ಅಯೋಧ್ಯೆಯ ರಾಮಮಂದಿರದಲ್ಲಿ ಹಣ ದುರುಪಯೋಗ ಮಾಡಿದ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಟ್ರಸ್ಟ್ ಮತ್ತು ದೇವಾಲಯದ ಪದಾಧಿಕಾರಿಗಳಿಗೆ ಅಯೋಧ್ಯೆಯನ್ನು ತೊರೆಯದಂತೆ ಸೂಚನೆ ನೀಡಿದೆ. ಮೂವರು ಸದಸ್ಯರ ಎಸ್ಐಟಿ ತಂಡವು ಭಾನುವಾರ ಲಕ್ನೋಗೆ ತೆರಳುವ ಮೊದಲು ಈ ಸೂಚನೆ ನೀಡಿದೆ.
ಟ್ರಸ್ಟ್ ಅಧಿಕಾರಿಗಳು ಮತ್ತು ತನಿಖೆಗೆ ಸಂಬಂಧಿಸಿದ ಇತರ ವ್ಯಕ್ತಿಗಳ ವಿಚಾರಣೆಗೆ ಸಂಬಂಧಿಸಿದ ದೈನಂದಿನ ತನಿಖಾ ವರದಿಗಳನ್ನು ಡಿಜಿಟಲ್ ರೂಪದಲ್ಲಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಸಲ್ಲಿಸುವ ಮೊದಲು ವರದಿಗೆ ಅಂತಿಮ ರೂಪ ನೀಡಲಾಗುವುದು ಎಂದು ವರದಿಯಾಗಿದೆ.
ಇದನ್ನೂ ಓದಿ: ರಾಮಮಂದಿರ ದೇಣಿಗೆ ದುರುಪಯೋಗ: ಬಿಜೆಪಿಯ ಬ್ರಿಜ್ ಭೂಷಣ್ ಆರೋಪಗಳ ಸುತ್ತ
ಇನ್ನು ಎಸ್ಐಟಿ ತನ್ನ ಸಂಶೋಧನೆಗಳ ವರದಿಗಳನ್ನು ಪ್ರತಿದಿನ ಮುಖ್ಯಮಂತ್ರಿ ಕಚೇರಿಗೆ ಕಳುಹಿಸುತ್ತಿದೆ. ಮಧ್ಯಂತರ ವರದಿಯನ್ನು ಜೂನ್ 22 (ನಾಳೆ) ನೀಡಲಿದೆ.
ಎಸ್ಐಟಿಯು ನಿಧಿ ದುರುಪಯೋಗದ ಆರೋಪ ಬಗ್ಗೆ ಮಾತ್ರವಲ್ಲದೆ ದೇವಾಲಯದ ಟ್ರಸ್ಟ್ ಖರೀದಿಸಿರುವ ಭೂಮಿ ಮತ್ತು ದೇವಾಲಯಕ್ಕೆ ಕಟ್ಟಡ ಸಾಮಗ್ರಿಗಳ ಖರೀದಿಯ ಬಗ್ಗೆಯೂ ನಡೆಸುತ್ತಿದೆ ಎಂದು ವರದಿಯಾಗಿದೆ.
ದೇವಾಲಯದ ಟ್ರಸ್ಟ್ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರಕ್ಕೆ ಭೂಮಿಯನ್ನು ಖರೀದಿಸಿದೆ ಎಂದು ಆರೋಪಿಸಲಾಗಿದೆ. ಸಮಾಜವಾದಿ ಪಕ್ಷ ಮತ್ತು ಆಮ್ ಆದ್ಮಿ ಪಕ್ಷ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಈ ವಿಷಯವನ್ನು ಬಹಿರಂಗವಾಗಿ ಪ್ರಶ್ನಿಸಿದೆ.




