ಏಕದಿನ ಸರಣಿ; ಸೋಲಿನ ದಾಖಲೆ ಬರೆದ ಭಾರತ!

Date:

  • 2 ವರ್ಷಗಳಲ್ಲಿ ಭಾರತಕ್ಕೆ ಎದುರಾದ 3ನೇ 10 ವಿಕೆಟ್ ಸೋಲು
  • 234 ಎಸೆತ‌ ಬಾಕಿ ಉಳಿಸಿ ನಿರ್ಣಾಯಕ ಪಂದ್ಯ ಗೆದ್ದ ಆಸ್ಟ್ರೇಲಿಯ

ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ, 10 ವಿಕೆಟ್‌ಗಳ ಅಂತರದ ಹೀನಾಯ ಸೋಲು ಅನುಭವಿಸಿದೆ.

ವಿಶಾಖಪಟ್ಟಣದಲ್ಲಿ ನಡೆದ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಭಾರತ ಮುಂದಿಟ್ಟ 117 ರನ್‌ಗಳ ಸುಲಭ ಸವಾಲನ್ನು ಪ್ರವಾಸಿ ಪಡೆ, ಕೇವಲ 11 ಓವರ್‌ಗಳಲ್ಲಿ (121 ರನ್) ಯಾವುದೇ ವಿಕೆಟ್‌ ನಷ್ಟವಿಲ್ಲದೆ ಚೇಸ್‌ ಮಾಡಿತು.‌

ಅತಿ ಹೆಚ್ಚು ಓವರ್‌ಗಳನ್ನು ಬಾಕಿ ಉಳಿಸಿಕೊಂಡು (234 ಎಸೆತ) ಟೀಮ್‌ ಇಂಡಿಯಾ ಸೋತ ಪಂದ್ಯ ಎಂಬ ಕೆಟ್ಟ ದಾಖಲೆ ಭಾನುವಾರ ದಾಖಲಾಗಿದೆ. ಮತ್ತೊಂದೆಡೆ ಅತಿ ಹೆಚ್ಚು ಓವರ್‌ಗಳನ್ನು ಬಾಕಿ ಉಳಿಸಿಕೊಂಡು ಆಸೀಸ್‌ ಪಡೆ ದಾಖಲಿಸಿದ ಮೂರನೇ ಅತಿದೊಡ್ಡ ಗೆಲವು ಇದಾಗಿದೆ.

ತವರು ನೆಲದಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ ದಾಖಲಿಸಿದ ಕನಿಷ್ಠ ಮೊತ್ತ ಮತ್ತು ಮೊದಲು ಬ್ಯಾಟ್‌ ಮಾಡುವ ವೇಳೆ ಟೀಮ್‌ ಇಂಡಿಯಾ ಒಟ್ಟುಗೂಡಿಸಿದ ಎರಡನೇ ಕನಿಷ್ಠ ಮೊತ್ತ ಇದಾಗಿದೆ.

2019ರಲ್ಲಿ ಹ್ಯಾಮಿಲ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧದ ನ್ಯೂಜಿಲೆಂಡ್‌ ಗೆಲುವಿನ ದಾಖಲೆಯನ್ನು ಆಸ್ಟ್ರೇಲಿಯ ಹಿಂದಿಕ್ಕಿದೆ. ಅಂದಿನ ಪಂದ್ಯದಲ್ಲಿ ಭಾರತ ಮುಂದಿಟ್ಟಿದ 92 ರನ್‌ಗಳ ಗೆಲುವಿನ ಗುರಿಯನ್ನು ಆತಿಥೇಯ ಕಿವೀಸ್‌ ಪಡೆ, 14.4 ಓವರ್‌ಗಳಲ್ಲಿ ಬೆನ್ನಟ್ಟಿತ್ತು. ಇದೀಗ ಆ ದಾಖಲೆಯನ್ನು ಸ್ಟೀವ್‌ ಸ್ಮಿತ್‌ ಪಡೆ ತನ್ನದಾಗಿಸಿಕೊಂಡಿದೆ. ಕಾಕತಾಳೀಯವೆಂದರೆ ಈ ಎರಡೂ ಸೋಲುಗಳು ರೋಹಿತ್ ಶರ್ಮಾ ನಾಯಕತ್ವದಲ್ಲಿ ದಾಖಲಾಗಿವೆ.

ಕಳೆದ ಎರಡು ವರ್ಷಗಳಲ್ಲಿ ಭಾರತಕ್ಕೆ ಎದುರಾದ 3ನೇ 10 ವಿಕೆಟ್ ಸೋಲು ಇದಾಗಿದೆ.

  1. 2021ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ
  2. 2022ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಇಂಗ್ಲೆಂಡ್  ವಿರುದ್ಧ

ಸರಣಿಯ ಮೂರನೇ ನಿರ್ಣಾಯಕ ಪಂದ್ಯ ಮಾರ್ಚ್‌ 22, ಬುಧವಾರದಂದು ಚೆನ್ನೈನಲ್ಲಿ ನಡೆಯಲಿದೆ.

Suprabha
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ದೇವರು ಆತನಿಗೆ ಮರುಜನ್ಮ ನೀಡಿದ್ದಾನೆ’: ಪ್ರಾಣ ಉಳಿಸಿದ ನಂತರ ವಿಡಿಯೋ ಪೋಸ್ಟ್ ಮಾಡಿದ ಶಮಿ

ಇತ್ತೀಚಿಗೆ ನಡೆದ ಏಕದಿನ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಭಾರತ...

ಟಿ20 | ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾಗೆ ರೋಚಕ ಗೆಲುವು: ಜೋಶ್ ಇಂಗ್ಲಿಸ್ ಶತಕ ವ್ಯರ್ಥ

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 2 ವಿಕೆಟ್...

ಕ್ರಿಕೆಟಿಗ ಶ್ರೀಶಾಂತ್ ವಿರುದ್ಧ 18.7 ಲಕ್ಷ ರೂ. ವಂಚನೆ, ದೂರು ದಾಖಲು

ಉತ್ತರ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ...

ಪಾಪಿಗಳು ಹಾಜರಾದ ಕಾರಣ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೋತಿದೆ: ಮಮತಾ ಬ್ಯಾನರ್ಜಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಂತರ ಇದೀಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ...