- ಏ. 2ರಂದು ರಾತ್ರಿಯ ವೇಳೆ ನಡೆದಿದ್ದ ಘಟನೆ
- ಘಟನೆ ನಡೆದ ಎರಡು ದಿನಗಳ ನಂತರ ಲಾಯ್ಡ್ ಸಾವು
ಕಳೆದ ಕೆಲವು ದಿನಗಳ ಹಿಂದೆ ರಾತ್ರಿ ವೇಳೆ ಹೆಚ್ಚು ಶಬ್ದದೊಂದಿಗೆ ಹಾಡು ಹಾಕುತ್ತಿದ್ದಾರೆ ಎಂದು ದೂರು ನೀಡಿದ ನೆರೆಹೊರೆಯವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಮೂವರು ಸಾಫ್ಟ್ವೇರ್ ಎಂಜಿನಿಯರ್ಗಳನ್ನು ಪೊಲೀಸರು ಬಂಧಿಸಿದ್ದಾರೆ.
54 ವರ್ಷದ ವ್ಯಕ್ತಿಯೊಬ್ಬರನ್ನು ನೆರೆಹೊರೆಯವರು ಮಾರಣಾಂತಿಕವಾಗಿ ಥಳಿಸಿದ್ದ ಘಟನೆ ಬೆಂಗಳೂರಿನ ವಿಜ್ಞಾನ ನಗರದಲ್ಲಿ ನಡೆದಿತ್ತು. ಥಳಿತಕ್ಕೊಳಗಾದ ವ್ಯಕ್ತಿ ಎರಡು ದಿನಗಳ ನಂತರ ಸಾವನ್ನಪ್ಪಿದ್ದರು.
ಲಾಯ್ಡ್ ನೆಹೆಮಿಯಾ (54) ಎಂಬುವವರು ಸಾವನ್ನಪ್ಪಿದ್ದರು. ರಾಮ್ ಸಮಂತ್ ರೈ, ಬಸುದೇವ್ ಸಮಂತ್ ರೈ ಹಾಗೂ ಅಭಿಷೇಕ್ ಸಿಂಗ್ ಹಲ್ಲೆ ಮಾಡಿದ ಆರೋಪಿಗಳು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಾತ್ರಿ ವೇಳೆ ಹಾಡಿನ ಶಬ್ದ ಕಡಿಮೆ ಮಾಡಿ ಎಂದ ನೆರೆಯವರು; ಥಳಿತಕ್ಕೊಳಗಾದ ವ್ಯಕ್ತಿ ಸಾವು
ಒಂದೇ ಬಡಾವಣೆಯಲ್ಲಿ ವಾಸಿಸುತ್ತಿರುವ ಇವರು ಏ. 2ರಂದು ರಾತ್ರಿಯ ವೇಳೆ, ಮನೆಯಲ್ಲಿ ವಯಸ್ಸಾದ ತಾಯಿ ಇದ್ದಾರೆ. ಸಂಗೀತದ ಧ್ವನಿ ಕಡಿಮೆ ಮಾಡಿ ಎಂದು ಲಾಯ್ಡ್ ಅವರು ಈ ಮೂವರು ಆರೋಪಿಗಳಲ್ಲಿ ಮನವಿ ಮಾಡಿದ್ದರು.
ಆದರೆ, ಇದಕ್ಕೆ ಒಪ್ಪದ ಅವರು ಲಾಯ್ಡ್ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಈ ಘಟನೆ ನಡೆದ ಎರಡು ದಿನಗಳ ನಂತರ ಲಾಯ್ಡ್ ಅವರು ಸಾವನ್ನಪ್ಪಿದ್ದರು.