು ತಮ್ಮ ಒಟ್ಟು ಆಸ್ತಿಗಳ ಪೈಕಿ ಸುಮಾರು 55%ಗೂ (8.9 ಲಕ್ಷ ಕೋಟಿ ಡಾಲರ್‌) ಸಂಪತ್ತನ್ನು ರಿಯಲ್‌ ಎಸ್ಟೇಟ್‌, ಚಿನ್ನ ಹಾಗೂ ಪ್ರವರ್ತಕರ ಶೇರು ಬಂಡವಾಳ ಅಥವಾ ನಗದು ಹಿಡುವಳಿಗಳಂತಹ ಬಂಡವಾಳಗಳಲ್ಲಿವೆ ಹೂಡಿಕೆ ಮಾಡಿವೆ ಎಂದು ವರದಿ ತಿಳಿಸಿದೆ.

ಈ ಲೇಖನ ಓದಿದ್ದೀರಾ?: ಭಯೋತ್ಪಾದನಾ ಆರೋಪಿಯನ್ನು ಹಿಂದುತ್ವದ ನಾಯಕಿ ಮಾಡಿದ ಬಿಜೆಪಿ

ಶ್ರೀಮಂತ ಕುಟುಂಬಗಳು ಹೂಡಿಕೆ ಮಾಡಿರುವ ಒಟ್ಟು ಬಂಡವಾಳ 8.9 ಲಕ್ಷ ಕೋಟಿ ಡಾಲರ್‌ಗಳ ಪೈಕಿ, ಕೇವಲ 2.7 ಲಕ್ಷ ಕೋಟಿ ಡಾಲರ್‌ಗಳು ಮಾತ್ರವೇ ಮ್ಯೂಚ್ಯುವಲ್‌ ಫಂಡ್‌ಗಳು, ಶೇರುಗಳು, ವಿಮೆ, ಬ್ಯಾಂಕ್‌ ಹಾಗೂ ಸರ್ಕಾರಿ ಠೇವಣಿ ರೀತಿಯ ನಿರ್ವಹಿಸಬಹುದಾದ ಅಥವಾ ಮರುಹಂಚಿಕೆ ಮಾಡಬಹುದಾದ ಹಣಕಾಸು ಸ್ವತ್ತುಗಳಲ್ಲಿ ಹೂಡಿಕೆಯಾಗಿದೆ ಎಂಬುದನ್ನು ವರದಿ ಬಹಿರಂಗಪಡಿಸಿದೆ.

ಸಂಪತ್ತಿನ ಕ್ರೋಢೀಕರಣದಿಂದಾಗಿ ಅಸಮಾನತೆ ಹೆಚ್ಚಾಗಿದ್ದು, ಭಾರತದಲ್ಲಿನ ವ್ಯಾಪಕ ರಚನಾ ಪ್ರವೃತ್ತಿಯನ್ನು ಈ ವರದಿಯು ಎತ್ತಿ ತೋರಿಸಿದೆ. ದೇಶದ 99% ಕುಟುಂಬಗಳು ಆದಾಯ ಮತ್ತು ಆಸ್ತಿಯಲ್ಲಿ ಸಣ್ಣ ಪಾಲನ್ನು ಮಾತ್ರವೇ ಹೊಂದಿವೆ ಎಂದು ಈ ವರದಿಯು ಒತ್ತಿ ಹೇಳಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಸ್ತುವನ್ನು ಸುಡುವುದರಿಂದಷ್ಟೇ ‘ಚರಸ್’ ಎಂದು ಸಾಬೀತುಪಡಿಸಲಾಗದು: 22 ವರ್ಷಗಳ ಬಳಿಕ ಇಬ್ಬರು ಖುಲಾಸೆ

ವಶಪಡಿಸಿಕೊಂಡ ವಸ್ತುವಿನ ಒಂದು ಸಣ್ಣ ಭಾಗವನ್ನು ಸುಟ್ಟು ನೋಡುವುದರಿಂದ ಮಾತ್ರವೇ ಅದು...

ಲಕ್ಷ್ಮಣ್ @ 89: ‘ಅಚಲ’ ಆಶಾವಾದಿ – ಹಸಿರು ಕಾವಲುಗಾರನ ಕಥನ

89ನೇ ವಸಂತಕ್ಕೆ ಕಾಲಿಡುತ್ತಿರುವ ಎ.ಸಿ. ಲಕ್ಷ್ಮಣ್ ಅವರು ಭರವಸೆ ಮತ್ತು ಆಶಾವಾದದ...

ವಲಸೆ ತಡೆಗೆ ‘ರುದ್ರಾಕ್ಷಿ ಕೃಷಿ’ ಯೋಜನೆಗೆ ಮುಂದಾದ ಉತ್ತರಾಖಂಡ ಸರ್ಕಾರ; 1.5 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯವೇ?

ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳಿಂದ ಜನರು ನೌಕರಿ ಮತ್ತು ಜೀವನೋಪಾಯ ಅರಸಿ ನಗರಗಳಿಗೆ...