ನಗರದ ಸೇಡಂ ರಸ್ತೆಯ ಓಂನಗರ ಗೇಟ್ ಬಳಿ ಕೆಕೆಆರ್ಟಿಸಿ ಬಸ್ ಹತ್ತುವ ವೇಳೆ ಸಂಭವಿಸಿದ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪ್ರಯಾಣಿಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಶೋಕ ನಗರದ ನಿವಾಸಿ ಪ್ರತಾಪ್ ವಗ್ಗನ್ ಮೃತ ದುರ್ದೈವಿ.
ಜೂನ್ 15ರಂದು ಮಧ್ಯಾಹ್ನ ಸೇಡಂ ಕಡೆಗೆ ತೆರಳುತ್ತಿದ್ದ ಕೆಕೆಆರ್ಟಿಸಿ ಬಸ್ವೊಂದು ತಾಂತ್ರಿಕ ದೋಷದಿಂದ ಓಂನಗರ ಗೇಟ್ ಬಳಿ ನಿಂತಿತ್ತು. ಆ ಬಸ್ನಲ್ಲಿದ್ದ ಪ್ರಯಾಣಿಕರನ್ನು ಹಿಂದಿನಿಂದ ಬಂದ ಮತ್ತೊಂದು ಕೆಕೆಆರ್ಟಿಸಿ ಬಸ್ಗೆ ಹತ್ತಿಸಿಕೊಳ್ಳುವ ಕಾರ್ಯ ನಡೆಯುತ್ತಿತ್ತು. ಈ ವೇಳೆ ಪ್ರತಾಪ್ ವಗ್ಗನ್ ಹಿಂಬದಿ ಬಾಗಿಲಿನಿಂದ ಬಸ್ ಹತ್ತುತ್ತಿದ್ದಾಗ ಚಾಲಕ ಬಸ್ ಚಲಾಯಿಸಿದ್ದಾನೆ ಎನ್ನಲಾಗಿದೆ.
ಬಸ್ ಚಲಿಸಿದ ಪರಿಣಾಮ ಪ್ರತಾಪ್ ಎರಡು ಬಸ್ಗಳ ಮಧ್ಯೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ, ಅದೇ ದಿನ ರಾತ್ರಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಬಸ್, ಟಂಟಂ ನಡುವೆ ಭೀಕರ ಅಪಘಾತ; ನಾಲ್ವರಿಗೆ ಗಾಯ
ಈ ಕುರಿತು ಮೃತನ ಸಹೋದರ ಸಿದ್ದಣ್ಣ ವಗ್ಗನ್ ನೀಡಿದ ದೂರಿನ ಆಧಾರದ ಮೇಲೆ ಕಲಬುರಗಿ ಸಂಚಾರ ಪೊಲೀಸ್ ಠಾಣೆ-2ರಲ್ಲಿ ಕೆಕೆಆರ್ಟಿಸಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.





