- ಧನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
- ರೈತ ಸಂಗಪ್ಪ 8ರಿಂದ 10 ಲಕ್ಷ ರೂ. ಸಾಲ ಮಾಡಿದ್ದರು
ಸಾಲಬಾಧೆ ತಾಳಲಾರದೇ ರೈತ ನೇಣಿಗೆ ಶರಣಾಗಿರುವ ಘಟನೆ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನಲ್ಲಿ ನಡೆದಿದೆ.
ತರನಳ್ಳಿ ಗ್ರಾಮದ ರೈತ ಸಂಗಪ್ಪ ಶಿವರಾಯ ಮಳಚಾಪೂರೆ(56) ಎಂಬುವರು ಮೃತ ದುರ್ದೈವಿ.
2.20 ಎಕರೆ ಜಮೀನು ಹೊಂದಿರುವ ರೈತ ಸಂಗಪ್ಪ ಅವರು ಕೃಷಿ ಚಟುವಟಿಕೆಗಳ ನಿರ್ವಹಣೆಗೆ ಪಿಕೆಪಿಎಸ್ ಸೇರಿ ಹಲವೆಡೆ ಸುಮಾರು 8ರಿಂದ 10 ಲಕ್ಷ ರೂ ಸಾಲ ಮಾಡಿದ್ದು, ಸಾಲದ ತೀರಿಸುವ ಚಿಂತೆಯಲ್ಲಿ ಮಂಗಳವಾರ ಬೆಳಿಗ್ಗೆ 9ಗಂಟೆ ಸುಮಾರಿಗೆ ತನ್ನ ಹೊಲದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಹಾಲಕ್ಕಿ ಮಹಿಳೆಯ ಸ್ವಚ್ಛತಾ ಕಾರ್ಯ; ಆನಂದ್ ಮಹೀಂದ್ರಾ ಮೆಚ್ಚುಗೆ
ಮೃತ ರೈತನ ಪತ್ನಿ ನಾಗಮ್ಮ ಮಳಚಾಪೂರೆ ನೀಡಿರುವ ದೂರಿನ ಮೇರೆಗೆ ಧನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.