ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕು ಬಾಳೆಹೊನ್ನೂರಿನಲ್ಲಿ ಕಸ್ತೂರಿರಂಗನ್ ವರದಿ ಕುರಿತು ಸಾರ್ವಜನಿಕರ ಸಭಾ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಯವರು ಆಗಮಿಸಿದ ಸಂದರ್ಭದಲ್ಲಿ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿ ಇರುತ್ತೆ ಆದರೇ ಸಮಸ್ಯೆ ಬಂದಾಗ ನ್ಯಾಯದ ಪರವಾಗಿ ಕೆಲಸ ಮಾಡಬೇಕಿದೆ. 2012 ಮಾಧವ ಗಾಡ್ಗಿಳ್ ವರದಿ 1 ಸಾವಿರ ಚ. ಕಿಲೋಮೀಟರ್ ಹಾಗೆಯೇ, ಕಸ್ತೂರಿ ರಂಗನ್ ವರದಿ 20 ಸಾವಿರ ಚ. ಕಿಲೋ ವರೆಗೆ ಕರ್ನಾಟಕದಲ್ಲಿದೆ. ಅಡಿಕೆ, ಕಾಫಿ, ಮೆಣಸನ್ನು ಕಾಡು ಎಂದು ತಿಳಿದುಕೊಂಡಿದ್ದಾರೆ. ಕೆರಳ ರಾಜ್ಯದಲ್ಲಿ 13 ಸಾವಿರ ಚ. ಕಿಲೋ ಸಮೀಕ್ಷೆ ಮಾಡಿ, ಅದರಲ್ಲಿ 1.5 ಸಾವಿರ ಚ. ಕಿಲೋ ಅಷ್ಟು ವರದಿ ಕೊಟ್ಟಿದೆ. ನಮ್ಮ ಭಾಗದಲ್ಲಿ 6ತಿಂಗಳು ಸಮಯ ಪಡೆದು ಕೇಂದ್ರ ಸರ್ಕಾರಕ್ಕೆ ಗಮನಕ್ಕೆ ತರಬೇಕಿದೆ. ವಾಸ್ತವಿಕ ಸಮಿತಿಯನ್ನ ರಚನೆ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ನೂರಾರು ವರ್ಷ ಕೃಷಿ ಮಾಡಿದ್ದೇವೆ; ಕಾಯ್ದೆಯಿಂದ ಒಕ್ಕಲೆಬ್ಬಿಸಬೇಡಿ: ಶಾಸಕಿ ನಯನ ಮೋಟಮ್ಮ
ಹಾಗೆಯೇ, ಮಲೆನಾಡಿನ ಪ್ರಮುಖ ಬೆಳೆ ಅಡಿಕೆ ಇದನ್ನೂ ರದ್ದು ಪಡಿಸಿದರೆ ಇಲ್ಲಿನ ಅಡಿಕೆ ಬೆಳೆಗಾರರಿಗೆ ಸಂಕಷ್ಟವಾಗುತ್ತದೆ. ಈ ಹಿಂದೆ 62 ಸಾವಿರ ಬೆಲೆ ಇತ್ತು. ಈಗ 42 ಸಾವಿರ ಆಗಿದೆ. ಆಗಾಗಿ ಅಡಿಕೆ ಬೆಳೆ ಉಳಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.
This video cannot be played in your browser. Open the video directly





