ಜಾನಪದ ಅಕಾಡೆಮಿ | ಕಲಾವಿದರಿಗೆ ಪ್ರಶಸ್ತಿ ಪ್ರಕಟ; ಸಂಪೂರ್ಣ ಪಟ್ಟಿ

Date:

ಜಾನಪದ ಅಕಾಡೆಮಿಯು ಜಾನಪದ ಪ್ರಶಸ್ತಿ ಪ್ರಕಟಿಸಿದೆ. 30 ಜಿಲ್ಲೆಗಳ 30 ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿ, ಇಬ್ಬರಿಗೆ ಜಾನಪದ ತಜ್ಞ ಪ್ರಶಸ್ತಿ, ಐವರಿಗೆ ಪುಸ್ತಕ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

- Advertisement -

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್‌, “ಶೀಘ್ರವೇ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದಿನಾಂಕ, ಸ್ಥಳ ನಿಗದಿ ಮಾಡಲಾಗುವುದು. ಬೆಂಗಳೂರಿನಿಂದ ಹೊರಗೆ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶವಿದೆ” ಎಂದು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮೈಕೆಲ್ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್ ಮಟ್ಟದಿಂದ...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

ವಾರ್ಷಿಕ ಗೌರವ ಪ್ರಶಸ್ತಿಯು ತಲಾ ₹ 25,000, ತಜ್ಞ ಪ್ರಶಸ್ತಿಯು ತಲಾ ₹ 50,000, ಪುಸ್ತಕ ಪ್ರಶಸ್ತಿಯು ತಲಾ ₹ 25,000 ನಗದು, ಸ್ಮರಣಿಕೆ, ಶಾಲು, ಹಾರ, ಫಲತಾಂಬೂಲ ಹೊಂದಿದೆ.

ಇದನ್ನು ಓದಿದ್ದೀರಾ? ಬೀದರ್‌ | ಕರ್ನಾಟಕ ಜಾನಪದ ಅಕಾಡೆಮಿ ಸಹ ಸದಸ್ಯರಾಗಿ ವಿಜಯಕುಮಾರ್‌ ಸೋನಾರೆ ನೇಮಕ

ಜೀ.ಶಂ.ಪ ತಜ್ಞ ಪ್ರಶಸ್ತಿಗೆ ದಕ್ಷಿಣ ಕನ್ನಡದ ಕೆ. ಚಿನ್ನಪ್ಪ ಗೌಡ ಹಾಗೂ ಬಿ.ಎಸ್. ಗದ್ದಗಿಮಠ ತಜ್ಞ ಪ್ರಶಸ್ತಿಗೆ ವಿಜಯನಗರದ ಮಂಜುನಾಥ ಬೇವಿನಕಟ್ಟೆ ಅವರನ್ನು ಆಯ್ಕೆ ಮಾಡಲಾಗಿದೆ.

ದಕ್ಷಿಣ ಕನ್ನಡದ ಲೀಲಾವತಿ (ನಾಟಿವೈದ್ಯೆ), ಉಡುಪಿಯ ಅಪ್ಪಿ (ಜನಪದ ಸೂಲಗಿತ್ತಿ), ಬೆಂಗಳೂರು ನಗರ ಜಿಲ್ಲೆಯ ಕೆ.ಎಂ. ರಾಮಯ್ಯ (ಏಕತಾರಿ, ತಂಬೂರಿ), ಬೆಂಗಳೂರು ಗ್ರಾಮಾಂತರದ ಓಬಮ್ಮ (ಸೋಬಾನೆ), ರಾಮನಗರ ಜಿಲ್ಲೆ ರಂಗಯ್ಯ (ಪಟ ಕುಣಿತ), ಚಿಕ್ಕಬಳ್ಳಾಪುರದ ದೊಡ್ಡಕೂರ್ಲಪ್ಪ (ತಮಟೆ ವಾದನ), ಶಿವಮೊಗ್ಗ ಜಿಲ್ಲೆ ಟೀಕಪ್ಪ (ಡೊಳ್ಳು ಕುಣಿತ) ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.

ತುಮಕೂರು ಜಿಲ್ಲೆಯ ಕದರಮ್ಮ (ಜನಪದ ಹಾಡು), ಚಿಕ್ಕಮಗಳೂರಿನ ನಾಗರಾಜಪ್ಪ ವೈ.ಪಿ. (ಕರಡಿಗೆ ಕಾವ್ಯ), ಕೋಲಾರದ ತೋಪಣ್ಣ ಮಂಚಂಡಹಳ್ಳಿ (ಕೀಲುಕುದುರೆ), ಬಳ್ಳಾರಿಯ ದಳವಾಯಿ ಚಿತ್ತಪ್ಪ (ಜನಪದ ಮಹಾಕಾವ್ಯ), ಹಾವೇರಿಯ ಸಾವಕ್ಕಾ ಓಲೇಕಾರ (ಸೋಬಾನೆ, ಸಂಪ್ರಾದಯ ಪದ), ರಾಯಚೂರಿನ ಶಾಂತಮ್ಮ (ಬುರಕಥೆ), ಯಾದಗಿರಿಯ ಅಮಯ್ಯಸ್ವಾಮಿ ಹಿರೇಮಠ (ಭಜನೆ) ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಇದನ್ನು ಓದಿದ್ದೀರಾ? ಕಲಬುರಗಿ | ಅಸ್ಪೃಶ್ಯತೆಯ ಕಾರಣದಿಂದ ಜಾನಪದ ಕಲೆಗಳು ನಶಿಸುತ್ತಿವೆ: ಪ್ರೊ. ದಯಾನಂದ ಅಗಸರ

ಉತ್ತರ ಕನ್ನಡದ ಈರಯ್ಯ ಮೊಗೇರ (ಕಾರಿನ್‌ಮನೆ ಕುಣಿತ, ಹೌಂದೇರಾಯನ ಕುಣಿತ), ಕೊಪ್ಪಳದ ರೇವಣಪ್ಪ (ಡೊಳ್ಳಿನ ಹಾಡು, ಕುಣಿತ), ಧಾರವಾಡದ ರಾಮಪ್ಪ ಬಸವಂತಪ್ಪ ಮೂಲಗಿ (ಹಂತಿಪದ), ಮೈಸೂರಿನ ಗುರುಸಿದ್ದಯ್ಯ (ತಂಬೂರಿಪದ), ಬೆಳಗಾವಿಯ ಶಿವನಪ್ಪ ಚಂದರಗಿ (ಡೊಳ್ಳುಕುಣಿತ), ಗದಗದ ಬಸಪ್ಪ ಹಡಗಲಿ (ಗೀಗೀ ಪದ) ಅವರಿಗೆ ವಾರ್ಷಿಕ ಗೌರವ ಪ್ರಶಸ್ತಿ ಘೋಷಿಸಲಾಗಿದೆ.

ಮಂಡ್ಯದ ಗುರುಬಸವಯ್ಯ (ತಂಬೂರಿಪದ), ಕಲಬುರಗಿ ಅಕ್ಕಮ್ಮ (ಸಂಪ್ರದಾಯ ಪದ), ಬೀದರ್‌ನ ಏಸಪ್ಪಾ (ಶಹನಾಯಿ), ವಿಜಯಪುರದ ಇಮಾಂಬಿ ಇಮಾಮಸಾಬ (ತತ್ವಪದ), ಬಾಗಲಕೋಟೆಯ ಹನಮಂತ ವೆಂಕಪ್ಪ ಸುಗತೇಕರ (ಗೊಂದಳಿಪದ), ಚಾಮರಾಜನಗರದ ಗೌರಮ್ಮ (ಸೋಬಾನೆಪದ), ದಾವಣಗೆರೆ ಜಿಲ್ಲೆಯ ಕಾಟಮ್ಮ (ಕಥನ ಕಾವ್ಯ), ಹಾಸನದ ವೀರಭದ್ರಯ್ಯ (ತತ್ವಪದ), ಚಿತ್ರದುರ್ಗದ ಸಿರಿಯಮ್ಮ (ಮಹಾಕಾವ್ಯ), ಕೊಡಗು ಜಿಲ್ಲೆಯ ದೇವಕಿ ಕೆ.ಸಿ. (ಊರ್ಟಿಕೋಟ್) ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

janapada award

ಪುಸ್ತಕ ಪ್ರಶಸ್ತಿ ಘೋಷಣೆ

2022ರ ಸಾಲಿನಲ್ಲಿ ಬೆಂಗಳೂರು ಬಿ.ಎಸ್. ಸ್ವಾಮಿ ಅವರ ‘ಜಾನಪದ ಲೇಖನ ಗುಚ್ಚ’, ಕುರುವ ಬಸವರಾಜು ಅವರ ‘ಭೌತಿಕ ವಸ್ತು ವಿಜ್ಞಾನ ಜಾನಪದ ಮತ್ತು ವಸ್ತು ಸಂಗ್ರಹಾಲಯಗಳ ಕುರಿತ ಲೇಖನಗಳು’, ನಾಗ ಎಚ್. ಹುಬ್ಬಿ ಜಾರ್ಖಂಡ್ ಅವರ ‘ಆದಿವಾಸಿ ಸಂಸ್ಕೃತಿ’, 2023ನೇ ಸಾಲಿನಲ್ಲಿ ಮೈಸೂರಿನ ವ.ನಂ. ಶಿವರಾಮು ಅವರ ‘ಜನಪದ-ಜಾನಪದ ಮತ್ತು ಕ್ಷೇತ್ರಕಾರ್ಯ’ ಬೆಂಗಳೂರಿನ ವಿಜಯಶ್ರೀ ಸಬರದ ಅವರ ‘ಸಬರದ ಮತ್ತು ಜಾನಪದ’ ಕೃತಿಗಳನ್ನು ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಕಸ್ತೂರಿರಂಗನ್ ವರದಿಗೆ ಪಕ್ಷಾತೀತ ವಿರೋಧ

ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕು ಬಾಳೆಹೊನ್ನೂರಿನಲ್ಲಿ ಕಸ್ತೂರಿರಂಗನ್ ವರದಿ ಕುರಿತು ಸಾರ್ವಜನಿಕರ...

ಚಿಕ್ಕಮಗಳೂರು | ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿ ಸಹಜ: ನ್ಯಾಯಕ್ಕಾಗಿ ಹೋರಾಡಬೇಕು; ಕೋಟ ಶ್ರೀನಿವಾಸ್ ಪೂಜಾರಿ

ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕು ಬಾಳೆಹೊನ್ನೂರಿನಲ್ಲಿ ಕಸ್ತೂರಿರಂಗನ್ ವರದಿ ಕುರಿತು ಸಾರ್ವಜನಿಕರ...