- ಸ್ಥಳೀಯ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಿಲ್ಲ
- ಸ್ಥಳೀಯರ ಸತತ ಎರಡು ವರ್ಷಗಳ ಹೋರಾಟಕ್ಕೆ ಸಿಕ್ಕ ಫಲ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಾಜಕಾಲುವೆ ಹಾಗೂ ಬಫರ್ ಜೋನ್ ಅತಿಕ್ರಮಣ ಮಾಡಿಕೊಂಡು ಶೌಚಾಲಯ ಮತ್ತು ಈಜುಕೊಳ ನಿರ್ಮಿಸಿದ್ದ ಖಾಸಗಿ ಬಿಲ್ಡರ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಒತ್ತುವರಿ ತೆರವುಗೊಳಿಸುವಂತೆ ಆದೇಶ ನೀಡಿ, ₹85 ಲಕ್ಷ ದಂಡ ವಿಧಿಸಿದೆ.
ಖಾಸಗಿ ಬಿಲ್ಡರ್ಗಳು ಬೆಂಗಳೂರಿನ ಪೂರ್ವ ತಾಲೂಕು ಕುಂಬೇನ ಅಗ್ರಹಾರ ಮೂಲಕ ಹಾದು ಹೋಗಿದ್ದ ರಾಜಕಾಲುವೆ ಹಾಗೂ 15 ಮೀಟರ್ ಬಫರ್ ಜೋನ್ನಲ್ಲಿ ಒತ್ತುವರಿ ಮಾಡಿದ್ದರು.
ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವದನ್ನು ತೆರುವು ಮಾಡುವಂತೆ ಸ್ಥಳೀಯರೆಲ್ಲರೂ ತಿಳಿಸಿದ್ದರು. ಈ ವಿಚಾರವಾಗಿ ಸ್ಥಳೀಯ ಅಧಿಕಾರಿಗಳಿಗೆ ದೂರು ನೀಡಿದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಖಾಸಗಿ ಬಿಲ್ಡರ್ ಒತ್ತುವರಿ ಮಾಡಿಕೊಂಡಿರುವ ಪ್ರದೇಶವನ್ನು ತೆರವು ಮಾಡಿರಲಿಲ್ಲ.
ರಾಜಕಾಲುವೆ ಒತ್ತುವರಿ ತೆರುವು ಆಗದ ಹಿನ್ನಲೆ, ಸ್ಥಳೀಯರೆಲ್ಲರೂ ಸೇರಿ ರಾಜಕಾಲುವೆ ಹಾಗೂ ಬಫರ್ ಜೋನ್ ಉಳಿಸುವ ಯೋಚನೆಯಿಂದ ಈ ಬಗ್ಗೆ ಚನ್ನೈನಲ್ಲಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ದೂರು ನೀಡಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪಾರ್ಕಿಂಗ್ ವಿಚಾರಕ್ಕೆ ಜಗಳ : ಸಹೋದ್ಯೋಗಿಯ ಕೊಲೆ
ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವೂ ಒತ್ತುವರಿ ತೆರವು ಮಾಡುವಂತೆ ಬಿಲ್ಡರ್ಗೆ ತಿಳಿಸಿದೆ. ಜತೆಗೆ ಒತ್ತುವರಿ ಮಾಡಿಕೊಂಡಿರುವವರಿಗೆ ₹85 ಲಕ್ಷ ದಂಡ ವಿಧಿಸಿದೆ.
ಸ್ಥಳೀಯರ ಸತತ ಎರಡು ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದೆ. ನ್ಯಾಯಾಲಯದ ಈ ಆದೇಶದ ಬೆನ್ನಲ್ಲೆ, ಸ್ಥಳೀಯ ಅಧಿಕಾರಿಗಳು ರಾಜಕಾಲುವೆ ಒತ್ತುವರಿಯನ್ನು ತೆರವು ಮಾಡಿದ್ದಾರೆ. ಈಗ ರಾಜಕಾಲುವೆಯ ಬಫರ್ ಜೋನ್ನಲ್ಲಿ ‘ಗ್ರೀನ್ ಲ್ಯಾಂಡ್’ ನಿರ್ಮಾಣ ಮಾಡಲು ಮುಂದಾಗಿದ್ದಾರೆ.