- ಕೆ.ಏನ್ ರಾಜಣ್ಣ ಅವರಿಗೆ ಸಚಿವ ಸ್ಥಾನ ನೀಡುವ ಭರವಸೆ
- ಶಾಲಾ ಮಕ್ಕಳಿಗೆ ಶೂ ಕೊಡಲು ರಾಜಣ್ಣ ಅವರ ಸಲಹೆ ಕಾರಣ
ರಾಜಣ್ಣ ಹಿಂದೆ ಏನು ಮಾಡಿದ್ದೇನೆ ಮತ್ತು ಮುಂದೆ ಏನು ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಹಿಂದೆ ಅಧಿಕಾರದಲ್ಲಿದ್ದಾಗ ಶಾಸಕರಾಗಿ ಅವರು ಕೇಳಿದ ಅನುದಾನ ನೀಡಿದ್ದೇನೆ ಮುಂದೆಯೂ ನೀಡುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದು ನೂರುಕ್ಕೆ ನೂರು ಖಚಿತ. ಕೆ ಏನ್ ರಾಜಣ್ಣ ಅವರನ್ನು ಸಚಿವರನ್ನಾಗಿ ಮಾಡುತ್ತೆವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ತುಮಕೂರು ಜಿಲ್ಲೆ ಮಧುಗಿರಿಲ್ಲಿ ನಡೆದ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಸಿದ್ದರಾಮಯ್ಯ ಮಾತನಾಡಿದರು. “ಮೋದಿ ಕಪ್ಪು ಹಣವನ್ನೆಲ್ಲ ತಂದು ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇನೆಂದು 5 ಪೈಸೆ ಸಹ ಹಾಕಿಲ್ಲ. ಅದಾನಿ, ಅಂಬಾನಿ ಸಾಲ ಮನ್ನಾ ಮಾಡುವ ಮೋದಿ ರೈತರ ಸಾಲಮನ್ನಾ ಮಾಡಿಲ್ಲ” ಎಂದು ಕುಟುಕಿದರು.
“ಪ್ರವಾಹ ಬಂದಾಗ ಬರಲಿಲ್ಲ, ಕೊರೊನಾ ಬಂದಾಗ ಬರಲಿಲ್ಲ. ಮನುಷತ್ವ ಇಲ್ಲದ ಪ್ರಧಾನಿ ಈಗ ಬಂದು ಓಟು ಕೇಳಿದರೆ, ಓಟು ಹಾಕಬೇಕಾ? ನಾವು ಆಧಿಕಾರಕ್ಕೆ ಬಂದರೆ ಮೀಸಲಾತಿ ಹೆಚ್ಚಳ ಮಾಡುತ್ತೇವೆ” ಎಂದು ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಸಮಸ್ಯೆಗಳ ಆಗರವಾದ ತಾಯಿ-ಮಕ್ಕಳ ಸರ್ಕಾರಿ ಆಸ್ಪತ್ರೆ; ಪೋಷಕರ ನರಳಾಟ
“ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಶೂ ಕೊಡಲು ರಾಜಣ್ಣ ಅವರ ಸಲಹೆ ಕಾರಣ. ರಾಜಣ್ಣ ಹಿಂದೆ ಏನು ಮಾಡಿದ್ದೇನೆ ಮತ್ತು ಮುಂದೆ ಏನು ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಹಿಂದೆ ಅಧಿಕಾರದಲ್ಲಿದ್ದಾಗ ಶಾಸಕರಾಗಿ ಅವರು ಕೇಳಿದ ಅನುದಾನ ನೀಡಿದ್ದೇನೆ, ಮುಂದೆಯೂ ನೀಡುತ್ತೇನೆ. ರಾಜಣ್ಣ ನನಗೆ ಒಳ್ಳೆಯ ಸ್ನೇಹಿತ ಜಾತ್ಯತೀತ ಮನುಷ್ಯ. ಹಾಗಾಗಿ ಈ ಭಾರಿ ಅಧಿಕ ಮತಗಳಿಂದ ಕೆ ಏನ್ ರಾಜಣ್ಣ ಅವರನ್ನು ಗೆಲ್ಲಿಸಿ” ಎಂದು ಹೇಳಿದರು.