ತುಮಕೂರು | ಬೆಲೆ ಏರಿಕೆ ದಂಧೆಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರ : ಸೈಯದ್ ಮುಜೀಬ್

Date:

    ಜನತೆಯು ಅಗತ್ಯ ವಸ್ತುಗಳ ಮತು ಪೆಟ್ರೋಲ್ – ಡೀಸಲ್, ಅಡಿಗೆ ಅನಿಲ ದರಗಳ ಏರಿಕೆಯಿಂದಾಗಿ ವಿಪರೀತ ಬೆಲೆ ಏರಿಕೆಯಿಂದಾಗಿ ತತ್ತರಿಸುವಂತೆ ಅಗಿದೆ ಎಂದು ಅರೋಪಿಸಿ ಸಿಪಿಐ (ಎಂ) ತುಮಕೂರು ಜಿಲ್ಲಾ ಸಮಿತಿಯು ಮಂಗಳವಾರ  ಸಂಜೆ ತುಮಕೂರು  ನಗರದ ಸ್ವತ್ರಂತ್ರ ಚೌಕದಲ್ಲಿ ಗ್ಯಾಸ್ ಸಿಲಿಂಡರ್‌ಗೆ ಹಾರ ಹಾಕಿ ಪಕ್ಕದಲ್ಲಿ ಹೋಗೆ ಹಾಕಿ ವಿನೂತವಾಗಿ ಪ್ರತಿಭಟಿಸಿದರು.

- Advertisement -

   ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್ ಮುಜೀಬ್ ಮಾತನಾಡಿ ಕೇಂದ್ರ ಸರ್ಕಾರದ ನೀತಿಗಳ ಕಾರಣ ಬೆಲೆ ಏರಿಕೆಯಾಗುತ್ತಿದೆ. ಇದು ಬಿಜೆಪಿ ಸರ್ಕಾರದ ದಂಧೆ ಎಂದು ಕಟುವಾಗಿ ಟೀಕಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

 ಜನತೆ ಬೆಲೆ ಏರಿಕೆ , ಗಲಭೆಗಳಲ್ಲಿನ ಸಂತ್ರಸ್ಥರಿಗೆ, ಸಂಕಷ್ಟಕಗಳಿಂದ ಬಳಲುವ ಭಾರತೀಯ ಜನತೆ ಸಾಂತ್ವನ ಹೇಳಲು ಸಮಯ ಇಲ್ಲದ ಪ್ರಧಾನ ಮಂತ್ರಿಗಳು ವಿದೇಶಿದಲ್ಲಿ ಮಹಿಳಾ ರಾಜಕಾರಣಿಗೆ ಚಾಕ್ಲೇಟ್ ತಿನ್ನಿಸುವಲ್ಲಿ ಬಿಜಿ ಇದ್ದಾರೆ ಎಂದು ಕುಟುಕಿದರು. 

ಸಿಪಿಐ (ಎಂ) , ಜಿಲ್ಲಾ ಕಾರ್ಯದರ್ಶಿ ಎನ್ .ಕೆ ಸುಬ್ರಮಣ್ಯ ಮಾತನಾಡಿ ವಾಣಿಜ್ಯ ಸಿಲಿಂಡರ್ ದರಗಳಲ್ಲಿ ತೀವ್ರ ಏರಿಕೆಯು ತೀರ ಖಂಡನಾರ್ಹವಾಗಿದೆ., ಇದರ ಪರಿಣಾವಾಗಿ ಬೇರೆಲ್ಲ ಸಾಮಗ್ರಿಗಳ ಬೆಲೆಗಳು ತೀವ್ರವಾಗಿ ಏರುತ್ತಿವೆ. ವಾಣಿಜ್ಯ ಸಂಸ್ಥೆಗಳು/ ಹೋಟಲ್ ಗಳು ಹೊರೆಗಳನ್ನು ಗ್ರಾಹಕರ ಮೇಲೆ ಖಂಡಿತವಾಗಿಯೂ ದಾಟಿಸುತ್ತದೆ, ಇದು ಅವರ ಹೊರೆಗಳು ಮತ್ತು ಹಣದುಬ್ಬರವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅನೇಕ ಸಣ್ಣ ಸಂಸ್ಥೆಗಳು ಮುಚ್ಚುವಂತಾಗಿದೆ ಎಂದು ಅಪಾಧಿಸಿದರು.

ಸಿಪಿಐ (ಎಂ) ನಗರ ಕಾರ್ಯದರ್ಶಿ ಎ. ಲೋಕೇಶ್ ಮಾತನಾಡಿ, 5 ಕೆಜಿ ಸಬ್ಸಿಡಿ ರಹಿತ ಸಿಲಿಂಡರ್‌ಗಳ ಬೆಲೆಯನ್ನು 261 ರೂ.ಗಳಷ್ಟು ತೀವ್ರವಾಗಿ ಹೆಚ್ಚಿಸಲಾಗಿದೆ. 5 ಕೆಜಿ ಸಿಲಿಂಡರ್‌ಗಳ ಬೆಲೆಯ ಈ ಕ್ರೂರ ಏರಿಕೆಯು 14 ಕೆಜಿ ಸಿಲಿಂಡರ್‌ಗಳನ್ನು ಪಡೆಯುವ ಅಸಮರ್ಥತೆಯಿಂದಾಗಿ ಅವುಗಳನ್ನು ಬಳಸುವ ಸಣ್ಣ ಮನೆಗಳು ಮತ್ತು ವಲಸೆ ಕಾರ್ಮಿಕರ ಮೇಲೆ ಅತ್ಯಂತ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದರು.

ಜನವಾಧಿ ಮಹಿಳಾ ಸಂಘಟನೆ ಜಿಲ್ಲಾ ಸಂಚಾಲಕಿ ಟಿ. ಆರ್ ಕಲ್ಪನಾ ಮಾತನಾಡಿ ಬೇಲೆ ಏರಿಕೆಯು ಮಹಿಳೆಯರನ್ನು ಅತಿಯಾಗಿ ಕಾಡುತ್ತಿದೆ ಎಂದ ಅವರು. ಮಹಿಳೆಯೆ ಬೇಲೆ ಏರಿಕೆಯಿಂದ ಹೆಚ್ಚು ಬಾಧಿತಳಾಗುತ್ತಿದ್ದಾರೆ ಎಂದರು. ಪಿ.ಎಫ್ ಪಿಂಚಣಿದಾರರ ಸಂಘದ ಜಿಲ್ಲಾ ಸಂಚಾಲಕರಾದ ಟಿ.ಜಿ. ಶಿವಲಿಂಗಯ್ಯ ನವರು ಮಾತನಾಡಿ ಲಕ್ಷಂತಾರ ಪಿಂಚಣಿದಾರರು ಪಿಂಚಣಿ ಹೆಚ್ಚಳ ಇಲ್ಲದೆ ವಿಪರೀತ ಬೇಲೆಏರಿಕೆಯಿಂದ ಕಂಗಾಲಾಗಿದ್ದಾರೆ ಎಂದರು.

     ಪ್ರತಿಭಟನೆಯನ್ನು ಉದ್ದೇಶಿಸಿ ಸಿಐಟಿಯು ಶಿವಕುಮಾರ್ ಸ್ವಾಮಿ, ಪುಟ್ ಪಾತ್ ವ್ಯಾಪಾರಿಗಳ ಸಂಘದ ವಾಸೀಂ ಅಕ್ರಂ, ಸಮುದಾಯ ಅಶ್ವಥಯ್ಯ, ಮಾತನಾಡಿದರು.

 ಪ್ರತಿಭಟನೆಯಲ್ಲಿ ಆಟೋ ಚಾಲಕರ ಸಂಘ ಇಂತಿಯಾಜ್, ಉಮೇಶ್ ,ನರಸಿಂಹಮೂರ್ತಿ,ಮುತ್ತುರಾಜು,ಖಲೀಲ್,ಶ್ರಿನಿವಾಸಗೌಡ, ಮಿನಾಕ್ಷಿ, ಯದಯ,ಗೋಪಾಲ್ ನೇತ್ರವತಿ,ಗಂಗಮ್ಮ, ಇತರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ವಲಯ ಅರಣ್ಯಾಧಿಕಾರಿ

ಗುತ್ತಿಗೆದಾರರಿಂದ ಲಂಚದ ಹಣ ಪಡೆಯುತ್ತಿದ್ದ ಆರೋಪದ ಮೇರೆಗೆ ಗುಬ್ಬಿ ವಲಯ ಅರಣ್ಯಾಧಿಕಾರಿ...

ತುಮಕೂರು | ಉದ್ಯಮದ ಅಗತ್ಯಕ್ಕೆ ತಕ್ಕಂತೆ ಕೌಶಲ್ಯ ಬೆಳೆಸಿಕೊಳ್ಳಿ: ಡಾ. ಜಿ. ಪರಮೇಶ್ವರ

ಬದಲಾಗುತ್ತಿರುವ ತಂತ್ರಜ್ಞಾನ, ವಿಶೇಷವಾಗಿ ಕೃತಕ ಬುದ್ಧಿಮತ್ತೆ (AI) ಕುರಿತು ವಿದ್ಯಾರ್ಥಿಗಳು ನಿರಂತರವಾಗಿ...

ಗುಬ್ಬಿ | ಅಂಬೇಡ್ಕರ್, ಬುದ್ಧ, ಬಸವಣ್ಣ ಅವಹೇಳನ ಖಂಡಿಸಿ ದಸಂಸ ಪ್ರತಿಭಟನೆ

ಮಾಜಿಕ ಜಾಲತಾಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಬುದ್ಧ ಹಾಗೂ...

ತುಮಕೂರು | 50 ಸಾವಿರ ಯುವಜನರಿಗೆ ಸಿಪಿಆರ್ ತರಬೇತಿ : ‘ಹಾರ್ಟ್ ಸೇಫ್ ತುಮಕೂರು’ ಅಭಿಯಾನಕ್ಕೆ ಡಿಸಿಎಂ ಚಾಲನೆ

ಹಠಾತ್ ಹೃದಯಾಘಾತ ಸಂಭವಿಸಿದ ಸಂದರ್ಭದಲ್ಲಿ ಆಸ್ಪತ್ರೆಗೆ ತಲುಪುವ ಮುನ್ನ ನೀಡುವ ಸಿಪಿಆರ್...