ತುಮಕೂರು | ಸಮಾನ ಮನಸ್ಕರಿಂದ ಸೌಹಾರ್ದ ಯುಗಾದಿ ಆಚರಣೆ

Date:

  • ʼಬೇವು-ಬೆಲ್ಲದ ಹಂಚಿಕೆ ಕೇವಲ ಆಚರಣೆಯಲ್ಲʼ
  • ಅಸೂಯೆ ಇಲ್ಲದ ಸಮಾಜ ಕಟ್ಟೋಣ: ಮಹೇಶ್‌

ತುಮಕೂರಿನಲ್ಲಿ ಸಮಾನ ಮನಸ್ಕರು, ಹಲವು ಸಮುದಾಯದ ಮುಖಂಡರು ವಿಶೇಷ ರೀತಿಯಲ್ಲಿ ಯುಗಾದಿ ಹಬ್ಬ ಅಚರಣೆ ಮಾಡಿದ್ದಾರೆ. ನಗರದ ಟೌನ್‌ಹಾಲ್‌ ಮುಂಭಾಗ ‘ಸೌಹಾರ್ದ ಯುಗಾದಿ’ ಕಾರ್ಯಕ್ರಮ ನಡೆಸಿ, ಪರಸ್ಪರ ಬೇವು-ಬೆಲ್ಲ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತರು ತಮ್ಮ ಮನೆಯಲ್ಲಿ ತಯಾರಿಸಿ ತಂದಿದ್ದ ಹೋಳಿಗೆ ಹಾಗೂ ಸಿಹಿ ತಿಂಡಿಯನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಹಂಚಿದ್ದಾರೆ. ”ನಮ್ಮೊಳಗೆ ಯಾವುದೇ ರೀತಿಯ ಬೇದಭಾವ ಇಲ್ಲ. ನಾವು ಸಿಹಿ-ಕಹಿಗಳನ್ನು ಹಂಚಿ ತಿನ್ನುವವರಾಗಿದ್ದೇವೆ. ಈ ಮೂಲಕ ಪ್ರೀತಿಯಿಂದ ಬದುಕಬೇಕು ಎಂಬ ಗುಣವನ್ನು ನಮ್ಮ ಹಿರಿಯರು ಹುಟ್ಟುಹಾಕಿದ್ದಾರೆ. ನಮ್ಮ ಗೆಳೆಯರೆಲ್ಲರೂ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ” ಎಂದು ಸಾಮಾಜಿಕ ಕಾರ್ಯಕರ್ತ ಮಹೇಶ್‌ ತಿಳಿಸಿದರು.

“ಬೇವು-ಬೆಲ್ಲದ ಹಂಚಿಕೆ ಕೇವಲ ಆಚರಣೆಯಲ್ಲ, ಈ ಹಬ್ಬ ನಮ್ಮ ಬದುಕಿನ ಭಾಗವಾಗಿದೆ. ಸರ್ವಜನಾಂಗದವರು ಪ್ರೀತಿಯ ಭ್ರಾತೃತ್ವದಿಂದ ಹಾಗೂ ದ್ವೇಷ, ಅಸೂಯೆ ಇಲ್ಲದ ಸಮಾಜ ಕಟ್ಟೋಣ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೇವದಾಸಿ ಮಹಿಳೆಯರ ಧರಣಿ

ದೇವದಾಸಿ ಮಹಿಳೆಯರಿಗೆ ಬಾಕಿಯಿರುವ ಪಿಂಚಣಿ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ...

ಬೆಳಗಾವಿ | ಅಧಿವೇಶನದಲ್ಲಿ ಭಾಗವಹಿಸುವವರಿಗೆ ಮೂಲಸೌಕರ್ಯ ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಡಿ.4ರಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಆರಂಭವಾಗಲಿರುವ ಚಳಿಗಾಲ ಅಧಿವೇಶನದಲ್ಲಿ ಭಾಗವಹಿಸುವವರಿಗೆ ವಸತಿ,...

ಚಿಕ್ಕಮಗಳೂರು | ಠಾಣೆಯಲ್ಲಿ ಕೂಡಿಹಾಕಿ ಯುವ ವಕೀಲನಿಗೆ ಥಳಿತ; ಪಿಎಸ್‌ಐ ಸೇರಿ 6 ಮಂದಿ ಅಮಾನತು

ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಬಂದ ಯುವ ವಕೀಲನೋರ್ವನನ್ನು ಠಾಣೆಯಲ್ಲಿ ಕೂಡಿಹಾಕಿ...

ಬೆಂಗಳೂರಿನ 44ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ: ಪೊಲೀಸರ ದೌಡು, ಆತಂಕದಲ್ಲಿ ಪೋಷಕರು

ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನ ವಿವಿಧ 44ಕ್ಕೂ ಹೆಚ್ಚು ಶಾಲೆಗಳಿಗೆ ಮುಜಾಹಿದ್ದೀನ್ ಸಂಘಟನೆಯಿಂದ...