ಉಡುಪಿ | ಪರಿಸರ ಹದಗೆಡುತ್ತಿದೆ, ಉಡುಪಿಯಲ್ಲಿ ಮಾಸ್ಕ್ ಅನಿವಾರ್ಯ : ಪ್ರೇಮಾನಂದ ಕಲ್ಮಾಡಿ ಎಚ್ಚರಿಕೆ

Date:

ಸುಂದರ ಕರಾವಳಿಯ ಉಡುಪಿ ಜಿಲ್ಲೆಯ ವಾಯು ಗುಣಮಟ್ಟ ದಿನೇದಿನೇ ಹದಗೆಡುತ್ತಿದ್ದು, ವಾಯುಮಾಲಿನ್ಯ ಸೂಚ್ಯಂಕ (AQI) 80 ಕ್ಕೂ ಹೆಚ್ಚು ಮಟ್ಟ ತಲುಪಿರುವ ಈ ಸಂದರ್ಭದಲ್ಲಿ, ದಿನನಿತ್ಯದ ಬದುಕಿನಲ್ಲಿ ಮಾಸ್ಕ್ ಧರಿಸಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ಪರಿಸರ ಹೋರಾಟಗಾರ ಪ್ರೇಮಾನಂದ ಕಲ್ಮಾಡಿ ಎಚ್ಚರಿಸಿದ್ದಾರೆ.

- Advertisement -
ತದಸ್

ಉಡುಪಿಯ ಮಣಿಪಾಲ್‌ ಇನ್‌ ನಲ್ಲಿ “ಪರಿಸರ ಉಳಿಸಿ, ಉಡುಪಿ ಬೆಳೆಸಿ” ಎಂಬ ವಿಷಯದಡಿ ನಡೆದ ದುಂಡು ಮೇಜಿನ ಚರ್ಚೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ವಾಯು ಮಾಲಿನ್ಯ ಏರಿಕೆ, ನೀರಿನ ಮಟ್ಟ ಕುಸಿತ, ತ್ಯಾಜ್ಯ ವಿಲೇವಾರಿಯ ಸಮಸ್ಯೆ ಮತ್ತು ಮೀನುಗಾರಿಕೆಯಲ್ಲಿ ಇಳಿಮುಖವಾದ ಉತ್ಪಾದನೆ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸಭಾಧ್ಯಕ್ಷರ ತವರಲ್ಲೇ ಬಡವರು ಅತಂತ್ರ: ʼಹಕ್ಕುಪತ್ರʼವಿದ್ದರೂ ಸ್ವಂತ ಸೂರಿಲ್ಲ,...

ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಜಿ ಎಸ್ ಪಾಟೀಲ್ ಅವರು ಅಧಿಕಾರ ವಹಿಸಿಕೊಂಡಿರುವುದು ಈ ಸಂತ್ರಸ್ತರಲ್ಲಿ ಹೊಸ ಭರವಸೆ ಮೂಡಿಸಿದೆ. ಪ್ರಜಾಪ್ರಭುತ್ವದ ಅತ್ಯುನ್ನತ ಪೀಠದಲ್ಲಿರುವ ಅವರು, ತಮ್ಮ ಸ್ವಕ್ಷೇತ್ರದ ಈ ದಶಕದ ಸಮಸ್ಯೆಗೆ ತಕ್ಷಣ...

ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ: ಕರಾವಳಿಗರ ನಿರೀಕ್ಷೆಗಳೇನು?

ಮಂಗಳೂರಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಸಚಿವ ಸಂಪುಟ ಸಭೆಯು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಾಗುಳಿಯದೆ, ಕರಾವಳಿ ಭಾಗದ ದಶಕಗಳ ಬೇಡಿಕೆಗಳಿಗೆ ಜೀವ ನೀಡುವ ಪ್ರಮುಖ ವೇದಿಕೆಯಾಗುವ ನಿರೀಕ್ಷೆಯಿದೆ. ರಸ್ತೆ ಮತ್ತು ಹೆದ್ದಾರಿಗಳ ದುರಸ್ತಿ, ಮಂಗಳೂರು...

“ಪವಿತ್ರ ಸ್ಥಳಗಳ ಮೇಲೆ ದಾಳಿ” ಹೆಸರಿನಲ್ಲಿ ಸೌದಿ ಅರೇಬಿಯಾ...

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದ ಭೌಗೋಳಿಕ ರಾಜಕೀಯವು ಅತ್ಯಂತ ಸಂಕೀರ್ಣ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇಸ್ರೇಲ್ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಯೆಮೆನ್‌ನ ಹೌತಿ ಪಡೆಗಳು (ಅನ್ಸಾರ್ ಅಲ್ಲಾ) ಉಡಾವಣೆ ಮಾಡುತ್ತಿರುವ ಕ್ಷಿಪಣಿಗಳು ಹಾಗೂ ಡ್ರೋನ್‌ಗಳು...

ನಿಯಂತ್ರಣವಿಲ್ಲದ ರೆಸಾರ್ಟ್‌ಗಳ ವಿಸ್ತರಣೆ ಪರಿಸರ ವ್ಯವಸ್ಥೆಗೆ ದೊಡ್ಡ ಹಾನಿ ಮಾಡುತ್ತಿದೆ. CRZ–3 ನಿಂದ CRZ–2 ಗೆ ಮಾನದಂಡ ಬದಲಾವಣೆಯು ಸಮುದ್ರ ಪರಿಸರಕ್ಕೆ ಒಳಿತಲ್ಲ. ಹಲವೆಡೆ ಬಾವಿಗಳ ತಾಜಾ ನೀರು ಉಪ್ಪು ನೀರಿನ ನುಗ್ಗುವಿಕೆಯಿಂದ ಹಾಳಾಗುವ ಅಪಾಯ ಎದುರಾಗಿದೆ ಎಂದು ಹೇಳಿದರು.

ಕೊಡಚಾದ್ರಿ ಕೇಬಲ್ ಕಾರ್‌ ಮೊದಲಾದ ಪರಿಸರಕ್ಕೆ ಹೊಂದಿಕೊಳ್ಳದ ಯೋಜನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ಪಂಚಾಯಿತಿ ಮಟ್ಟದಿಂದ ನಗರಸಭೆ ಮಟ್ಟದವರೆಗೆ ಪ್ರಾಯೋಗಿಕ ಸಸ್ಥಿರ ಉಡುಪಿ ಕಾರ್ಯಪಥ ರೂಪಿಸುವ ಅಗತ್ಯವಿದೆ ಎಂದು ಒತ್ತಾಯಿಸಿದರು.

ರದ್ತರಸದ

ಅಭಿಯಾನದ ಸಂಯೋಜಕ ನಿಹಾಲ್ ಕಿದಿಯೂರು ರವೀಂದ್ರನಾಥ ಟಗೋರ್‌ ರವರ ಕವನವನ್ನು ಉಲ್ಲೇಖಿಸಿ, ನಾವು ಮಾಡಬೇಕಾದ ಜವಾಬ್ದಾರಿಯನ್ನು ಸಮಾಜದ ಮೇಲಕ್ಕೆ ಹರಿಸಿ ಬಿಡಲಾಗುತ್ತಿರುವ ಪ್ರವೃತ್ತಿಯೇ ಈ ಸಂಕಷ್ಟಕ್ಕೆ ಕಾರಣವೆಂದು ಅವರು ಎಚ್ಚರಿಸಿದ್ದರು. ಸಮಾಜವೇ ತನ್ನ ಕಲ್ಯಾಣಕ್ಕೆ ಜವಾಬ್ದಾರಿಯಾಗಬೇಕಾದ ಸಂದರ್ಭದಲ್ಲಿ, ಜನರು ತಮ್ಮ ಹೊಣೆಗಾರಿಕೆಯನ್ನು ಸಮಾಜದ ಮೇಲೆ ತಳ್ಳುತ್ತಿರುವುದನ್ನು ಟಾಗೋರ್‌ ಟೀಕಿಸಿದ್ದರು. ಈ ಮನೋಭಾವವನ್ನು ಪುನರ್‌ಸ್ಮರಿಸಿಕೊಂಡು, ಪರಿಸರದ ರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರದ್ದೇ ಆಗಿದ್ದು, ನಮ್ಮ ನೆರೆಹೊರೆಯೇ ಪರಿಸರ ಸಮಸ್ಯೆಗಳ ವಿರುದ್ದ ಜಾಗೃತಿಯಿಂದ ಹೋರಾಡುವ ಮನೋಭಾವ ಹೊಂದಿರಬೇಕು ಎಂದು ಹೇಳಿದರು.

ಪ್ರೊ. ಅಬ್ದುಲ್ ಅಝೀಝ್ ಅವರು ಸಭೆಯಲ್ಲಿ “ಸಸ್ಥಿರ ಉಡುಪಿ”ಗಾಗಿ ತಯಾರಿಸಿದ ರಸ್ತೆನಕ್ಷೆ ಮತ್ತು ಕಾರ್ಯಪಥವನ್ನು ಪರಿಚಯಿಸಿ, ಈ ಚರ್ಚೆಯನ್ನು ಮುಂದುವರಿಸಿ ಪೂರ್ಣ ಪ್ರಮಾಣದ ಪರಿಸರ ಚಳವಳಿಯನ್ನಾಗಿ ರೂಪಿಸುವುದಾಗಿ ತಿಳಿಸಿದರು.

WhatsApp Image 2025 11 25 at 10.06.21 PM

ಉಡುಪಿಯಲ್ಲಿ ಪರಿಸರ ಸಂರಕ್ಷಣೆಗಾಗಿ ಸೇವೆ ಸಲ್ಲಿಸಿದ ಸಮಾಜಸೇವಕ ನಿತ್ಯಾನಂದ ಓಳಕಾಡು, ಸಂತೋಷ ಕೆಮ್ಮಣ್ಣು, ನಮನ ಶ್ರೀ ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ರಾಷ್ಟ್ರ ಮಟ್ಟದ ‘ಆದರ್ಶ ನೆರೆಹೊರೆಯ’ ಅಭಿಯಾನದ ಅಂಗವಾಗಿ ನಡೆಸಿದ ಈ ಚರ್ಚೆಯಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿ ವಿಚಾರ ವಿನಿಮಯ ನಡೆಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ಅತ್ಯಾಚಾರ ಪ್ರಕರಣ: ಆರೋಪಿಗೆ 10 ವರ್ಷ ಜೈಲು, ₹56 ಸಾವಿರ ದಂಡ

ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ₹56...

ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ 371(ಜೆ) ವಿಶೇಷ ಸ್ಥಾನಮಾನ ಶ್ರೀರಕ್ಷೆಯಾಗಿದೆ : ಸಚಿವ ಶರಣಪ್ರಕಾಶ ಪಾಟೀಲ

ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ 371(ಜೆ) ವಿಶೇಷ ಸ್ಥಾನಮಾನ ಶ್ರೀರಕ್ಷೆಯಾಗಿದ್ದು, ಈ...

ಕಲಬುರಗಿ | ‘ಪ್ರಾದೇಶಿಕ ಅಸಮತೋಲನ ನಿವಾರಣಾ ಸಂಕಲ್ಪ ಸಮಾವೇಶ’

ಸಂವಿಧಾನದ 371(ಜೆ) ವಿಶೇಷ ಸ್ಥಾನಮಾನ ಸಮರ್ಪಕವಾಗಿ ಅನುಷ್ಠಾನಗೊಳ್ಳುವುದರ ಜತೆಗೆ ಕಲ್ಯಾಣ ಕರ್ನಾಟಕದಲ್ಲಿನ...

ಯಾದಗಿರಿ | ಅಭಿವೃದ್ಧಿಗೆ ಕಾಮಗಾರಿಗಳಿಗೆ ನಾಗಲೋಟದ ವೇಗ: ಸಚಿವ ಶರಣಪ್ರಕಾಶ್ ಪಾಟೀಲ್

ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳಿಗೆ ನಾಗಲೋಟದ ವೇಗ ನೀಡಲಾಗುವುದು. ಯಾದಗಿರಿ ಉತ್ಸವ, ಆರೋಗ್ಯ...