ಆಕ್ಸ್‌ಫಾಮ್‌ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಿಬಿಐಗೆ ಸೂಚನೆ ನೀಡಿದ ಗೃಹ ಸಚಿವಾಲಯ

Date:

2018ರಿಂದ 2022ರ ನಡುವೆ ಕೇಂದ್ರ ಸರ್ಕಾರ ಆಕ್ಸ್‌ಫಾಮ್ ಸೇರಿ 1,827 ಸರ್ಕಾರೇತರ ಸಂಸ್ಥೆಗಳ ಎಫ್‌ಸಿಆರ್‌ಎ ನವೀಕರಣವನ್ನು ನಿಯಮಗಳ ಉಲ್ಲಂಘನೆ ಕಾರಣ ನೀಡಿ ರದ್ದುಗೊಳಿಸಿದೆ.

- Advertisement -

ಜಾಗತಿಕ ಮಟ್ಟದ ಸರ್ಕಾರೇತರ ಸಂಸ್ಥೆಯಾಗಿರುವ ‘ಆಕ್ಸ್‌ಫಾಮ್ ಇಂಡಿಯಾ’ದ ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ ನೋಂದಣಿ (ಎಫ್‌ಸಿಆರ್‌ಎ) ನವೀಕರಣ ಮಾಡಲು ಕೇಂದ್ರ ಸರ್ಕಾರ ನಿರಾಕರಿಸಿದ ಎರಡು ವರ್ಷಗಳ ನಂತರ ಕಾನೂನು ಕ್ರಮ ಕೈಗೊಳ್ಳಲೂ ಮುಂದಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮೈಕೆಲ್ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್ ಮಟ್ಟದಿಂದ...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

ಗುರುವಾರ (ಏಪ್ರಿಲ್ 6) ಕೇಂದ್ರ ಗೃಹಸಚಿವಾಲಯ ಆಕ್ಸ್‌ಫಾಮ್ ಸಂಸ್ಥೆಯ ಎಫ್‌ಸಿಆರ್‌ಎ ಉಲ್ಲಂಘನೆಗಳ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿದೆ.

ಕಳೆದ ಮಾರ್ಚ್‌ನಲ್ಲಿಯೂ ಗೃಹಸಚಿವಾಲಯ ಸರ್ಕಾರೇತರ ಸಂಸ್ಥೆಯೊಂದರ ವಿರುದ್ಧ ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು. ಮಾರ್ಚ್‌ನಲ್ಲಿ ಲೇಖಕ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಹರ್ಷ್ ಮಂದರ್ ನೇತೃತ್ವದ  ಸರ್ಕಾರೇತರ ಸಂಸ್ಥೆ ‘ಅಮನ್ ಬಿರಾದರಿ’ ವಿರುದ್ಧವೂ ಎಫ್‌ಸಿಆರ್‌ಎ ಉಲ್ಲಂಘನೆ ಆರೋಪದಲ್ಲಿ ಸಿಬಿಐ ತನಿಖೆಗೆ ಆದೇಶಿಸಲಾಗಿತ್ತು.

“2018ರಿಂದ 2022ರ ನಡುವೆ ಕೇಂದ್ರ ಸರ್ಕಾರ 1,827 ಸರ್ಕಾರೇತರ ಸಂಸ್ಥೆಗಳ ಎಫ್‌ಸಿಆರ್‌ಎ ನವೀಕರಣವನ್ನು ನಿಯಮಗಳ ಉಲ್ಲಂಘನೆ ಕಾರಣದಲ್ಲಿ ರದ್ದುಗೊಳಿದೆ” ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಕಳೆದ ತಿಂಗಳು ರಾಜ್ಯಸಭೆಗೆ ಉತ್ತರಿಸಿದ್ದರು.

ಈ ಬಾರಿ ಗೃಹ ಸಚಿವಾಲಯದ ಸಿಬ್ಬಂದಿ ಮಾಧ್ಯಮಗಳಿಗೆ ನೀಡಿದ ವಿವರಗಳ ಪ್ರಕಾರ, “ಎಫ್‌ಸಿಆರ್‌ಎ 2010ರ ಅಡಿಯಲ್ಲಿ ಆಕ್ಸ್‌ಫಾಮ್‌ ಇಂಡಿಯಾ ಸಾಮಾಜಿಕ ಚಟುವಟಿಕೆಗಳಿಗಾಗಿ ನೋಂದಣಿ ಮಾಡಿಕೊಂಡಿತ್ತು. 2021 ಡಿಸೆಂಬರ್ 31ರವರೆಗೆ ಅವರ ನೋಂದಣಿಗೆ ಮಾನ್ಯತೆಯಿತ್ತು. ಈ ಸಂದರ್ಭದಲ್ಲಿ ನಿಯಮಗಳ ಉಲ್ಲಂಘನೆ ಕಂಡುಬಂದಿರುವುದರಿಂದ ಕಾನೂನು ಕ್ರಮ ಕೈಗೊಳ್ಳಲು ಗೃಹ ಸಚಿವಾಲಯ ಸಿಬಿಐಗೆ ಸೂಚಿಸಿದೆ.”

“ಎಫ್‌ಸಿಆರ್‌ಎ, 2020 ಬಂದ ನಂತರವೂ ಆಕ್ಸ್‌ಫಾಮ್ ಇಂಡಿಯಾ ವಿವಿಧ ಸಂಸ್ಥೆಗಳಿಗೆ ವಿದೇಶಿ ದೇಣಿಗೆ ವರ್ಗಾವಣೆಗಳನ್ನು ಮುಂದುವರಿಸಿರುವುದು ಗೃಹ ಸಚಿವಾಲಯದ ಗಮನಕ್ಕೆ ಬಂದಿದೆ. ಎಫ್‌ಸಿಆರ್‌ಎ 2020 ಅಂತಹ ವರ್ಗಾವಣೆಯನ್ನು ನಿಷೇಧಿಸಿದೆ. 2020 ಸೆಪ್ಟೆಂಬರ್ 29ರಂದು ತಿದ್ದುಪಡಿ ಜಾರಿಗೆ ಬಂದಿತ್ತು. ಆದರೆ, ಆಕ್ಸ್‌ಫಾಮ್ ಇಂಡಿಯಾ ಎಫ್‌ಸಿಆರ್‌ಎ 2010 ನಿಯಮಗಳನ್ನು ಉಲ್ಲಂಘಿಸಿ ಅನೇಕ ಸರ್ಕಾರೇತರ ಸಂಸ್ಥೆಗಳಿಗೆ ಹಣಕಾಸು ವರ್ಗಾವಣೆ ಮಾಡಿದೆ” ಎಂದು ಗೃಹ ಸಚಿವಾಲಯ ಹೇಳಿದೆ.

ಕಳೆದ ವರ್ಷ ಆದಾಯ ತೆರಿಗೆ ಇಲಾಖೆ ಆಕ್ಸ್‌ಫಾಮ್ ಇಂಡಿಯಾದ ಆವರಣಗಳಲ್ಲಿ ‘ಪರಿಶೀಲನೆ’ ನಡೆಸಿತ್ತು. “ಆದಾಯ ತೆರಿಗೆ ಇಲಾಖೆಯ ಪರಿಶೀಲನೆಯಲ್ಲಿ ಸಿಕ್ಕ ಇಮೇಲ್‌ಗಳಲ್ಲಿ ಆಕ್ಸ್‌ಫಾಮ್ ಇಂಡಿಯಾ ಎಫ್‌ಸಿಆರ್‌ಎ, 2020 ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ. ವಿದೇಶಿ ಸಂಘಟನೆಗಳು ತಮ್ಮ ವಿದೇಶಿ ನೀತಿಯ ಸಾಧನವಾಗಿ ಆಕ್ಸ್‌ಫಾಮ್ ಇಂಡಿಯಾಗೆ ಹಣಕಾಸು ನೀಡುತ್ತಾ ಬಂದಿರುವುದು ಐಟಿ ಪರಿಶೀಲನೆಯಲ್ಲಿ ಪತ್ತೆಯಾಗಿದೆ” ಎಂದು ಗೃಹ ಸಚಿವಾಲಯ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಈ ಸುದ್ದಿ ಓದಿದ್ದೀರಾ?:ಈ ದಿನ ಸಂಪಾದಕೀಯ | ಕಪ್ಪು ಅಧ್ಯಾಯಗಳ ತಿಪ್ಪೆಗಳಿವೆ… ಯಾವ ರಂಗೋಲಿ ಬಿಡಿಸಿ ಮುಚ್ಚುವಿರಿ?

ಇದೇ ಫೆಬ್ರವರಿ 13ರಂದು ದೆಹಲಿ ಹೈಕೋರ್ಟ್ ಆಕ್ಸ್‌ಫಾಮ್ ಇಂಡಿಯಾದ ಎಫ್‌ಸಿಆರ್‌ಎ ನವೀಕರಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರದ ನಿಲುವನ್ನು ಕೇಳಿತ್ತು. 2021 ಡಿಸೆಂಬರ್ 22ರಂದು ಕೇಂದ್ರ ಗೃಹ ಸಚಿವಾಲಯ ನವೀಕರಣ ಅರ್ಜಿಯನ್ನು ನಿರಾಕರಿಸಿದ ನಂತರ ಆಕ್ಸ್‌ಫಾಮ್ ಇಂಡಿಯಾ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿತ್ತು.

ನವೀಕರಣದ ಬಗ್ಗೆ ಸಕಾರಣ ಕೊಡುವಂತೆ ಹೈಕೋರ್ಟ್ ಕೇಂದ್ರಕ್ಕೆ ಸೂಚಿಸಿತ್ತು. ನಂತರ 2022 ಡಿಸೆಂಬರ್ 1ರಂದು ಕೇಂದ್ರ ಎಫ್‌ಸಿಆರ್‌ಎ ಉಲ್ಲಂಘನೆ ಕಾರಣ ನೀಡಿ ನವೀಕರಣ ಅರ್ಜಿ ತಿರಸ್ಕರಿಸಿತ್ತು.

ಆಕ್ಸ್‌ಫಾಮ್ ಇಂಡಿಯಾದ ವೆಬ್‌ತಾಣದ ಪ್ರಕಾರ 21 ಜಾಗತಿಕ ಆಕ್ಸ್‌ಫಾಮ್ ಸಂಘಟನೆಗಳ ಭಾಗವಾಗಿ ಭಾರತದಲ್ಲಿ ಕೆಲಸ ಮಾಡುತ್ತಿದೆ. 2008ರಲ್ಲಿ ಭಾರತದಲ್ಲಿ ಸ್ವತಂತ್ರ ಸರ್ಕಾರೇತರ ಸಂಸ್ಥೆಯಾಗಿ ಪರಿವರ್ತನೆಗೊಂಡಿತ್ತು.

ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರ, ಛತ್ತೀಸ್‌ಗಢ, ಅಸ್ಸಾಂ ಮತ್ತು ಒಡಿಶಾಗಳಂತಹ ಆರು ಅತೀ ಬಡ ರಾಜ್ಯಗಳಲ್ಲಿ ಆಕ್ಸ್‌ಫಾಮ್ ಇಂಡಿಯಾ ಮಾನವೀಯ ಚಟುವಟಿಕೆ ನಡೆಸುತ್ತಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದ ಖಜಾನೆ ಖಾಲಿ, ಆದರೂ ಪ್ರಧಾನಿ ಹುಟ್ಟುಹಬ್ಬಕ್ಕೆ ಕೋಟಿ ಕೋಟಿ ಪೋಲು: ತೇಜಸ್ವಿ ಯಾದವ್ ಆರೋಪ

ಬಿಹಾರದಲ್ಲಿ ತೀವ್ರ ಪ್ರವಾಹ ಪರಿಸ್ಥಿತಿಯಿಂದಾಗಿ ಲಕ್ಷಾಂತರ ಜನರು ತೊಂದರೆಯಲ್ಲಿರುವಾಗ ಮತ್ತು ರಾಜ್ಯ...

ಹಿರಿಯ ಪತ್ರಕರ್ತೆ ಪಾಯಲ್ ಮೆಹ್ತಾ ಅಕಾಲಿಕ ನಿಧನ: ಪ್ರಧಾನಿ ಮೋದಿ, ರಾಹುಲ್ ಗಾಂಧಿ ಸೇರಿದಂತೆ ಗಣ್ಯರ ಸಂತಾಪ

ಸಿಎನ್‌ಎನ್-ನ್ಯೂಸ್18 ವಾಹಿನಿಯ ಹಿರಿಯ ರಾಜಕೀಯ ಪತ್ರಕರ್ತೆ ಪಾಯಲ್ ಮೆಹ್ತಾ (46) ಅವರು...

ಬಿಹಾರ MLC ಚುನಾವಣೆ: 5 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಪ್ರಶಾಂತ್ ಕಿಶೋರ್ ಜನ ಸುರಾಜ್ ಪಾರ್ಟಿ

ಬಿಹಾರ ವಿಧಾನ ಪರಿಷತ್ತಿನ (ಎಂಎಲ್‌ಸಿ) ಮುಂಬರುವ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ: ರಾಜಕೀಯ ಲಾಭ ಸಿಗುತ್ತಾ?

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು...