ಬೀದರ್ | ಶರಣರು ಕಟ್ಟ ಬಯಸಿದ್ದ ಸಮ ಸಮಾಜ ಕನಸಾಗಿಯೇ ಉಳಿದಿದೆ : ಡಾ. ಸಿದ್ದನಗೌಡ ಪಾಟೀಲ

Date:

  • ಹೊಸ ಪರಿಕಲ್ಪನೆ ನೀಡಿದ ವಚನ ಚಳವಳಿ ಹೆಚ್ಚು ಪ್ರಸ್ತುತ
  • ವಚನ ಚಳವಳಿಯ ಪ್ರಸ್ತುತತೆ 72ನೇ ಉಪನ್ಯಾಸ ಸಮಾರಂಭ

ಜಾಗತಿಕರಣ ಮತ್ತು ಕಾರ್ಪೋರೆಟ್ ಕಂಪನಿಗಳು ಆಳುವ ಇಂದಿನ ಕಾಲದಲ್ಲಿ ಅರ್ಥಶಾಸ್ತ್ರಕ್ಕೆ, ಸಮಾಜಕ್ಕೆ, ಸಾಮಾನ್ಯರ ಬದುಕಿಗೆ ಹೊಸ ಪರಿಕಲ್ಪನೆ ನೀಡಿದ ವಚನ ಚಳವಳಿ ಹೆಚ್ಚು ಪ್ರಸ್ತುತವಾಗುತ್ತದೆ ಎಂದು ಹಿರಿಯ ಚಿಂತಕ ಡಾ. ಸಿದ್ದನಗೌಡ ಪಾಟೀಲ ಹೇಳಿದರು.

- Advertisement -

ಬಸವ ಜಯಂತಿಯ ಪ್ರಯುಕ್ತ ಡಾ. ಜಯದೇವಿ ತಾಯಿ ಲಿಗಾಡೆ ಪ್ರತಿಷ್ಠಾನವು ಬಸವಕಲ್ಯಾಣದ ನೀಲಾಂಬಿಕಾ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ “ವಚನ ಚಳುವಳಿಯ ಪ್ರಸ್ತುತತೆ” 72ನೇ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮೈಕೆಲ್ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್ ಮಟ್ಟದಿಂದ...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

“ಆಧುನಿಕ ಅರ್ಥಶಾಸ್ತ್ರ ಎಲ್ಲವನ್ನೂ ತನಗೇ ಬೇಕೆಂದು ಹೇಳುವಾಗ ಶರಣರ ದಾಸೋಹ ಸಿದ್ದಾಂತ ಸಮಾಜವಾದದ ಮಹಾ ಪರಿಕಲ್ಪನೆಯಾಗಿದೆ. ವಚನಕಾರರನ್ನು ನಿರಂತರವಾಗಿ ಅಧ್ಯಯನ ಮತ್ತು ಅನುಸಂಧಾನ ಮಾಡುವುದರ ಮೂಲಕವೇ ಪ್ರಸ್ತುತಗೊಳಿಸಿಕೊಳ್ಳಬೇಕಾಗುತ್ತದೆ. ವಚನಗಳ ಅಂತರ್‌ಶಿಸ್ತೀಯ ಅಧ್ಯಯನದಿಂದಲೇ ಹೊಸ ದೃಷ್ಟಿಕೋನ ಮತ್ತು ಒಳನೋಟ ದಕ್ಕಿಸಿಕೊಳ್ಳಲು ಸಾಧ್ಯ” ಎಂದರು.

“ಕಾರ್ಪೋರೆಟ್‌ ಜಗತ್ತಿಗೆ ವಿತ್ತೀಯ ಮದ, ಪ್ರಭುತ್ವಕ್ಕೆ ಅಹಂಕಾರಮದ, ಮತ ಧರ್ಮಕ್ಕೆ ಕುಲಮದ ಸೇರಿದ್ದರಿಂದ ಶರಣರು ಕಟ್ಟ ಬಯಸಿದ್ದ ಸಮ ಸಮಾಜ ಈಗಲೂ ಕನಸಾಗಿಯೇ ಉಳಿದಿದೆ. ಆಂತರಿಕ ಆದಾಯ ವಿತರಣೆಯನ್ನು ದಾಸೋಹ ಎಂದು ಶರಣರು ಕರೆದರು. ಸೋಹಂ ಆಂತರಿಕವಾದದ್ದು. ದಾಸೋಹಂ ಭೌತಿಕವಾದದ್ದು. ಶ್ರಮದಿಂದ ಮತ್ತು ಶ್ರಮಿಕರಿಂದ ಸಂಪತ್ತು ವೃದ್ಧಿಯಾಗುತ್ತದೆ ಎಂದ ಶರಣರು ಕಾಯಕದ ಕಲ್ಪನೆ ನೀಡಿದರು” ಎಂದು ಹೇಳಿದರು.

“ಪ್ರಾಣ ಬಲಿ ವಿರೋಧಿಸಿದ ಶರಣರು ಹಿಂಸೆಯನ್ನು ಎಂದಿಗೂ ಒಪ್ಪಿದವರಲ್ಲ. ತಮ್ಮ ತತ್ವ ಸಿದ್ದಾಂತದಲ್ಲಿ ಎಲ್ಲ ಬಗೆಯ ದಾರಿಗಳು ಮುಕ್ತವಾಗಿಟ್ಟಿದ್ದರು. ಬಸವಣ್ಣ ಮತ್ತು ವಚನಕಾರರನ್ನು ಧಾರ್ಮಿಕ ಪರಿಪ್ರೆಕ್ಷೆಯಿಂದ ಅಧ್ಯಯನದ ಪರಿಪ್ರೆಕ್ಷೆಗೆ ತರುವ ಅಗತ್ಯವಿದೆ. ಬಹುಶಿಸ್ತೀಯ ಮತ್ತು ಅಂತರ್‌ಶಿಸ್ತೀಯ ಅನುಸಂಧಾನದಿಂದ ವಚನಕಾರರನ್ನು ಹೆಚ್ಚು ಆಳದಿಂದ ಅರಿಯಲು ಸಾಧ್ಯ. ಹೊರತು ಬರಿ ಆರಾಧನೆಯಿಂದಲ್ಲ” ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಗುಮಗೇರಿ ಗ್ರಾಮದಲ್ಲಿ ಮತದಾನ ಜಾಗೃತಿ

ಪತ್ರಕರ್ತ ಸಿದ್ದಪ್ಪ ಮೂಲಗೆ ಮಾತನಾಡಿ, “ವಚನ ಚಳವಳಿಯ ಕುರಿತು ನಡೆಸುವ ಈ ಉಪನ್ಯಾಸ ಮತ್ತು ಸಂವಾದ ಅತ್ಯಂತ ಸರಳವಾಗಿ ಏರ್ಪಡಿಸಿದ್ದು, ವಚನಕಾರರಿಗೆ ನೀಡುವ ಗೌರವವಾಗಿದೆ. ಅದ್ಧೂರಿತನದಲ್ಲಿ ನಿಜವಾದ ತತ್ವಗಳ ಸಂಕಥನವೇ ಮರೆತು ಹೋಗುತ್ತದೆ” ಎಂದರು.

ಡಾ. ಭೀಮಾಶಂಕರ ಬಿರಾದರಾರ ಮಾತನಾಡಿ, “ಚಳವಳಿಗಳ ಗೈರುಹಾಜರಾದ ಈ ಕಾಲದಲ್ಲಿ ವಚನ ಚಳವಳಿಯನ್ನು ನೆನಪಿಸುವುದು ಎಂದರೆ, ನಮ್ಮ ನೆಲದ ಸಾಂಸ್ಕೃತಿಕ ಸ್ಮೃತಿಯನ್ನು ವಚನಕಾರರ ತತ್ವ ಸಿದ್ದಾಂತವನ್ನು ಮರು ವಿಶ್ಲೇಷಣೆಗೆ ಒಳಗಾಗಿಸುವುದೆಂದೆ ಅರ್ಥ” ಎಂದು ಹೇಳಿದರು.

ಬೆಂಗಳೂರಿನ ನವಕರ್ನಾಟಕ  ಪ್ರಕಟಿಸಿರುವ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕನ್ನಡ ಲೇಖಕರು ಮಾಲಿಕೆಯಲ್ಲಿ ಡಾ. ಸಿದ್ದನಗೌಡ ಪಾಟೀಲ ಬರೆದ ‘ಎಂ ಎಂ ಕಲಬುರ್ಗಿ’ ಕೃತಿ ಈ ಸಂದರ್ಭದಲ್ಲಿ ಬಿಡುಗಡೆ ಮಾಡಿ ಸಮಾರಂಭ ಉದ್ಘಾಟಿಸಲಾಯಿತು.

ಪ್ರತಿಷ್ಠಾನದ ಅಧ್ಯಕ್ಷ ಎಸ್ ಜಿ ಹುಡೆದ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಸಿ ಬಿ ಪರತಾಪೂರೆ, ಗುರುಲಿಂಗಪ್ಪಾ ಧಬಾಲೆ, ರವೀಂದ್ರನಾಥ ನಾರಾಯಣಪೂರ, ರೇವಣಸಿದ್ದಪ್ಪ ದೊರೆ, ವಿಠೋಬಾ ಡೊಣ್ಣೆಗೌಡ, ಸಂಜು ನಡುಕರ, ರಮೇಶ ಉಮಾಪೂರೆ, ಶಾಲಿವಾನ ಕಾಕನಾಳೆ, ಗುಂಡಪ್ಪ ಮಡಕೆ, ಭೀಮಾಶಂಕರ ಮಾಶಾಳಕರ, ರಾಜಕುಮಾರ ಬಿರಾದರ, ಶಾಲಿವಾನ ಕಾಕನಾಳೆ, ವೀರಶೆಟ್ಟಿ ಪಾಟೀಲ, ಶಿವರಾಜ ನೀಲಕಂಠೆ ಮೊದಲಾದವರಿದ್ದರು.

ದೇವೆಂದ್ರ ಬರಗಾಲೆ ನಿರುಪಿಸಿದರು. ಶಿವಾಜಿ ಮೇತ್ರೆ ಸ್ವಾಗತಿಸಿದರು. ಚಂದ್ರಕಾಂತ ಅಕ್ಕಣ್ಣ ವಂದಿಸಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಹಾವು ಕಚ್ಚಿದರೆ ಕ್ಷಣವೂ ತಡಮಾಡದೆ, ಸರ್ಕಾರಿ ಆಸ್ಪತ್ರೆಯತ್ತ ಧಾವಿಸಿ: ಡಾ. ಮಹೇಶ ಕೋಣಿ

ಹಾವು ಕಡಿತಕ್ಕೆ ಒಳಗಾದವರು ಆತಂಕಕ್ಕೊಳಗಾಗಿ ನಾಟಿ ಚಿಕಿತ್ಸೆ, ನಕಲಿ ವೈದ್ಯರ ಮೊರೆ...

ರಾಯಚೂರು | ಕೆ. ಶಾಂತಪ್ಪ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವುದು ಸಂತಸದ ವಿಚಾರ: ಬೋಸರಾಜು

ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಕೆ. ಶಾಂತಪ್ಪ ಅವರು ಜವಾಬ್ದಾರಿ...

ಉಡುಪಿ | ಕಾರ್ಕಳದಲ್ಲಿ ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು–ಬಸ್ ನಡುವೆ ಅಪಘಾತ

ಕಾರ್ಕಳ–ಮೂಡುಬಿದಿರೆ ರಸ್ತೆಯ ಸಾಣೂರು ಗ್ರಾಮದ ವ್ಯಾಪ್ತಿಯಲ್ಲಿ ಮಾಜಿ ಸಚಿವ ರಮಾನಾಥ ರೈ...

ಕಲಬುರಗಿ | ಲೋಕ ಅದಾಲತ್‌ನಲ್ಲಿ 179 ಪ್ರಕರಣ ಇತ್ಯರ್ಥ; ₹4.93 ಕೋಟಿ ಪರಿಹಾರಕ್ಕೆ ಆದೇಶ

ನಗರದ ಹೈಕೋರ್ಟ್ ಪೀಠದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಮೋಟಾರು...