ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ಹೀರಿಸಾವೆ ಹೋಬಳಿಯಲ್ಲಿ ಯೂರಿಯಾ ಗೊಬ್ಬರದ ಸಮಸ್ಯೆ ವಾರದಿಂದ ಮುಂದುವರಿದಿದೆ. ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 178 ಚೀಲ ಯೂರಿಯಾ ಸರಬರಾಜು ಆಗಿರುವ ವಿಷಯ ತಿಳಿದ, ನೂರಾರು ರೈತರು ಬೆಳಿಗ್ಗೆಯಿಂದ ಯಾರಿಯಾ ಖರೀದಿಗೆ ಗಂಟೆಗಟ್ಟಲೆ ಕಾದರೂ ಒಬ್ಬರಿಗೆ ಒಂದೇ ಚೀಲ ದೊರತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ವಾರ ಹೋಬಳಿಯಲ್ಲಿ ಹದವಾದ ಮಳೆಯಾಗಿದ್ದು, ಕೆಲವು ರೈತರು ರಾಗಿ, ಜೋಳ ಬಿತ್ತನೆ ಮಾಡಲು ಹೊಲವನ್ನು ಹಸನು ಮಾಡಿಕೊಂಡಿದ್ದಾರೆ. ಜುಲೈ ಮೊದಲ ವಾರದಲ್ಲಿ ಅಲ್ಪಸ್ವಲ್ಪ ಮಳೆ ಬಿದ್ದರೆ, ಇವರು ಬಿತ್ತನೆ ಮಾಡುತ್ತಾರೆ. ಆ ಸಮಯದಲ್ಲಿ ಗೊಬ್ಬರ ಸಿಗುವುದಿಲ್ಲ ಎಂದು ಈಗಲೇ ಖರೀದಿಸುತ್ತಿದ್ದಾರೆ. ರಾಗಿ ಬಿತ್ತನೆ ಮಾಡುವಾಗ ರಸಗೊಬ್ಬರಕ್ಕೆ ಯೂರಿಯಾವನ್ನು ಬೆರೆಸಿ ಹಾಕಿದರೆ, ಉತ್ತಮ ಪೈರು ಬರುತ್ತದೆ. ಮೇವಿಗಾಗಿ ತೋಟದಲ್ಲಿ ಈಗ ಜೋಳ ಸೇರಿದಂತೆ ಇತರೆ ಬೆಳೆಗಳನ್ನು ಹಾಕಿದ್ದು, ಮಳೆ ಆಗಿರುವುದರಿಂದ ಈಗ ಯೂರಿಯಾ ಹಾಕಿದರೆ, ಉತ್ತಮವಾಗಿ ಬೆಳೆಯುತ್ತದೆ ಎನ್ನುತ್ತಾರೆ ಕೆಲವು ರೈತರು. ಯೂರಿಯಾಕ್ಕೆ ಹೆಚ್ಚು ಬೇಡಿಕೆ ಇದೆ. ಇಂದು ತುಂಬಾ ರೈತರು ಬಂದಿದ್ದರು. ಎಲ್ಲರಿಗೂ ಗೊಬ್ಬರ ನೀಡುವ ಉದ್ದೇಶದಿಂದ ಪ್ರತಿ ಆಧಾರ್ ಕಾರ್ಡ್ಗೆ ಒಂದು ಚೀಲ ವಿತರಣೆ ಮಾಡುತ್ತಿದ್ದೇವೆ’ ಎಂದು ಸಹಕಾರ ಸಂಘದ ಮಂಜುನಾಥ್ ‘ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನ | ಜೂ.18ರಂದು ರಂಗ ಅಭಿನಯ ತರಬೇತಿ ಶಿಬಿರ
ಈ ವೇಳೆ ಶ್ರೀನಿವಾಸ್, ರೈತ, ಹೆಗ್ಗಡಿಹಳ್ಳಿ ಬೆಳಿಗ್ಗೆಯಿಂದ ಕಾದರೂ ಒಂದೇ ಚೀಲ ಯೂರಿಯಾ ಸಿಕ್ಕಿದ್ದು. ಸರ್ಕಾರದವರು ರೈತರಿಗೆ ಅಗತ್ಯ ಇರುವಷ್ಟು ಗೊಬ್ಬರ ನೀಡುತ್ತಿಲ್ಲ. ಇದರಿಂದ ಪರದಾಡುವಂತಾಗಿದೆ- ರಮೇಶಗೌಡ, ರೈತ, ಬೂಕ ಗ್ರಾಮರಸಗೊಬ್ಬರದ ಬೆಲೆ ಹೆಚ್ಚಾಗಿದೆ. ದುಡ್ಡು ಕೊಡುತ್ತೆವೆ ಎಂದರೂ ಗೊಬ್ಬರ ಸಿಗುತ್ತಿಲ್ಲ. ಯೂರಿಯಾ ಮತ್ತು 20-20 ಗೊಬ್ಬರವನ್ನು ಹೆಚ್ಚು ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸರಬರಾಜು ಮಾಡಬೇಕು ಎಂದರು.




