ಕೃತಕ ಸಿಹಿಕಾರಕ ಬಳಕೆ; ಆರೋಗ್ಯಕ್ಕೆ ಹಾನಿಕಾರಕ

Date:

ದೇಹದ ತೂಕ ಇಳಿಸಲು ಮತ್ತು ಮಧುಮೇಹದಂತಹ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯುವ ಸಲುವಾಗಿ ಕೃತಕ ಸಿಹಿಕಾರಕ (ಎನ್‌ಎಸ್‌ಎಸ್‌) ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಎನ್‌ಎಸ್‌ಎಸ್‌ ಬಳಿಕೆಯು ಆರೋಗ್ಯಕ್ಕೆ ಹಾನಿಕಾರಕ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಹೇಳಿದೆ.

ಕೆಲ ಸಂಶೋಧನೆಗಳ ಪ್ರಕಾರ, ಇತ್ತೀಚೆಗೆ ಕೃತಕ ಸಿಹಿಕಾರಕ ಬಳಕೆ ಜಾಸ್ತಿಯಾಗಿದೆ. ಇವುಗಳ ಬಳಕೆಯು ದೇಹದ ತೂಕ ಇಳಿಕೆಗೆ ಸಹಾಯ ಮಾಡಿದರೂ, ಇವುಗಳಿಂದ ಆರೋಗ್ಯದ ಮೇಲಿನ ಅಡ್ಡ ಪರಿಣಾಮಗಳೇ ಹೆಚ್ಚು ಎಂದು ಡಬ್ಲ್ಯೂಎಚ್‌ಒ ಕಳವಳ ವ್ಯಕ್ತಪಡಿಸಿದೆ.

ಕೃತಕ ಸಿಹಿಕಾರ ಬಳಕೆ ಮಾಡುವುದರಿಂದ ‘ಮಧುಮೇಹ ಟೈಪ್‌-2’, ಹೃದಯಸಂಬಂಧಿ ಕಾಯಿಲೆಗಳು, ಶೀಘ್ರ ಮರಣ ಪ್ರಮಾಣ ಹೆಚ್ಚಾಗುತ್ತಿವೆ ಎಂದು ಹಲವು ಸಂಶೋಧನೆಗಳು ಇದನ್ನು ಖಚಿತಪಡಿಸಿವೆ ಎಂದು ಡಬ್ಲ್ಯೂಎಚ್‌ಒ ಹೇಳಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಊಟದಲ್ಲಿ ರಾಸಾಯನಿಕ ಮಿಶ್ರಿತ ಸಕ್ಕರೆಯ ಬದಲು ಕೃತಕ ಸಿಹಿಕಾರಕ ಬಳಕೆಯಿಂದ ದೀರ್ಘಾವಧಿಯಲ್ಲಿ ಉಪಯೋಗವಿಲ್ಲ. ಹಾಗಾಗಿ ಜನ ಸಹಜ ಸಕ್ಕರೆಯನ್ನು ಬಳಸಬಹುದು. ಪ್ರಕೃತಿ ಸಹಜವಾಗಿ ಸಿಹಿಯಿರುವ ಹಣ್ಣುಗಳನ್ನು ಬಳಸಬೇಕು ಅಥವಾ ಸಕ್ಕರೆಯೇ ಇಲ್ಲದ ಪಾನೀಯಗಳ ಬಳಕೆ ಉತ್ತಮ ಎಂದು ಡಬ್ಲ್ಯುಎಚ್‌ಒನ ಪೌಷ್ಟಿಕಾಂಶ ಮತ್ತು ಆಹಾರ ಸುರಕ್ಷತಾ ವಿಭಾಗದ ನಿರ್ದೇಶಕ ಫ್ರಾನ್ಸೆಸ್ಕೊ ಬ್ರಾಂಕಾ ತಿಳಿಸಿದ್ದಾರೆ.

ಹಲವರು ಸಕ್ಕರೆ ನೇರವಾಗಿ ಸೇವಿಸಿ ಅದರಿಂದ ಉಂಟಾಗುವ ಬೊಜ್ಜು ಮತ್ತು ಮಧುಮೇಹ ಮತ್ತಿತ್ತರ ಸಾಂಕ್ರಮಿಕವಲ್ಲದ ರೋಗಗಳನ್ನು ತಡೆಯಲು ಕೃತಕ ಸಿಹಿಕಾರಕವಾದ ತಂಪು ಪಾನೀಯ ಹಾಗೂ ಇತರೆ ಆಹಾರ ಪದಾರ್ಥಗಳಲ್ಲಿ ಅಸೆಸಲ್ಫೇಮ್‌–ಕೆ, ಆಸ್ಪರ್ಟಮೆ, ಅಡ್ವಾಂಟಮೆ, ಸೈಕ್ಲಾಮೇಟ್ಸ್‌, ನಿಯೊಟೇಮ್‌, ಸ್ಯಾಚರಿನ್‌, ಸುಕ್ರಾಲೋಸ್‌, ಸ್ಟೆವಿಯಾ ಮತ್ತು ಸ್ಟೆವಿಯಾ ಡೆರಿವೇಟಿವ್ಸ್‌ನಂತಹ ಸಿಹಿಕಾರಕಗಳನ್ನು ಸದ್ಯ ಬಳಕೆ ಮಾಡಲಾಗುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಈ ಸುದ್ದಿ ಓದಿದ್ದೀರಾ?: ವೇದಗಣಿತ, ಜ್ಯೋತಿಷ್ಯ ಪರಿಚಯಿಸಲು ಮುಂದಾದ ಯುಜಿಸಿ; ಎಐಡಿಎಸ್‌ಒ ಕಿಡಿ

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊರೋನಾ | ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ಅಗತ್ಯವಿಲ್ಲ: ಡಾ.ಶರಣ್ ಪ್ರಕಾಶ್ ಪಾಟೀಲ್

ಹೊಸದಾಗಿ ಕಾಣಿಸಿಕೊಂಡಿರುವ ರೂಪಾಂತರ ಜೆಎನ್- 1 ಸೋಂಕು ರಾಜ್ಯದಲ್ಲಿ ಕಾಣಿಸಿಕೊಂಡಿದ್ದರೂ ಜನತೆ...

ಕೋವಿಡ್‌ | ಹೊಸ ವರ್ಷಾಚರಣೆಗೆ ನಿರ್ಬಂಧ ಹೇರುತ್ತಿಲ್ಲ, ಭಯ ಬೇಡ: ದಿನೇಶ್‌ ಗುಂಡೂರಾವ್‌

ಇಂದಿನ ಸಭೆಯಲ್ಲಿ ಸಮಿತಿಯ ತಜ್ಞರೊಂದಿಗೂ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ...

ಡಿ.25ರಂದು 125 ಮಂದಿಗೆ ಕೊರೋನಾ ಸೋಂಕು ದೃಢ : ಮೂವರು ಸಾವು

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಡಿ.25 ರಂದು...

ಕರ್ನಾಟಕಕ್ಕೆ ಲಗ್ಗೆಯಿಟ್ಟ ಜೆಎನ್‌ 1 : ಎಂಟು ಜನರಲ್ಲಿ ಪಾಸಿಟಿವ್

ಮಾರಿ ಕೊರೋನಾ ವೈರಸ್​ನ ರೂಪಾಂತರಿ ಜೆಎನ್‌ 1 ಮೊದಲ ಪ್ರಕರಣ ಕೇರಳದಲ್ಲಿ...