7.4% ಜಿಡಿಪಿ? ಮೋದಿ ಸರ್ಕಾರದ ಸಂಭ್ರಮಕ್ಕೆ ಕೊಕ್ಕೆ ಹಾಕಿದ ಅರವಿಂದ್ ಸುಬ್ರಹ್ಮಣ್ಯಂ!

Date:

ಭಾರತದ ಜಿಡಿಪಿ 7.4%ಗೆ ಜಿಗಿದಿದೆ ಎಂದು ಮೋದಿ ಸರ್ಕಾರವು ಸಂಭ್ರಮಿಸುತ್ತಿದೆ. ಕೇಂದ್ರ ಸರ್ಕಾರದ ಸಂಭ್ರಮಕ್ಕೆ ಆರ್ಥಿಕ ತಜ್ಞ ಅರವಿಂದ್‌ ಸುಬ್ರಹ್ಮಣಂ ಮಂಜು ಎರಚಿದ್ದಾರೆ. “ಭಾರತದ ಆರ್ಥಿಕತೆಯು ಬಲವಾದ ಚೇತರಿಕೆಯ ಲಕ್ಷಣಗಳನ್ನು ತೋರಿಸುತ್ತಿಲ್ಲ. ಅಮೆರಿಕದ ಭಾರೀ ಸುಂಕಗಳ ಅಪಾಯ ಮತ್ತು ಕಡಿಮೆ ಬೆಲೆಯ ಚೀನೀ ಸರಕುಗಳ ಡಂಪಿಂಗ್‌ನಿಂದ ಭಾರತದ ಅರ್ಥಿಕ ಭವಿಷ್ಯವು ದುರ್ಬಲಗೊಳ್ಳಬಹುದು ಎಂದು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಹೇಳಿದ್ದಾರೆ.

- Advertisement -

ಈ ವರ್ಷ (2026) ಮಾರ್ಚ್‌ನಲ್ಲಿ ಕೊನೆಗೊಳ್ಳಲಿರುವ 2025-2026ರ ಆರ್ಥಿಕ ವರ್ಷದ ಅಂದಾಜು ದತ್ತಾಂಶವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಅದರಲ್ಲಿ, ಭಾರತದ ಆರ್ಥಿಕತೆಯು 7.4%ಗೆ ಏರಿಕೆಯಾಗಿದೆ. ಭಾರತವು ತನ್ನ ಬೆಳವಣಿಗೆಯ ಹಾದಿಯನ್ನು ವಿಸ್ತರಿಸಿದೆ ಎಂದು ಹೇಳಿಕೊಂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಲಕ್ಷ್ಮಣ್ @ 89: ‘ಅಚಲ’ ಆಶಾವಾದಿ – ಹಸಿರು...

89ನೇ ವಸಂತಕ್ಕೆ ಕಾಲಿಡುತ್ತಿರುವ ಎ.ಸಿ. ಲಕ್ಷ್ಮಣ್ ಅವರು ಭರವಸೆ ಮತ್ತು ಆಶಾವಾದದ ಸಂಕೇತವಾಗಿದ್ದಾರೆ. ತಮ್ಮ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ ಎಂಬ ದೃಢ ನಂಬಿಕೆಯೊಂದಿಗೆ, ಅವರು ರೈತರಿಗೆ ಮಾರ್ಗದರ್ಶನ ನೀಡುತ್ತಾ, ಪರಿಸರವನ್ನು ರಕ್ಷಿಸುತ್ತಾ, ಮುಂದಿನ...

ಟಾಟಾ ಸನ್ಸ್ ಬೋರ್ಡ್ ರೂಮ್ ಕಲಹದ ಆಳ ಅಗಲವೇನು...

ಭಾರತದ ಭಾರೀ ಉದ್ಯಮ ಬ್ರ್ಯಾಂಡ್‌ಗಳಲ್ಲಿ ಒಂದು ಟಾಟಾ. ಉಪ್ಪಿನಿಂದ ಹಿಡಿದು ಉಕ್ಕು, ಕಾರು, ಐಟಿ, ಹೋಟೆಲ್, ವಿಮಾನಯಾನ, ಎಲೆಕ್ಟ್ರಿಕ್ ವಾಹನ, ಈಗ ಸೆಮಿಕಂಡಕ್ಟರ್‌ವರೆಗೆ ಟಾಟಾ ಸಾಮ್ರಾಜ್ಯ ವ್ಯಾಪಿಸಿದೆ. ಆದರೆ, ಈಗ ಇದೇ ಟಾಟಾ ಸಾಮ್ರಾಜ್ಯದ...

ESA ತೂಗುಗತ್ತಿ: ಕಸ್ತೂರಿ ರಂಗನ್ ವರದಿ ಕುರಿತು ಅರಣ್ಯ...

“ಗ್ರಾಮದ ಕನಿಷ್ಠ 20 ಪ್ರತಿಶತದಷ್ಟು ಪ್ರದೇಶವು ‘ಪರಿಸರ ಸೂಕ್ಷ್ಮ ಪ್ರದೇಶ’ (ESA) ಎಂದು ಕಂಡುಬಂದರೆ, ಉಳಿದ 80% ಪ್ರದೇಶ ನಗರೀಕರಣಗೊಂಡಿದ್ದರೂ ಇಡೀ ಗ್ರಾಮವನ್ನು ESA ಎಂದು ಪರಿಗಣಿಸುವ ನೀತಿಯನ್ನು ಕಸ್ತೂರಿ ರಂಗನ್ ವರದಿ...

ಆದರೆ, ಕೇಂದ್ರ ಸರ್ಕಾರದ ಈ ದತ್ತಾಂಶವನ್ನು ಸುಬ್ರಮಣಿಯನ್ ಅವರು ಅಲ್ಲಗಳೆದಿದ್ದಾರೆ. “ನಾವು ಆ ಅಂಕಿಅಂಶವನ್ನು ಎಚ್ಚರಿಕೆಯಿಂದ ಗಮನಿಸಬೇಕು. ಒಟ್ಟು ದೇಶೀಯ ಉತ್ಪನ್ನ ಲೆಕ್ಕಾಚಾರದಿಂದ ಹಣದುಬ್ಬರವನ್ನು ತೆಗೆದುಹಾಕಿದರೆ, ಭಾರತದ ಆರ್ಥಿಕತೆ ಚೆನ್ನಾಗಿದೆಯೆಂದು ಅಳೆಯಲು ಸಾಧ್ಯವೇ?” ಎಂದಿದ್ದಾರೆ.

“ಪ್ರಗತಿಯ ದಿಕ್ಕು ಮತ್ತು ದೃಷ್ಟಿಯಿಂದಲೂ ಸಹ, ದೇಶದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ. ಅಮೆರಿಕದ ವ್ಯಾಪಾರ ನೀತಿಯಿಂದ ಅಪಾಯಗಳು ಸಹ ಹೆಚ್ಚಿವೆ. ಟ್ರಂಪ್ ಅವರು ಭಾರತೀಯ ಸರಕುಗಳ ಮೇಲಿನ ದಂಡನಾತ್ಮಕ 50% ಸುಂಕಗಳನ್ನು ಹೇರಿದ್ದಾರೆ. ಇದು ಅನಿಶ್ಚಿತತೆಗೆ ಕಾರಣವಾಗಿದೆ. ಸುಂಕ ದರ ಇನ್ನೂ ಹೆಚ್ಚಾಗಬಹುದು. ಇದೆಲ್ಲವೂ, ಅಮೆರಿಕ-ಭಾರತ ನಡುವಿನ ವ್ಯಾಪಾರ ಒಪ್ಪಂದದ ಸಾಧ್ಯತೆಯು ಕಡಿಮೆ ಇರುವಂತೆ ಕಾಣುತ್ತಿದೆ” ಎಂದು ಸುಬ್ರಮಣಿಯನ್ ಹೇಳಿದ್ದಾರೆ.

“ಭಾರತವು ‘ಚೀನೀ ವ್ಯಾಪಾರೀಕರಣ’ದ ಒತ್ತಡವನ್ನು ಎದುರಿಸುತ್ತಿದೆ. ಏಕೆಂದರೆ, ಚೀನಾ ತನ್ನ ಸರಕುಗಳನ್ನು ಭಾರತ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ವೇಗವಾಗಿ ರಫ್ತು ಮಾಡುತ್ತಿದೆ. ಇದು ದೇಶೀಯ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ” ಎಂದು ಅವರು ಹೇಳಿದ್ದಾರೆ.

“ಜಗತ್ತಿನ ಆರ್ಥಿಕತೆಯಲ್ಲಿ ಭಾರತದ ಸ್ಥಾನವು ಗಟ್ಟಿಯಾಗಿದ್ದರೂ, ಆಂತರಿಕವಾಗಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಡಿತದಿಂದಾಗಿ ಹಣಕಾಸಿನ ಪರಿಸ್ಥಿತಿಯು ಪ್ರಬಲವಾಗಿಲ್ಲ” ಎಂದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಿಠಾರಿ ಸರಣಿ ಹತ್ಯೆ ಪ್ರಕರಣ: ಖುಲಾಸೆಯಾಗಿದ್ದ ಸುರೇಂದ್ರ ಕೋಲಿ ಅನುಮಾನಾಸ್ಪದ ಸಾವು

ದೇಶವನ್ನೇ ಬೆಚ್ಚಿಬೀಳಿಸಿದ್ದ ಭೀಕರ ನೋಯ್ಡಾದ ನಿಠಾರಿ ಸರಣಿ ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ...

ಹಫೀಜ್‌ಪೇಟ್‌ | ಮಹಿಳೆ ಮೇಲೆ ಹಲ್ಲೆಗೈದು, ಕೂದಲು ಹಿಡಿದು ಎಳೆದಾಡಿದ ಪೇದೆ; ಶಿಸ್ತು ಕ್ರಮಕ್ಕೆ ಶಿಫಾರಸು

ತೆಲಂಗಾಣದ ಹಫೀಜ್‌ಪೇಟ್ ರೈಲು ನಿಲ್ದಾಣದಲ್ಲಿ ಮಹಿಳೆಯೊಬ್ಬರ ಮೇಲೆ ಪೊಲೀಸ್ ಸಿಬ್ಬಂದಿ ಹಲ್ಲೆ...

ಐದು ದಿನಗಳಲ್ಲಿ 12 ಮಸೂದೆಗಳಿಗೆ ರಾಜ್ಯಪಾಲರ ಅಂಕಿತ: ತಮಿಳು ಸರ್ಕಾರ–ರಾಜಭವನ ಸಂಬಂಧದಲ್ಲಿ ಹೊಸ ತಿರುವು

ಡಿಎಂಕೆ ಆಡಳಿತವಿದ್ದಾಗ ಮಸೂದೆಗಳು, ವಿಶ್ವವಿದ್ಯಾಲಯಗಳು ಹಾಗೂ ರಾಜ್ಯಪಾಲರ ಅಧಿಕಾರದ ವಿಚಾರದಲ್ಲಿ ನಿರಂತರ...

ರಾಹುಲ್‌ ಇಂದೋರ್‌ ಸಮಾವೇಶಕ್ಕೆ 29 ಭದ್ರತಾ ಷರತ್ತು: ಕಾಂಗ್ರೆಸ್ ಆಕ್ರೋಶ

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ‘ಛಾತ್ರೋಂ ಕಿ...