ಹಿಂದೂ ಕೋಡ್ ಬಿಲ್ ಹೋರಾಟಕ್ಕೆ 75 ವರ್ಷ: ಸಮಾನತೆಯ ಸಾಕಾರಕ್ಕಾಗಿ ಅಧಿಕಾರ ತ್ಯಜಿಸಿದ್ದರು ಡಾ. ಬಿ ಆರ್ ಅಂಬೇಡ್ಕರ್

Date:

ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಹಿಂದೂ ಕೋಡ್ ಬಿಲ್ ಕೇವಲ ಮಹಿಳಾ ಹಕ್ಕುಗಳ ಮಸೂದೆಯಾಗಿರಲಿಲ್ಲ; ಅದು ಶತಮಾನಗಳಿಂದ ಬೇರೂರಿದ್ದ ಜಾತಿ ವ್ಯವಸ್ಥೆಯನ್ನು ಬುಡಮೇಲು ಮಾಡುವ ಪ್ರಬಲ ಅಸ್ತ್ರವೂ ಆಗಿತ್ತು. ಜಾತಿ ವ್ಯವಸ್ಥೆಯು ಜೀವಂತವಾಗಿರುವುದೇ ‘ಸಜಾತೀಯ ವಿವಾಹ’ ಮತ್ತು ರಕ್ತಸಂಬಂಧದ ಕಟ್ಟುಪಾಡುಗಳಿಂದ ಎಂದು ಅವರು ಆಳವಾಗಿ ವಿಶ್ಲೇಷಿಸಿದ್ದರು. ಮಹಿಳೆಯರನ್ನು ಕೇವಲ ‘ಜಾತಿಯ ಪಾವಿತ್ರ್ಯತೆ’ಯನ್ನು ಕಾಪಾಡುವ ಸರಕು ಸಾಮಗ್ರಿಗಳಾಗಿ ನೋಡುವ ಅಮಾನವೀಯ ಮನಸ್ಥಿತಿಯನ್ನು ಈ ಮಸೂದೆ ಪ್ರಶ್ನಿಸಿತ್ತು.

- Advertisement -

ಭಾರತದ ಸಾಮಾಜಿಕ ಇತಿಹಾಸದಲ್ಲಿ ಕ್ರಾಂತಿಕಾರಕ ಹೆಜ್ಜೆಯಾಗಿದ್ದ ‘ಹಿಂದೂ ಕೋಡ್ ಬಿಲ್’ (ಹಿಂದೂ ಸಂಹಿತೆ ಮಸೂದೆ) ಸಂಸತ್ತಿನಲ್ಲಿ ಸುದೀರ್ಘ ಚರ್ಚೆಗೆ ಗ್ರಾಸವಾಗಿ, ನಂತರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಐತಿಹಾಸಿಕ ರಾಜೀನಾಮೆಗೆ ಕಾರಣವಾದ ಘಟನೆಗಳಿಗೆ ಇದೀಗ 75 ವರ್ಷಗಳಾಗುತ್ತಿವೆ. 1951ರ ಫೆಬ್ರವರಿಯಲ್ಲಿ ಈ ಮಸೂದೆಯ ಕುರಿತು ಸಂಸತ್ತಿನಲ್ಲಿ ನಿರ್ಣಾಯಕ ಚರ್ಚೆಗಳು ನಡೆದಿದ್ದವು. ಆದರೆ, ಸಂಪ್ರದಾಯವಾದಿಗಳ ವಿರೋಧದಿಂದಾಗಿ ಮಸೂದೆ ಅಂಗೀಕಾರವಾಗದೆ ವಿಳಂಬವಾದಾಗ, ತೀವ್ರ ಅಸಮಾಧಾನಗೊಂಡ ಅಂಬೇಡ್ಕರ್ ಅವರು 1951ರ ಸೆಪ್ಟೆಂಬರ್ 27ರಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ತ್ಯಾಗದ ಘಟನೆಗೆ 75 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ, ಮಹಿಳಾ ಸಮಾನತೆಗಾಗಿ ಅವರು ನಡೆಸಿದ ಹೋರಾಟವನ್ನು ನೆನಪಿಸಿಕೊಳ್ಳುವುದು ಅತ್ಯಗತ್ಯ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಎಐ ಯುಗದಲ್ಲಿ ನಿಜವಾದ ಬರಹಕ್ಕೆ ಎಲ್ಲಿದೆ ಸ್ಥಾನ?

ಎಐಯಿಂದ ಬರಹಗಾರರ ಸ್ಥಾನ ಉಳಿಯುತ್ತದೆಯೇ? ಎಂಬುದಲ್ಲ. ಬದಲಾಗಿ, ಎಐಯ ನೆರವಿನ ನಡುವೆಯೂ ತನ್ನದೇ ಧ್ವನಿಯನ್ನು ಕಾಪಾಡಿಕೊಂಡು, ಸ್ವತಂತ್ರವಾಗಿ ಯೋಚಿಸಿ, ಬದುಕಿನ ನೈಜ ಅನುಭವಗಳನ್ನು ಪ್ರಾಮಾಣಿಕವಾಗಿ ದಾಖಲಿಸುವ ಬರಹಗಾರರು ಎಷ್ಟು ಮುಖ್ಯರಾಗುತ್ತಾರೆ ಎಂಬುದಾಗಿದೆ. ತಂತ್ರಜ್ಞಾನ...

UPI ಮೇಲಿನ ಶುಲ್ಕದ ನೆರಳು: ಜನರ ವಿಶ್ವಾಸವಿಲ್ಲದ ಡಿಜಿಟಲ್...

ಡಿಜಿಟಲ್ ಭಾರತವೆಂದರೆ ಕೇವಲ ಮೊಬೈಲ್‌ನಲ್ಲಿ ಕಾಣಿಸುವ QR ಕೋಡ್ ಅಲ್ಲ; ಬದಲಿಗೆ ಅದು ಕೋಟ್ಯಂತರ ಜನರ ಬದುಕು. ಆ ಬದುಕಿನ ಮೇಲೆ ಯಾವುದೇ ಹೆಚ್ಚುವರಿ ಹೊರೆ ಬೀಳದಂತೆ ನೋಡಿಕೊಳ್ಳುವುದು ಸರ್ಕಾರದ ನಿಜವಾದ ಜವಾಬ್ದಾರಿ. ಒಂದು...

ಚಾಮರಾಜ ಕ್ಷೇತ್ರದ ಮೇಲೆ ‘ನಿರುದ್ಯೋಗಿ’ ಪ್ರತಾಪ್ ಸಿಂಹ ಕಣ್ಣು;...

ಎರಡು ಬಾರಿ ಸಂಸದರಾಗಿದ್ದ ಪ್ರತಾಪ್ ಸಿಂಹ ಈಗ 2028ರ ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಟಿ. ನರಸೀಪುರದ ಗಣೇಶೋತ್ಸವದಿಂದ ಹಿಡಿದು ಮೈಸೂರಿನ ಹಲವು ಧಾರ್ಮಿಕ–ಸಾಂಸ್ಕೃತಿಕ ವಿವಾದಗಳವರೆಗೆ ಮತ್ತೆ ಮುಂಚೂಣಿಯಲ್ಲಿ...

​ಹಿಂದೂ ಕೋಡ್ ಬಿಲ್ ಎಂದರೆ ಏನು? ಸರಳವಾಗಿ ಹೇಳುವುದಾದರೆ ಮಹಿಳೆಯರಿಗೆ ಕುಟುಂಬದೊಳಗೆ ಸಮಾನ ಹಕ್ಕು ನೀಡಲು ತಂದ ಕಾನೂನು ಇದು. ಶತಮಾನಗಳಿಂದ ಹಿಂದೂ ಸಮಾಜದಲ್ಲಿ ಮದುವೆ, ವಿಚ್ಛೇದನ, ಆಸ್ತಿ ಹಂಚಿಕೆ, ದತ್ತು ಸ್ವೀಕಾರ ಮುಂತಾದ ವಿಚಾರಗಳಲ್ಲಿ ಪುರುಷರು ಮುಷ್ಠಿಯಲ್ಲಿರಿಸಿಕೊಂಡಿದ್ದ ಹಕ್ಕುಗಳು ಮಹಿಳೆಯರಿಗೆ ಇರಲಿಲ್ಲ. ಬೇರೆ ಬೇರೆ ಪ್ರಾಂತಗಳಲ್ಲಿ, ಬೇರೆ ಬೇರೆ ಜಾತಿಗಳಲ್ಲಿ ಹರಿದು ಹಂಚಿಹೋಗಿದ್ದ ಮತ್ತು ತಾರತಮ್ಯದಿಂದ ಕೂಡಿದ್ದ ಈ ಎಲ್ಲ ಪದ್ಧತಿಗಳನ್ನು ಒಂದೇ ಕಾನೂನಿನ ಅಡಿಯಲ್ಲಿ ತಂದು, ಸ್ತ್ರೀ-ಪುರುಷರಿಗೆ ಸಮಾನ ಹಕ್ಕು ನೀಡುವ ಬೃಹತ್ ಪ್ರಯತ್ನವೇ ‘ಹಿಂದೂ ಕೋಡ್ ಬಿಲ್’. ಬಿ.ಎನ್. ರಾವ್ ಸಮಿತಿಯ ವರದಿಯನ್ನು ಆಧರಿಸಿದ್ದ ಈ ಮಸೂದೆಯು, ಕೌಟುಂಬಿಕ ವ್ಯವಸ್ಥೆಯಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ಕಾನೂನಿನ ಮೂಲಕ ತಡೆಯುವ ಉದ್ದೇಶ ಹೊಂದಿತ್ತು.

​ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಬಿ.ಎನ್. ರಾವ್ ಸಮಿತಿಯ ಕರಡನ್ನು ಕೇವಲ ಯಥಾವತ್ತಾಗಿ ಸಂಸತ್ತಿನಲ್ಲಿ ಮಂಡಿಸಲಿಲ್ಲ. ಬದಲಾಗಿ, ಅದಕ್ಕೆ ಜೀವ ತುಂಬಿ, ಅದನ್ನು ವಿಸ್ತೃತವಾಗಿ ಪರಿಷ್ಕರಿಸಿ, ಭಾರತೀಯ ಮಹಿಳೆಯರ ಸಮಾನ ಹಕ್ಕಿನ ಪ್ರಮುಖ ರಾಜಕೀಯ ಮತ್ತು ಕಾನೂನು ಹೋರಾಟವನ್ನಾಗಿ ರೂಪಾಂತರಿಸಿದರು. ಭಾರತದ ಸಂವಿಧಾನವು ದೇಶದ ಪ್ರಜೆಗಳಿಗೆ ರಾಜಕೀಯ ಸಮಾನತೆಯನ್ನು ನೀಡಿದೆ; ಆದರೆ ಸಮಾಜದ ಮೂಲ ಘಟಕವಾದ ‘ಕುಟುಂಬ’ದಲ್ಲಿಯೇ ಮಹಿಳೆಗೆ ಸಮಾನತೆ ಇಲ್ಲದಿದ್ದರೆ ಆ ಪ್ರಜಾಪ್ರಭುತ್ವಕ್ಕೆ ಅರ್ಥವಿಲ್ಲ ಎಂಬುದು ಅಂಬೇಡ್ಕರ್ ಅವರ ದೃಢವಾದ ನಂಬಿಕೆಯಾಗಿತ್ತು. ಹಾಗಾಗಿ ಅವರು ಈ ಮಸೂದೆಯನ್ನು ಕೇವಲ ಕಾನೂನಾಗಿ ನೋಡದೆ, ಮಹಿಳಾ ವಿಮೋಚನೆಯ ಅಸ್ತ್ರವನ್ನಾಗಿ ಕಂಡರು.

50618

​ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಹಿಂದೂ ಕೋಡ್ ಬಿಲ್ ಕೇವಲ ಮಹಿಳಾ ಹಕ್ಕುಗಳ ಮಸೂದೆಯಾಗಿರಲಿಲ್ಲ; ಅದು ಶತಮಾನಗಳಿಂದ ಬೇರೂರಿದ್ದ ಜಾತಿ ವ್ಯವಸ್ಥೆಯನ್ನು ಬುಡಮೇಲು ಮಾಡುವ ಪ್ರಬಲ ಅಸ್ತ್ರವೂ ಆಗಿತ್ತು. ಜಾತಿ ವ್ಯವಸ್ಥೆಯು ಜೀವಂತವಾಗಿರುವುದೇ ‘ಸಜಾತೀಯ ವಿವಾಹ’ (ತಮ್ಮದೇ ಜಾತಿಯೊಳಗೆ ಮದುವೆಯಾಗುವ ಕಟ್ಟುನಿಟ್ಟಿನ ಪದ್ಧತಿ) ಮತ್ತು ರಕ್ತಸಂಬಂಧದ ಕಟ್ಟುಪಾಡುಗಳಿಂದ ಎಂದು ಅವರು ಆಳವಾಗಿ ವಿಶ್ಲೇಷಿಸಿದ್ದರು. ಮಹಿಳೆಯರನ್ನು ಕೇವಲ ‘ಜಾತಿಯ ಪಾವಿತ್ರ್ಯತೆ’ಯನ್ನು ಕಾಪಾಡುವ ಸಾಧನಗಳಾಗಿ ನೋಡುವ ಅಮಾನವೀಯ ಮನಸ್ಥಿತಿಯನ್ನು ಈ ಮಸೂದೆ ಪ್ರಶ್ನಿಸಿತು. ಸ್ವತಂತ್ರವಾಗಿ ತಮ್ಮಿಷ್ಟದ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕನ್ನು ಮಹಿಳೆಯರಿಗೆ ನೀಡುವ ಮೂಲಕ, ಜಾತಿಯ ಗೋಡೆಗಳನ್ನು ಕೆಡವಬಹುದು ಎಂಬುದು ಅವರ ದೂರದೃಷ್ಟಿಯಾಗಿತ್ತು. ಜಾತಿ ನಿರ್ಮೂಲನೆ ಮತ್ತು ಮಹಿಳಾ ವಿಮೋಚನೆ ಇವೆರಡೂ ಪ್ರತ್ಯೇಕ ಹೋರಾಟಗಳಲ್ಲ, ಬದಲಾಗಿ ಒಂದೇ ನಾಣ್ಯದ ಎರಡು ಮುಖಗಳು ಎಂಬುದನ್ನು ಅಂಬೇಡ್ಕರ್ ಅವರು ಈ ಬಿಲ್‌ನ ಚರ್ಚೆಗಳ ಮೂಲಕ ಬಿಡಿಸಿಟ್ಟರು.

​ಮಹಿಳಾ ಹಕ್ಕುಗಳ ದೃಷ್ಟಿಕೋನದಿಂದ ಈ ಮಸೂದೆಯು ತರಲು ಹೊರಟಿದ್ದ ಮತ್ತೊಂದು ಕ್ರಾಂತಿಕಾರಕ ಬದಲಾವಣೆ ಎಂದರೆ ಆಸ್ತಿ ಹಕ್ಕು. ಅಲ್ಲಿಯವರೆಗೆ ಹಿಂದೂ ಮಹಿಳೆಯರಿಗೆ ಆಸ್ತಿಯ ಮೇಲೆ ‘ಸಂಪೂರ್ಣ ಒಡೆತನ’ ಇರಲಿಲ್ಲ; ಕೇವಲ ‘ಸ್ತ್ರೀಧನ’ ಅಥವಾ ಜೀವಿತಾವಧಿಯ ಸೀಮಿತ ಹಕ್ಕು ಮಾತ್ರ ಇತ್ತು. ತಂದೆಯ ಆಸ್ತಿಯಲ್ಲಿ ಕೇವಲ ಮಗನಿಗೆ ಮಾತ್ರ ಜನ್ಮಸಿದ್ಧ ಹಕ್ಕು ನೀಡುತ್ತಿದ್ದ ಹಳೆಯ ‘ಮಿತಾಕ್ಷರ’ ಪದ್ಧತಿಯನ್ನು ರದ್ದುಗೊಳಿಸಿ, ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರಿಗೂ ಆಸ್ತಿಯಲ್ಲಿ ಸಮಾನ ಪಾಲು ನೀಡುವ ದಿಟ್ಟ ಪ್ರಸ್ತಾವನೆಯನ್ನು ಅಂಬೇಡ್ಕರ್ ಸೇರಿಸಿದರು. ಮಹಿಳೆಯು ಆರ್ಥಿಕವಾಗಿ ಸ್ವತಂತ್ರಳಾಗದ ಹೊರತು ಅವಳಿಗೆ ಸಮಾಜದಲ್ಲಿ ನಿಜವಾದ ಸ್ವಾತಂತ್ರ್ಯ ಮತ್ತು ಘನತೆ ಸಿಗುವುದಿಲ್ಲ ಎಂದು ಅವರು ಬಲವಾಗಿ ಪ್ರತಿಪಾದಿಸಿದರು.

​ವಿವಾಹ ಮತ್ತು ವಿಚ್ಛೇದನದ ವಿಚಾರದಲ್ಲಿಯೂ ಈ ಮಸೂದೆಯ ನಿಲುವುಗಳು ಅತ್ಯಂತ ಪ್ರಗತಿಪರವಾಗಿದ್ದವು. ಪುರುಷರಿಗೆ ಬಹುಪತ್ನಿತ್ವದ ಅವಕಾಶವಿದ್ದ, ಆದರೆ ಮಹಿಳೆಯರಿಗೆ ವಿಚ್ಛೇದನದ ಹಕ್ಕೇ ಇಲ್ಲದಿದ್ದ ಅಂದಿನ ಕಾಲದಲ್ಲಿ, ಮಹಿಳೆಯರಿಗೆ ‘ಏಕಪತ್ನಿತ್ವ’ದ ಕಾನೂನಾತ್ಮಕ ರಕ್ಷಣೆ ನೀಡುವುದು ಈ ಬಿಲ್‌ನ ಮುಖ್ಯ ಗುರಿಯಾಗಿತ್ತು. ಗಂಡನಿಂದ ತೀವ್ರ ದೌರ್ಜನ್ಯಕ್ಕೊಳಗಾದ ಅಥವಾ ತ್ಯಜಿಸಲ್ಪಟ್ಟ ಮಹಿಳೆಗೆ ಕಾನೂನುಬದ್ಧವಾಗಿ ವಿಚ್ಛೇದನ ಪಡೆಯುವ ಹಕ್ಕನ್ನು ಕಲ್ಪಿಸುವುದು ಮತ್ತು ಅವಳ ಭವಿಷ್ಯದ ಆರ್ಥಿಕ ಭದ್ರತೆಗಾಗಿ ಜೀವನಾಂಶ ಒದಗಿಸುವುದನ್ನು ಮಸೂದೆ ಕಡ್ಡಾಯಗೊಳಿಸಿತು. ವಿಚ್ಛೇದನದ ಹಕ್ಕಿಲ್ಲದ, ಬಲವಂತವಾಗಿ ಕೊನೆಯುಸಿರಿನವರೆಗೆ ಸಹಿಸಿಕೊಳ್ಳಬೇಕಾದ ಮದುವೆಯು ಮಹಿಳೆಯ ಪಾಲಿಗೆ ಜೀತಪದ್ಧತಿಯೇ ಸರಿ ಎಂದು ಅಂಬೇಡ್ಕರ್ ಆಕ್ರೋಶ ವ್ಯಕ್ತಪಡಿಸಿದರು.

50620

​ಆದರೆ, ಸಮಾನತೆಯ ಆಶಯ ಹೊತ್ತ ಈ ಪ್ರಗತಿಪರ ಮಸೂದೆಗೆ ಸಂಸತ್ತಿನ ಒಳಗೆ ಮತ್ತು ಹೊರಗೆ ಬೃಹತ್ ವಿರೋಧ ವ್ಯಕ್ತವಾಯಿತು. ಇದು ಕೇವಲ ಹಿಂದೂ ಧರ್ಮದ ಮೇಲಿನ ಹಸ್ತಕ್ಷೇಪವಲ್ಲ, ಬದಲಾಗಿ ಹಿಂದೂ ಅವಿಭಕ್ತ ಕುಟುಂಬ ವ್ಯವಸ್ಥೆಯನ್ನೇ ನಾಶ ಮಾಡುತ್ತದೆ ಎಂದು ಸಂಪ್ರದಾಯವಾದಿಗಳು ಬೊಬ್ಬೆ ಹೊಡೆದರು. ಆಸ್ತಿಯಲ್ಲಿ ಹೆಣ್ಣಿಗೆ ಪಾಲು ನೀಡಿದರೆ ಸೋದರ ಸೋದರಿಯರ ನಡುವೆ ವ್ಯಾಜ್ಯಗಳು ಶುರುವಾಗುತ್ತವೆ ಎಂಬ ಕುಂಟುನೆಪಗಳನ್ನು ಒಡ್ಡಲಾಯಿತು. ಅಂದಿನ ರಾಷ್ಟ್ರಪತಿಗಳಾಗಿದ್ದ ಡಾ. ರಾಜೇಂದ್ರ ಪ್ರಸಾದ್ ಸೇರಿದಂತೆ ಸ್ವತಃ ಆಡಳಿತರೂಢ ಕಾಂಗ್ರೆಸ್ ಪಕ್ಷದ ಅನೇಕ ಹಿರಿಯ ನಾಯಕರು ಈ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದರು. ಮಸೂದೆಯ ಮೇಲಿನ ಚರ್ಚೆಯನ್ನು ಉದ್ದೇಶಪೂರ್ವಕವಾಗಿ ಎಳೆದಾಡುವ ತಂತ್ರಗಾರಿಕೆ ಸಂಸತ್ತಿನಲ್ಲಿ ಎಗ್ಗಿಲ್ಲದೆ ಕೊನೆಸಾಗಿತು.

​ಹಿಂದೂ ಕೋಡ್ ಬಿಲ್ ಉದ್ದೇಶಪೂರ್ವಕವಾಗಿ ವಿಳಂಬವಾಗುತ್ತಿರುವುದನ್ನು, ಮತ್ತು ಸರ್ಕಾರವು ಸಂಪ್ರದಾಯವಾದಿಗಳ ಒತ್ತಡಕ್ಕೆ ಮಣಿಯುತ್ತಿರುವುದನ್ನು ಕಂಡು ರೋಸಿಹೋದ ಕಾನೂನು ಸಚಿವರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು 1951ರ ಸೆಪ್ಟೆಂಬರ್ 27ರಂದು ಕಠಿಣ ನಿರ್ಧಾರದೊಂದಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಬಿಲ್‌ನ ವೈಫಲ್ಯವು ಅವರ ರಾಜೀನಾಮೆಗೆ ಅತ್ಯಂತ ಪ್ರಮುಖ ಕಾರಣವಾಗಿತ್ತು. ಇದರ ಜೊತೆಗೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಎಸ್‌ಸಿ/ಎಸ್‌ಟಿ) ಉದ್ಧಾರದ ಬಗ್ಗೆ ಸರ್ಕಾರದ ನಿರ್ಲಕ್ಷ್ಯ, ಆಡಳಿತದಲ್ಲಿ ತಮಗೆ ನೀಡಲಾಗಿದ್ದ ಸೀಮಿತ ಪಾತ್ರ ಹಾಗೂ ಸಾಮಾಜಿಕ ಅಸಮಾನತೆಯ ಕುರಿತಾದ ಅಸಮಾಧಾನಗಳೂ ಅವರ ರಾಜೀನಾಮೆ ನಿರ್ಧಾರಕ್ಕೆ ಇಂಬು ನೀಡಿದ್ದವು. ಅಧಿಕಾರಕ್ಕಿಂತ ಮಹಿಳೆಯರ ಮತ್ತು ಶೋಷಿತರ ಹಕ್ಕುಗಳೇ ತನಗೆ ಮಿಗಿಲು ಎಂಬುದನ್ನು ಅವರು ಈ ತ್ಯಾಗದ ಮೂಲಕ ಸಾಬೀತುಪಡಿಸಿದರು.

​ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸಮಗ್ರ ಹಿಂದೂ ಕೋಡ್ ಬಿಲ್ ನ ಪರವಾಗಿದ್ದರು. ಆದರೆ ವ್ಯಾಪಕ ವಿರೋಧದ ಬಿಲ್ ನ್ನು ಒಂದೇ ಬಾರಿಗೆ ಅಂಗೀಕರಿಸಲು ಸಾಧ್ಯವಾಗಲಿಲ್ಲ. ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಜನಾದೇಶ ದೊರೆತ ನಂತರ ನೆಹರೂ ಅವರ ಸರ್ಕಾರ ಬಿಲ್ ನ್ನು ವಿಭಜಿಸಿ ಜಾರಿಗೆ ತರುವ ಉಪಾಯ ಹೂಡಿತು. 1955 ಮತ್ತು 1956ರಲ್ಲಿ ನಾಲ್ಕು ಪ್ರಮುಖ ಕಾನೂನುಗಳು ರೂಪುಗೊಂಡವು. 1955ರ ಹಿಂದೂ ವಿವಾಹ ಕಾಯ್ದೆಯು ಏಕಪತ್ನಿತ್ವವನ್ನು ಕಡ್ಡಾಯಗೊಳಿಸಿ, ಕಾನೂನುಬದ್ಧ ವಿಚ್ಛೇದನಕ್ಕೆ ಅವಕಾಶ ಕಲ್ಪಿಸಿತು. ಹಾಗೆಯೇ, ಹಿಂದೂ ಉತ್ತರಾಧಿಕಾರ ಕಾಯ್ದೆ (1956), ಹಿಂದೂ ಅಪ್ರಾಪ್ತತೆ ಮತ್ತು ಪಾಲಕತ್ವ ಕಾಯ್ದೆ (1956) ಹಾಗೂ ಹಿಂದೂ ದತ್ತು ಮತ್ತು ಜೀವನಾಂಶ ಕಾಯ್ದೆ (1956) ಜಾರಿಗೆ ಬಂದವು.

50625

​ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ, ಈ ಕಾಯ್ದೆಗಳು ಕೇವಲ ಹಿಂದೂ ಧರ್ಮೀಯರಿಗೆ ಮಾತ್ರ ಸೀಮಿತವಾಗಿಲ್ಲ. ಕಾನೂನಿನ ವ್ಯಾಖ್ಯಾನದ ಪ್ರಕಾರ, ಇದು ಬೌದ್ಧರು, ಜೈನರು ಮತ್ತು ಸಿಖ್ಖರಿಗೂ ಅನ್ವಯಿಸುತ್ತದೆ. ಆದಾಗ್ಯೂ, ಇದು ಎಲ್ಲ ಧರ್ಮಗಳಿಗೂ ಅನ್ವಯಿಸುವ ‘ಏಕರೂಪ ನಾಗರಿಕ ಸಂಹಿತೆ’ (UCC) ಅಲ್ಲ ಎಂಬುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಇದೊಂದು ನಿರ್ದಿಷ್ಟ ಧಾರ್ಮಿಕ ಚೌಕಟ್ಟಿನೊಳಗೆ ತಂದ ಬೃಹತ್ ಸುಧಾರಣೆಯಾಗಿತ್ತು. ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಪಾರ್ಸಿ ಸಮುದಾಯಗಳಿಗೆ ಅವರದೇ ಆದ ಪ್ರತ್ಯೇಕ ವೈಯಕ್ತಿಕ ಕಾನೂನುಗಳು ಅಸ್ತಿತ್ವದಲ್ಲಿಯೇ ಮುಂದುವರಿದವು.

​ಆದರೆ, 1956ರಲ್ಲಿ ಜಾರಿಗೆ ಬಂದ ಕಾಯ್ದೆಗಳು ಅಂಬೇಡ್ಕರ್ ಅವರ ಕನಸಿನಷ್ಟು ಪರಿಪೂರ್ಣವಾಗಿರಲಿಲ್ಲ. ಮುಖ್ಯವಾಗಿ ಆಸ್ತಿ ಹಕ್ಕಿನ ವಿಚಾರದಲ್ಲಿ 1956ರ ಕಾನೂನು ಮಹಿಳೆಯರಿಗೆ ಪೂರ್ಣ ಪ್ರಮಾಣದ ಸಮಾನತೆಯನ್ನು ಒದಗಿಸಲಿಲ್ಲ. ಮಗಳಿಗೆ ತಂದೆಯ ಸ್ವಾರ್ಜಿತ ಆಸ್ತಿಯಲ್ಲಿ ಪಾಲು ಸಿಕ್ಕಿತಾದರೂ, ಹಿಂದೂ ಅವಿಭಕ್ತ ಕುಟುಂಬದ ಪಾರಂಪರಿಕ (ಪಿತ್ರಾರ್ಜಿತ) ಆಸ್ತಿಯಲ್ಲಿ ಮಗನಿಗೆ ಸಿಗುವಂತಹ ‘ಜನ್ಮಸಿದ್ಧ ಹಕ್ಕು’ (Coparcenary right) ಹೆಣ್ಣುಮಕ್ಕಳಿಗೆ ಸಿಗಲಿಲ್ಲ. ಈ ಐತಿಹಾಸಿಕ ಅನ್ಯಾಯವು ಸರಿಯಾಗಲು 2005ರ ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆ ಬರುವವರೆಗೂ ಭಾರತದ ಮಹಿಳೆಯರು ಕಾಯಬೇಕಾಯಿತು. ಆಗಷ್ಟೇ ಅಧಿಕಾರ ಹಿಡಿದಿದ್ದ ಡಾ.ಮನಮೋಹನಸಿಂಗ್ ನೇತೃತ್ವದ ಯುಪಿಎ ಸರ್ಕಾರ ಈ ತಿದ್ದುಪಡಿಯ ಮೂಲಕ ಸಂವಿಧಾನ ಶಿಲ್ಪಿಯ ಕನಸನ್ನು ಅದರ ನಿಜ ಅರ್ಥದಲ್ಲಿ ದಶಕಗಳ ಬಳಿಕ ಸಾಕಾರಗೊಳಿಸಿತು.

​ ಹಿಂದೂ ಕೋಡ್ ಬಿಲ್ ಎನ್ನುವುದು ಕೇವಲ ಕಾಗದದ ಮೇಲಿನ ಕೆಲವು ಕಾನೂನುಗಳ ಗುಚ್ಛವಾಗಿರಲಿಲ್ಲ; ಅದು ಸಾವಿರಾರು ವರ್ಷಗಳ ಶೋಷಣೆ, ತಾರತಮ್ಯ ಹಾಗೂ ಅಸಮಾನತೆಯನ್ನು ತೊಡೆದುಹಾಕಲು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಹೂಡಿದ ಅತಿದೊಡ್ಡ ಬೌದ್ಧಿಕ ಮತ್ತು ರಾಜಕೀಯ ಸಮರ. ಸಂಸತ್ತಿನಲ್ಲಿ ಈ ಮಸೂದೆಯ ಚರ್ಚೆಗಳು ನಡೆದು, ಅಧಿಕಾರವನ್ನೇ ತ್ಯಜಿಸಿ ಅಂಬೇಡ್ಕರ್ ರಾಜೀನಾಮೆ ನೀಡಿ 75 ವರ್ಷಗಳು ಸಂದಿರುವ ಈ ಹೊತ್ತಿನಲ್ಲಿ, ಮಹಿಳಾ ಸಮಾನತೆಯ ಹಾದಿಯಲ್ಲಿ ನಾವು ಸವೆಸಿದ ದೂರವನ್ನು ಅವಲೋಕಿಸಬೇಕಿದೆ. ಆರ್ಥಿಕ, ಸಾಮಾಜಿಕ ಮತ್ತು ಕೌಟುಂಬಿಕ ಸಮಾನತೆಯಿಲ್ಲದೆ ರಾಜಕೀಯ ಸ್ವಾತಂತ್ರ್ಯ ಅಪೂರ್ಣ ಎಂಬ ಅವರ ಸಂದೇಶ ಇಂದಿಗೂ ಇಡೀ ಸಮಾಜಕ್ಕೆ ದಾರಿದೀಪವಾಗಿದೆ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಯಾರು ದೇಶದ್ರೋಹಿಗಳು? ಮೋದಿ ಭಾರತದ ಹೊಸ ನಿರೂಪಣೆ ಅಪಾಯಕಾರಿ

ಮೋದಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯೇತರ ಪಕ್ಷಗಳ ಮುಖಂಡರನ್ನು, ಬಿಜೆಪಿ ವಿರೋಧಿಗಳನ್ನು,...

ಬೆಳಗಾವಿ | ಜಿಲ್ಲೆಯಲ್ಲಿ ಎರಡು ದಿನ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ರಾಜ್ಯದಲ್ಲಿ ಮುಂಗಾರು ಚಟುವಟಿಕೆ ದುರ್ಬಲವಾಗಿದ್ದರೂ, ಮುಂದಿನ ಎರಡು ದಿನ ಬೆಳಗಾವಿ ಜಿಲ್ಲೆ...

ಚಾಮರಾಜ ಕ್ಷೇತ್ರದ ಮೇಲೆ ‘ನಿರುದ್ಯೋಗಿ’ ಪ್ರತಾಪ್ ಸಿಂಹ ಕಣ್ಣು; ಹಿಂದುತ್ವವೇ ಅಸ್ತ್ರ

ಎರಡು ಬಾರಿ ಸಂಸದರಾಗಿದ್ದ ಪ್ರತಾಪ್ ಸಿಂಹ ಈಗ 2028ರ ಚಾಮರಾಜ ವಿಧಾನಸಭಾ...

ಇಸಿ ಆದೇಶವನ್ನು ‘ತೀವ್ರವಾಗಿ ವಿರೋಧಿಸುತ್ತಲೇ’ ಹೊಸ ಹೆಸರು, ಚಿಹ್ನೆಗಳ ಪಟ್ಟಿ ಸಲ್ಲಿಸಿದ ಟಿಎಂಸಿ

ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಮುಂಬರುವ ಉಪಚುನಾವಣೆಗಾಗಿ ಟಿಎಂಸಿ ಪಕ್ಷದ ಹೆಸರು ಹಾಗೂ...