ಚುನಾವಣಾ ಸಮೀಕ್ಷೆ | ಮುಕ್ತ ಚರ್ಚೆ ನಡೆಸಲು ಬಿ.ಎಲ್‌ ಸಂತೋಷ್‌ಗೆ ‘ಈದಿನ.ಕಾಮ್‌’ ಆಹ್ವಾನ

Date:

ಕರ್ನಾಟಕದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈದಿನ.ಕಾಮ್ Scientific random sampling ಮೂಲಕ ರಾಜ್ಯಾದ್ಯಂತ ನಡೆಸಿದ ಚುನಾವಣಾಪೂರ್ವ ಸಮೀಕ್ಷೆಯ ಫಲಿತಾಂಶವನ್ನು ಈಗಾಗಲೇ ಪ್ರಕಟಿಸಿದೆ.

- Advertisement -

ಕೃತಕವಾಗಿ ಜನಾಭಿಪ್ರಾಯ ಉತ್ಪಾದಿಸುವ ಕೆಲಸ ನಡೆಯುವಾಗ ಬಲಾಢ್ಯರು, ಪಟ್ಟಭದ್ರ ಹಿತಾಸಕ್ತಿ ಉಳ್ಳವರ ಅನಿಸಿಕೆಗಳೇ ಜನಾಭಿಪ್ರಾಯ ಎಂದು ಬಿಂಬಿತವಾಗುತ್ತವೆ. ಹಾಗಾಗಿ ಜನರ ನಿಜವಾದ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಜನರಿಗೇ ತಿಳಿಸುವ ಕೆಲಸ ಮಾಡುವುದು ಮಾಧ್ಯಮದ ಕರ್ತವ್ಯ ಎಂದು ಈದಿನ.ಕಾಮ್ ಬಲವಾಗಿ ನಂಬುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ....

ಬಳ್ಳಾರಿ ಚಲೋ | ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಪಾದಯಾತ್ರೆ:...

ಬಳ್ಳಾರಿ ಚಲೋ ಒಂದೆಡೆ ಎಸ್‌ಟಿ ಮತಗಳನ್ನು ಮರಳಿ ಸೆಳೆಯಲು ಶ್ರೀರಾಮುಲು ಅವರನ್ನು ಮುನ್ನಲೆಗೆ ತರುವ ಬಿಜೆಪಿ ತಂತ್ರವಾದರೆ, ಮತ್ತೊಂದೆಡೆ ವಿಜಯೇಂದ್ರ ನಾಯಕತ್ವದ ಶಕ್ತಿ ಪ್ರದರ್ಶನ ಮತ್ತು ಮೈತ್ರಿ ಪಕ್ಷ ಜೆಡಿಎಸ್‌ ಪಾದಯಾತ್ರೆಗೆ ಗೈರಾಗಿರುವಂತಹ...

AI ಕ್ರಾಂತಿಯ ಕರಾಳ ಮುಖ: ಯುವಜನರ ಆಲೋಚನಾ, ಚಿಂತನಾ...

ಕೃತಕ ಬುದ್ಧಿಮತ್ತೆಯ (ಎಐ) ಸಿದ್ಧ ಉತ್ತರವೇ ಇಂದಿನ ಯುವಜನರಿಗೆ ತೃಪ್ತ. ಇದರಿಂದಾಗಿ ಆಳವಾದ ಅಧ್ಯಯನಕ್ಕೆ ಬಿದ್ದಿದೆ ಕತ್ತರಿ. ತಂತ್ರಜ್ಞಾನದಿಂದ ನಮಗೆ ಹಲವು ಅನುಕೂಲವಿದೆ ಎಂಬುದು ಸ್ಫುಟ. ಆದರೆ ಅನುಕೂಲವನ್ನು ಸ್ವೀಕರಿಸುವ ಜತೆಗೆ, ಅದರಿಂದಾಗುವ...

ಅದೇ ಉದ್ದೇಶದಿಂದ ಈ ಚುನಾವಣಾಪೂರ್ವ ಸಮೀಕ್ಷೆಯನ್ನು ಈದಿನ.ಕಾಮ್‌ ನಡೆಸಿದೆ. ಯಾರು ಸೋಲುತ್ತಾರೆ, ಯಾರು ಗೆಲ್ಲುತ್ತಾರೆ ಎಂಬುದಕ್ಕಿಂತ ಜನರ ಸಮಸ್ಯೆಗಳು, ಯಾವ ಜಾತಿ ಸಮುದಾಯಗಳು/ಆರ್ಥಿಕ ಸ್ತರಗಳವರು ಏನು ಯೋಚಿಸುತ್ತಾರೆ ಎಂಬುದನ್ನು ಪರಿಶೀಲಿಸುವುದಕ್ಕೆ ನಾವು ಒತ್ತು ಕೊಟ್ಟಿದ್ದೆವು. ಹಾಗೆ ನೋಡಿದರೆ ಯಾರು ಮುಖ್ಯಮಂತ್ರಿ ಮುಖ ಎಂಬ ಪ್ರಶ್ನೆಯೇ ನಮ್ಮಲ್ಲಿ ಇರಲಿಲ್ಲ.

ಈಗ ನಾವು ಪ್ರಕಟಿಸಿದ ಸರ್ವೇ ಫಲಿತಾಂಶದ ಕುರಿತು ಭಿನ್ನ ಅಭಿಪ್ರಾಯಗಳು, ಟೀಕೆ, ವಿಮರ್ಶೆಗಳು ಹಾಗೂ ಮೆಚ್ಚುಗೆಗಳು ಬಂದಿವೆ. ಸಮೀಕ್ಷೆ ನಡೆಸಿರುವ ವಿಧಾನ ವೈಜ್ಞಾನಿಕವಾಗಿದೆ ಎಂದು ಹಲವರು ಹೇಳಿದ್ದಾರೆ. ಅವನ್ನು ನಾವು ಗೌರವಿಸಿ, ಸ್ವಾಗತಿಸುತ್ತೇವೆ; ಅಗತ್ಯವಿದ್ದರೆ ತಿದ್ದಿಕೊಳ್ಳುತ್ತೇವೆ.

ಇದೆಲ್ಲದರ ನಡುವೆ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದು, ‘ಇದು ಕೃತಕವಾಗಿ ತಯಾರಿಸಲಾದ (Cooked up) ಸಮೀಕ್ಷೆ’ಯೆಂದು ಹೇಳಿದ್ದಾರೆ. ಅವರ ಟೀಕೆ ನಿರಾಧಾರವಾದುದು. ಹಾಗಾಗಿ, ಅವರು ನಮ್ಮ ಸರ್ವೇ ವಿಧಾನ, ಡೇಟಾವನ್ನು ಖುದ್ದಾಗಿ ಪರಿಶೀಲಿಸಲು ನಮ್ಮ ಕಚೇರಿಗೆ ಬರಬೇಕೆಂದೂ, ಈ ಕುರಿತಂತೆ ಮುಕ್ತ, ಪಾರದರ್ಶಕ ಚರ್ಚೆಯನ್ನು ನಡೆಸಬೇಕೆಂದು ಪ್ರೀತಿಯಿಂದ ಆಹ್ವಾನಿಸುತ್ತಿದ್ದೇವೆ.

ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ, ವಿಜ್ಞಾನವಾಗಿ ಬೆಳೆಯುತ್ತಿರುವ ‘ಜನಾಭಿಪ್ರಾಯ ಸಂಗ್ರಹ’ದ (Psephology) ತಿಳಿವಳಿಕೆಯನ್ನು ಎಲ್ಲರೂ ಸೇರಿ ಇನ್ನಷ್ಟು ಬೆಳೆಸೋಣ. ಪೂರ್ವಗ್ರಹಗಳಿಂದ ಮುಕ್ತರಾಗಿ ಮುಕ್ತ ಚರ್ಚೆಯಲ್ಲಿ ಭಾಗಿಯಾಗೋಣ.

ಬಿ.ಎಲ್.ಸಂತೋಷ್ ಅವರ ಆಗಮನವನ್ನು ಎದುರು ನೋಡುತ್ತಿದ್ದೇವೆ…

ಸಂಪಾದಕರು,
ಈದಿನ.ಕಾಮ್ ಪರವಾಗಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಳೇ ಮೈಸೂರು: ಮಹಿಳಾ ರಾಜಕಾರಣಕ್ಕೆ ದಿಕ್ಕು ತೋರಿದ ‘ಗುಂಡ್ಲುಪೇಟೆ ಅಮ್ಮ’

ಹಳೇ ಮೈಸೂರು ಭಾಗದ ರಾಜಕೀಯ ಇತಿಹಾಸವನ್ನು ಗಮನಿಸಿದಾಗ, ಪುರುಷ ಪ್ರಧಾನ ರಾಜಕಾರಣದ...

ಹವಾಮಾನ | ರಾಜ್ಯದ ಹಲವೆಡೆ ಒಣಹವೆ, ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆ

ಕರ್ನಾಟಕದಾದ್ಯಂತ ಇಂದು ಒಣಹವೆ ಮುಂದುವರಿಯುವ ಸಾಧ್ಯತೆಯಿದ್ದು, ಮಧ್ಯಾಹ್ನದ ನಂತರ ಕೆಲವೆಡೆ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್...