ಧಾರವಾಡ | ಇಂದಿನ ವಿದ್ಯಾರ್ಥಿಗಳು ಓದುವಿಕೆಗೆ ಹೆಚ್ಚು ಮಹತ್ವ ಕೊಡಬೇಕಿದೆ: ಡಾ. ಮಾಸನಕಟ್ಟಿ

Date:

ಮಕ್ಕಳಲ್ಲಿ ಅದಮ್ಯವಾದ ಸೃಜನಶೀಲ ಮನಸ್ಸಿರುತ್ತದೆ. ಅದನ್ನು ಪಾಲಕರು ಹಾಗೂ ಗುರುಗಳು ಗುರುತಿಸಿ ಬೆಳೆಸಬೇಕು. ಕವಿತೆ ರಚನೆ ಸುಲಭವಲ್ಲ. ಅದಕ್ಕೆ ಗಟ್ಟಿಯಾದ ಓದು, ಚಿಂತನೆಯ ಅಗತ್ಯವಿದೆ. ಇಂದಿನ ವಿದ್ಯಾರ್ಥಿಗಳು ಓದುವಿಕೆಗೆ ಹೆಚ್ಚು ಮಹತ್ವ ಕೊಡಬೇಕಾಗಿದೆ ಎಂದು ಸಾಹಿತಿ ಡಾ. ಚಿದಾನಂದ ಮಾಸನಕಟ್ಟಿ ಅಭಿಪ್ರಾಯ ಪಟ್ಟರು.

- Advertisement -

ಧಾರವಾಡ ನಗರದ ಮಕ್ಕಳ ಅಕಾಡೆಮಿಯಲ್ಲಿ 22ನೇ ತ್ರಿಭಾಷಾ ಮಕ್ಕಳ ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, “ಕಾವ್ಯವು ಮಕ್ಕಳಿಗೆ ಆಲೋಚನೆ, ಚಿಂತನೆ ಹಾಗೂ ಅಭಿಪ್ರಾಯವನ್ನು ಮನಮುಟ್ಟುವಂತೆ ಪ್ರತಿಪಾದಿಸಲು ಸಹಾಯಕವಾಗುತ್ತದೆ. ಕವಿತೆಗಳ ರಚನೆಯಿಂದ ಕೀರ್ತಿ, ಜ್ಞಾನ, ಸಂಪತ್ತು, ಅನಿಷ್ಠಗಳ ನಿವಾರಣೆ, ಆನಂದ ದೊರೆಯುತ್ತದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ESA ತೂಗುಗತ್ತಿ: ಕಸ್ತೂರಿ ರಂಗನ್ ವರದಿ ಕುರಿತು ಅರಣ್ಯ...

“ಗ್ರಾಮದ ಕನಿಷ್ಠ 20 ಪ್ರತಿಶತದಷ್ಟು ಪ್ರದೇಶವು ‘ಪರಿಸರ ಸೂಕ್ಷ್ಮ ಪ್ರದೇಶ’ (ESA) ಎಂದು ಕಂಡುಬಂದರೆ, ಉಳಿದ 80% ಪ್ರದೇಶ ನಗರೀಕರಣಗೊಂಡಿದ್ದರೂ ಇಡೀ ಗ್ರಾಮವನ್ನು ESA ಎಂದು ಪರಿಗಣಿಸುವ ನೀತಿಯನ್ನು ಕಸ್ತೂರಿ ರಂಗನ್ ವರದಿ...

ರಾಮದುರ್ಗ, ಸವದತ್ತಿ ಬರ ಘೋಷಣೆಗೆ ರೈತರ ಆಗ್ರಹ: 10...

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ ಅದು ಆಗಿಲ್ಲ. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಇನ್ನೂ ಅವಕಾಶವಿದೆ" ಎಂದು ಕೃಷಿ ಅಧಿಕಾರಿಗಳು ಹೇಳಿದರು. ಮುಂಗಾರು ಆರಂಭದಲ್ಲಿ ಉತ್ತಮ...

ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ...

ಹಿಮಾಲಯವು ಕೇವಲ ಮಂಜಿನ ಬೆಟ್ಟಗಳ ಸಮೂಹವಲ್ಲ; ಅದು ಭಾರತದ ಆರ್ಥಿಕ ಸ್ಥಿರತೆ, ಆಹಾರ ಭದ್ರತೆ ಮತ್ತು ಶಕ್ತಿ ಭದ್ರತೆಯ ತಾಣ. ಇಂದಿನ ಜಾಗತಿಕ ತಾಪಮಾನ ಏರಿಕೆಯ ಸವಾಲನ್ನು ಭಾರತವು ಕೇವಲ ಪರಿಸರ ಸಮಸ್ಯೆಯಾಗಿ...

ಸಂಸ್ಥೆಯ ಅಧ್ಯಕ್ಷ ಡಾ. ರಾಜೇಂದ್ರ ದೇಶಪಾಂಡೆ ಮಾತನಾಡಿ, “ಮಕ್ಕಳಲ್ಲಿರುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುವುದೇ ನಮ್ಮ ಕರ್ತವ್ಯವಾಗಿದ್ದು, ಕೇವಲ ಅಂಕ ಗಳಿಕೆಯ ಯಾಂತ್ರಿಕ ಕಲಿಕೆಗಿಂತ ಅನುಭವಾತ್ಮಕ ಕಲಿಕೆ ಅಗತ್ಯವಿದೆ. ಮಕ್ಕಳು ವಾಚಿಸಿದ ಆಯ್ದ ಕವನಗಳನ್ನು ಡಾ. ಬಾಳಪ್ಪ ಚಿನಗುಡಿಯವರ ಸಂಪಾದಕತ್ವದಲ್ಲಿ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಬೆಳೆಯುವ ಮಕ್ಕಳ ಕವಿ ಮನಸ್ಸುಗಳಿಗೆ ಪ್ರೋತ್ಸಾಹಿಸಲಾಗುವುದು” ಎಂದರು.

ಕನ್ನಡ ವಿಭಾಗದಲ್ಲಿ ಕು, ವೈಷ್ಣವಿ ಪ್ರಥಮ, ಕು, ಪ್ರಿಯಾಂಕಾ ದ್ವಿತೀಯ, ಕು, ಶೃತಿ ಗಾಣಿಗೇರ ತೃತೀಯ ಸ್ಥಾನ , ಹಿಂದಿ ವಿಭಾಗದಲ್ಲಿ ಕು,ಶೌರ್ಯ ಬರ್ನವಾಲ ಪ್ರಥಮ,ಕು, ಫೀಜಾ ದ್ವಿತೀಯ, ಕು, ಆಧ್ಯಶ್ರೀ ಚಂದ್ರಾ ತೃತೀಯ ಸ್ಥಾನ, ಇಂಗ್ಲೀಷ್ ವಿಭಾಗದಲ್ಲಿ ಕು,ತೇಜಸ್ಸ್ ಹೆಗಡೆ ಪ್ರಥಮ, ಕು, ಅವನಿ ದ್ವಿತೀಯ, ಕು ಸಾನ್ವಿ ಪಾಟೀಲ ತೃತೀಯ ಸ್ಥಾನವನ್ನು ಪಡೆದರು. ಇವರಿಗೆ ಪ್ರಶಸ್ತಿ ಪತ್ರ, ಫಲಕವನ್ನು ಹಾಗೂ ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಶಸ್ತಿ ಪತ್ರವನ್ನು ಅಧ್ಯಕ್ಷರು ವಿತರಿಸಿದರು.

ಇದನ್ನೂ ಓದಿ: ಧಾರವಾಡ | ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಡಾ. ಬಾಳಪ್ಪ ಚಿನಗುಡಿ, ಪ್ರೊ. ಐ ಎಸ್ ಹುಯಿಲಗೋಳ, ಎಮ್ ಡಿ ಹುಂಡೆಕಾರ ನಿರ್ಣಾಯಕರಾಗಿದ್ದರು. ಶ್ರೀನಿವಾಸ ವಾಡಪ್ಪಿ ಅತಿಥಿಗಳನ್ನು ಪರಿಚಯಿಸಿದರು. ನಗರದ ವಿವಿಧ ಶಾಲೆಗಳಿಂದ ಸುಮಾರು 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ, ಇಂಗ್ಲೀಷ್, ಹಿಂದಿ ಹಾಗೂ ಉರ್ದು ಭಾಷೆಗಳಲ್ಲಿ, ಗುರು, ತಾಯಿ, ತಂದೆ, ಶಾಲೆ, ರೈತ, ಸೈನಿಕ, ಮಗಳು, ಮಾನವ, ಕಪ್ಪುಹಣ, ಪರಿಸರ, ಸ್ನೇಹ, ಪ್ರೀತಿ, ಕನಸ್ಸುಗಳ ವಿಷಯಗಳಾದಾರಿತ ಚುಟುಕು, ಹಾಸ್ಯಗಳಲ್ಲಿ ಕವನ ವಾಚಿಸಿದರು.

ಪ್ರೊ. ಐ.ಎಸ್ ಹುಂಡೆಕಾರ, ಪ್ರೊ. ಎನ್ ಬಿ ನಾಲತವಾಡ ಸೇರಿದಂತೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಗುರುಗಳು, ಪಾಲಕರು ಹಾಗೂ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಎರಡು ವರ್ಷವಾದರೂ ಪೂರ್ಣಗೊಳ್ಳದ ರಸ್ತೆ ಕಾಮಗಾರಿ: ರೈತ ಸಂಘ ಆಕ್ರೋಶ

ಸುರಪುರ ತಾಲೂಕಿನ ರುಕ್ಕಾಪೂರದಿಂದ ಬೇವಿನಾಳ ಎಸ್.ಎಚ್. ಗ್ರಾಮದವರೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ...

ಕಲಬುರಗಿ | ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಗೈರು ಆರೋಪ: ಕರ್ತವ್ಯಲೋಪದ ವಿರುದ್ಧ ಕ್ರಮಕ್ಕೆ ಆಗ್ರಹ

ಅಫಜಲಪುರ ತಾಲೂಕಿನ ಸ್ಟೇಷನ್ ಗಾಣಗಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ಸಂದರ್ಭದಲ್ಲಿ...

ಉಡುಪಿ | ಡಿ.ಸಿ. ಮನ್ನಾ ಭೂಮಿ ನಿವೇಶನ ರಹಿತರಿಗೆ ನೀಡಿ: ಸಿಎಂಗೆ ದಸಂಸ ಅಂಬೇಡ್ಕರ್ ವಾದ ಮನವಿ

ಕಸ್ತೂರಿರಂಗನ್ ವರದಿ ಕುರಿತು ನೇರ ಸಂವಾದ ಸಭೆಗೆ ಹೆಬ್ರಿಗೆ ಆಗಮಿಸಿದ್ದ ಮುಖ್ಯಮಂತ್ರಿ...

ತುಳು ಭಾಷಾ ಹೋರಾಟಕ್ಕೆ ಐತಿಹಾಸಿಕ ಜಯ: ಉಡುಪಿಯಲ್ಲಿ ತುಳುನಾಡು ರಕ್ಷಣಾ ವೇದಿಕೆಯಿಂದ ವಿಜಯೋತ್ಸವ

ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ...