ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಕೀಲು ಮಡಗಿದಾತ
ನಡೆವರಿಗೊಂದು ಬಟ್ಟೆ,
ಮನೆಯ ಒಡೆಯರಿಗೊಂದು ಬಟ್ಟೆ.
ನಡೆಯದು ನಡೆಯದು,
ಹೋ, ನಡೆಗೆಟ್ಟಿತ್ತು ನಿಂದಿತ್ತಲ್ಲಾ! ಗಮನಾಗಮನದ ನುಡಿಯ ಬೆಡಗಿನ ಕೀಲ, ಮಡಗಿದಾತ ಬಲ್ಲ ಗುಹೇಶ್ವರಾ.

- Advertisement -

ಪದಾರ್ಥ:
ನಡೆವರು = ಜಂಗಮರು, ಚರಿಸುವವರು
ಬಟ್ಟೆ = ಹಾದಿ, ದಾರಿ
ನಡೆಗೆಟ್ಟಿತ್ತು = ಸಲ್ಲದ ನಡವಳಿಕೆ
ಗಮನಾಗಮನ = (ಗಮನ+ಅಗಮನ) ಜಂಗಮ ಮತ್ತು ಭಕ್ತ
ಬೆಡಗಿನ ಕೀಲು = ರಹಸ್ಯ ತತ್ವ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

ವಚನಾರ್ಥ:
ಮುಕ್ತಿ ಮಾರ್ಗದಲ್ಲಿ ನಡೆಯುವ ಹಾದಿಯಲ್ಲಿ ಜಂಗಮರಿಗೆ ಮತ್ತು ಜ್ಞಾನಿಗಳಿಗೆ ಒಂದು ದಾರಿ, ಸಂಸಾರಿಯಾಗಿ ಒಂದೆಡೆ ಮನೆ ಕಟ್ಟಿಕೊಂಡು ನೆಲೆ ನಿಂತವರಿಗೆ ಬೇರೆ ದಾರಿ ಎನ್ನಲಾಗದು.

ಸನ್ಯಾಸಿಯೂ ಸಂಸಾರಿಯೂ ಕೊನೆಯಲ್ಲಿ ಸೇರುವ ಸಂಗಮ ಸ್ಥಳ ಅದೊಂದೇ. ಜಂಗಮನದು ಜ್ಞಾನ ಪ್ರಧಾನ ಮಾರ್ಗವಾದರೆ ಸಂಸಾರಿಯದು ಭಕ್ತಿ ಪ್ರಧಾನ ಮಾರ್ಗ. ಜಂಗಮನು ಜ್ಞಾನದ ಮೂಲಕ ಭಕ್ತನಾದರೆ, ಸಂಸಾರಿಯು ಸತ್ಯನಿಷ್ಠ ಕಾಯಕದ ಮೂಲಕ ಭಕ್ತನಾಗುತ್ತಾನೆ. ಅವರೇ ಬೇರೆ ಇವರೇ ಬೇರೆ ಎಂಬ ಭೇದ ಸಲ್ಲದು. ಜಂಗಮ ಮಾರ್ಗ ಶ್ರೇಷ್ಠವಾದದ್ದು, ಸಂಸಾರ ಮಾರ್ಗ ನಿಕೃಷ್ಟವಾದದ್ದು ಎಂಬ ಭೇದ ಭಾವವನ್ನು ಅಲ್ಲಗಳೆಯುವ ಅಲ್ಲಮ ಹೋ ಎಂದು ಹೂಂಕರಿಸುತ್ತ ಎಚ್ಚರಿಸುವುದೇ ಈ ವಚನದ ಹೈಲೈಟ್!

ಗಮನಾಗಮನ ಅಂದರೆ ಗಮನ ಮತ್ತು ಅಗಮನ. ಗಮನ ಅಂದರೆ ಗಮಿಸುವವ, ಜಂಗಮ. ಅಗಮನ ಅಂದರೆ ಒಂದೆಡೆ ನಿಂತವ, ಸಂಸಾರಿ. ಇವರಿಬ್ಬರ ನಡೆಯನ್ನು ನುಡಿಯನ್ನು ನಿಯಂತ್ರಿಸಿ ಜೀವನ ರಥ ಸರಿದಾರಿಯಲ್ಲಿ ಸಾಗುವಂತೆ ಚಕ್ರಕ್ಕೆ ಕೀಲು ಮಡಗಿದಾತ ಅವನೇ. ಚಕ್ರದ ಕೀಲಿನ ರಹಸ್ಯವನ್ನು ಮಡಗಿದಾತನೇ ಬಲ್ಲ. ನಾವಲ್ಲ!

ಪದ ಪ್ರಯೋಗಾರ್ಥ:
ಕೀಲು ಮಡಗಿದಾತ. ಮಡಗು ಅಂದರೆ ಒಂದೆಡೆ ಇಡು ಎಂಬ ಅರ್ಥದಲ್ಲಿ ಅತ್ಯಂತ ಸಹಜವಾಗಿ ಜನಸಾಮಾನ್ಯರು ಆಡುಭಾಷೆಯಲ್ಲಿ ದಿನನಿತ್ಯ ಬಳಸುವ ಪದ. ಮಡಗು ಎಂಬ ಸಾಮಾನ್ಯ ಪದವನ್ನು ಅಲ್ಲಮ ಇಲ್ಲಿ ವಚನದ ಅಂತ್ಯದಲ್ಲಿ ಮಡಗಿರುವುದು ಅನನ್ಯವಾದ ಪದ ಪ್ರಯೋಗ. ತನ್ನ ವಚನಗಳಲ್ಲಿ ಪ್ರಯೋಗಿಸಿರುವ ಅತ್ಯದ್ಭುತ ಪದಗಳಂತೆಯೇ ತೀರಾ ಸಾಮಾನ್ಯವಾದ ಮಡಗು ಎಂಬ ಪದವನ್ನು ಅಲ್ಲಮ ಈ ವಚನದ ಕೊನೆಯಲ್ಲಿ ಕರಾರುವಾಕ್ಕಾಗಿ ಪ್ರಯೋಗಿಸಿರುವುದು ಅಲ್ಲಮಪ್ರಭುವಿನ ಕನ್ನಡ ಭಾಷಾ ಪ್ರಭುತ್ವಕ್ಕೆ ಉದಾಹರಣೆ. ಕೀಲು ಮಡಗುವುದು ಎಂಬ ಪ್ರಸಂಗ ಎದುರಾದಾಗ ಕನ್ನಡದ ಆದ್ಯ ವಚನಕಾರ ದೇವರ ದಾಸಿಮಯ್ಯನ ಅತ್ಯದ್ಭುತ ವಚನ ಇಲ್ಲಿ ಉಲ್ಲೇಖನೀಯವಾಗುತ್ತದೆ. “ಕಡೆಗೀಲು ಇಲ್ಲದ ಬಂಡಿಯ ಹೊಡೆಗೆಡೆಯದೆ ಮಾಣ್ಬುದೆ? ಕಡೆಗೀಲು ಬಂಡಿಗಾಧಾರ. ಈ ಕಡುದರ್ಪವೇರಿದ ಒಡಲೆಂಬ ಬಂಡಿಗೆ ಮೃಢಭಕ್ತರ ನುಡಿಗಡಣವೆ ಕಡೆಗೀಲು ಕಾಣಾ! ರಾಮನಾಥ” ಈ ಎರಡೂ ವಚನಗಳಲ್ಲಿ ಬಳಕೆಯಾಗಿರುವ ಕೀಲು ಮಡಗಿದಾತ ಅವನೇ, ಅವನೊಬ್ಬನೇ!

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ 

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನ ಕಲ್ಯಾಣ | ಕಲ್ಯಾಣವಿಲ್ಲದ ಕಾರಣ ಕೈಲಾಸವಿಲ್ಲವೆನಗೆ, ಬಸವಾ!

ಕಲ್ಯಾಣವಿಲ್ಲ ಕೈಲಾಸವಿಲ್ಲ, ಬಸವಾ. ಕಲ್ಯಾಣವಿಲ್ಲದ ಕಾರಣ ಕೈಲಾಸವಿಲ್ಲವೆನಗೆ, ಬಸವಾ. ಆ ಕಲ್ಯಾಣ...

ವಚನ ಕಲ್ಯಾಣ | ಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದು

ಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದು,ಅಂತಃಕರಣ ಚತುಷ್ಟಯವೆಂಬ ಪಶುವಂ ಕಟ್ಟಿಓಂಕಾರನಾದವೆಂಬ ಸೆಳೆಕೋಲಂ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನನ್ನಿಯ ನುಡಿ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ವಚನ ಕಲ್ಯಾಣ | ಕೊಲ್ಲದಿರ್ಪುದೆ ಧರ್ಮ

ಲಿಂಗದೇವನೆ ಕರ್ತ, ಶಿವಭಕ್ತನೆ ಶ್ರೇಷ್ಠ.ಕೊಲ್ಲದಿರ್ಪುದೆ ಧರ್ಮ. ಅಧರ್ಮದಿಂದ ಬಂದುದನೊಲ್ಲದಿರ್ಪುದೆ ನೇಮ.ಅಳುಪಿಲ್ಲದಿರ್ಪುದೆ ವ್ರತ....