ತಾಲ್ಲೂಕಿನ ವೇಮಗಲ್ ಹೋಬಳಿ ಸೀತಿ ಗ್ರಾಮದ ಬಳಿ ಗೋಮಾಳ ಜಮೀನಿನಲ್ಲಿ ನಿಯಮ ಉಲ್ಲಂಘಿಸಿ ಜಲ್ಲಿ ಕ್ರಷರ್ ಘಟಕ ನಡೆಸಲಾಗುತ್ತಿದೆ. ಸೀತಿ ಬೆಟ್ಟದ ದೇವಾಲಯಕ್ಕೆ ಹಾನಿಯಾಗಿದೆ ಎಂದು ಆರೋಪಿಸಿ ಸೀತಿ, ತಿಪ್ಪೇನಹಳ್ಳಿ ಮಾರ್ಜೇನಹಳ್ಳಿ ಹಾಗೂ ಮಠಪುರದ ಕೆಲ ಗ್ರಾಮಸ್ಥರು ಧರಣಿ ನಡೆಸಿದರು.
ಸೀತಿ ಗ್ರಾಮದ ಮುರಳಿಗೌಡ ಮಾತನಾಡಿ, ಕೃಷಿಗೆ ಯೋಗ್ಯವಾಗಿರುವ ಹಾಗೂ ಗೋಮಾಳ ಜಮೀನಿನಲ್ಲಿ ನಿಯಮ ಉಲ್ಲಂಘಿಸಿ ಕ್ರಷರ್ ಘಟಕ ನಡೆಸಲಾಗುತ್ತಿದೆ. ಇದರಿಂದ ಇತಿಹಾಸ ಪ್ರಸಿದ್ಧ ಸೀತಿ ಬೆಟ್ಟದ ದೇವಾಲಯಕ್ಕೆ ಹಾನಿಯಾಗಿದೆ. ಬೆಳೆಗಳು ನಾಶವಾಗುತ್ತಿದ್ದು, ರೈತರಿಗೆ ತುಂಬಾ ತೊಂದರೆಯಾಗಿದೆ ಎಂದು ಆರೋಪಿಸಿದರು.
ಈ ಗಂಭೀರ ವಿಷಯವನ್ನು ಎಂಎಲ್ಎ ಕೊತ್ತೂರು ಮಂಜುನಾಥ್ ಅವರಿಗೆ ರೈತರು ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಎಂಎಲ್ಸಿ ಅನಿಲ್ ಕುಮಾರ್ ಅವರು ಸಹ ನಮಗೆ ಈ ಭಾಗದಲ್ಲಿ ಹೆಚ್ಚಿನ ಮತ ದೊರಕುವುದಿಲ್ಲವೆಂದು ಇದರ ಬಗ್ಗೆ ಗಮನಹರಿಸುತ್ತಿಲ್ಲ ಎಂದು ದೂರಿದರು.
ಕ್ರಷರ್ ಘಟಕವನ್ನು ನಿಲ್ಲಿಸಬೇಕೆಂದು ಭಾಗದ ರೈತರು ಪ್ರತಿಭಟಿಸಿ, ಗಣಿ ಮತ್ತು ಭೂ ಅಧಿಕಾರಿಗಳಿಗೆ ಮನವಿ ಸಹ ಸಲ್ಲಿಸಲಾಗಿದೆ. ಶಾಶ್ವತವಾಗಿ ಕ್ರಷರ್ ಘಟಕವನ್ನು ಇಲ್ಲಿಂದ ಎತ್ತಂಗಡಿ ಮಾಡಿಸಿ ರೈತರ ಬದುಕಿಗೆ ಬೆಳಕನ್ನು ತರಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ..?ಚಿಂತಾಮಣಿ | ರಿಯಲ್ ಎಸ್ಟೇಟ್ ದಂಧೆ ಬಿಟ್ಟು ಬಡವರ ನೆರವಿಗೆ ಬನ್ನಿ, ಆಡಳಿತಾರೂಢ ಸರ್ಕಾರಕ್ಕೆ ಜೆ.ಕೆ.ಕೃಷ್ಣಾರೆಡ್ಡಿ ಆಗ್ರಹ
This video cannot be played in your browser. Open the video directly
ಮಾರ್ಜೇನಹಳ್ಳಿ ಗ್ರಾಮದ ಪ್ರಭು, ಸೀತಿ, ತಿಪ್ಪೇನಹಳ್ಳಿ, ಮಾರ್ಜೇನಹಳ್ಳಿ ಹಾಗೂ ಮಠಪುರ ಗ್ರಾಮಸ್ಥರು ಧರಣಿಯಲ್ಲಿ ಭಾಗವಹಿಸಿದ್ದರು.





