‘ಹಿಂದುತ್ವ’ವಾದಿಗಳು ‘ಫ್ಯಾಸಿಸಂ’ ಜಾರಿ ತರುವ ನೆಪದಲ್ಲಿ ಎನ್ಸಿಇಆರ್ಟಿ ಪಠ್ಯ ಕ್ರಮದಲ್ಲಿದ್ದ ಡಾರ್ವಿನ್ ಸಿದ್ಧಾಂತ ಕುರಿತ ಪಾಠ ಕೈ ಬಿಡಲಾಗಿದೆ. ಇದು ಬಿಜೆಪಿ ಸರ್ಕಾರದ ನಿರಂಕುಶ ಸರ್ವಾಧಿಕಾರಿ ನಡೆ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಕೂಡೆಂಟ್ ಆರ್ಗನೈಸೇಷನ್ (ಎಐಡಿಎಸ್ಒ) ಹೇಳಿದೆ.
ಶಾಲಾ ಪಠ್ಯಗಳ ಹೊರೆ ಕಡಿಮೆ ಮಾಡುವ ನೆಪದಲ್ಲಿ 9ನೇ ಮತ್ತು 10ನೇ ತರಗತಿಗಳ ವಿಜ್ಞಾನ ಪಠ್ಯಪುಸ್ತಕಗಳಿಂದ ಮಾನವ ವಿಕಾಸ ಸಿದ್ಧಾಂತ ತೆಗೆದು ಹಾಕಿರುವ ಎನ್ಸಿಇಆರ್ಟಿ ಕ್ರಮವನ್ನು ಖಂಡಿಸಬೇಕು ಎಂದು ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಹೇಳಿದ್ದಾರೆ.
“ಪಿಯುಸಿಗೆ ಬಂದಾಗ ವಿದ್ಯಾರ್ಥಿಯೂ ವಿಜ್ಞಾನ ವಿಭಾಗ ಆಯ್ಕೆ ಮಾಡಿದರೆ ಮಾತ್ರ ವಿಕಾಸ ಸಿದ್ಧಾಂತವನ್ನು ಓದಬಹುದಾಗಿದೆ. ಇದು ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಮೇಲೆ ಅಪಾಯಕಾರಿ ಪರಿಣಾಮ ಬೀಳುತ್ತದೆ. ಧಾರ್ಮಿಕ ನಂಬಿಕೆಗಳ ಸುತ್ತ ಹುಟ್ಟಿಕೊಂಡಿದ್ದ ಹಲವು ಗೊಂದಲಗಳಿಗೆ ಉತ್ತರ ನೀಡವ ಡಾರ್ವಿನ್ ಸಿದ್ಧಾಂತವನ್ನೇ ತೆಗೆದು ಹಾಕಿರುವುದು ಸರಿಯಾದ ಕ್ರಮವಲ್ಲ. ವಿದ್ಯಾರ್ಥಿಗಳಲ್ಲಿ ತಾರ್ಕಿಕ ಚಿಂತನೆ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಲು ಇದು ಮಹತ್ವಪೂರ್ಣ ಸಿದ್ಧಾಂತ” ಎಂದು ಹೇಳಿದರು.
“ಸ್ವಾತಂತ್ರ್ಯ ಸಂಗ್ರಾಮ, ಸಾಂಸ್ಕೃತಿಕ ಪರಂಪರೆ ಹಾಗೂ ವೈವಿದ್ಯತೆ ಸೇರಿದಂತೆ ಮುಂತಾದವುಗಳ ಬಗ್ಗೆ ಮಾಹಿತಿ ಒದಗಿಸುತ್ತಿದ್ದ ಪಾಠಗಳನ್ನು ಕೈಬಿಡಲಾಗಿದೆ. ‘ಪ್ರಜಾತಂತ್ರ ಮತ್ತು ವೈವಿಧ್ಯತೆ’,’ಪ್ರಜಾತಂತ್ರದ ಸವಾಲುಗಳು’,’ಮೊಘಲ್ ಆಳ್ವಿಕರು ಮತ್ತುಅವರ ಆಳ್ವಿಕೆ’, ‘ವಸಾಹತುಶಾಹಿ ನಗರಗಳು’ಮತ್ತು’ಭಾರತದ ವಿಭಜನೆ’ಯಂತಹ ಅನೇಕ ಮಹತ್ವಪೂರ್ಣ ಅಧ್ಯಾಯಗಳನ್ನು ಕೈಬಿಡಲಾಗಿದೆ. ದೇಶವನ್ನು ಉಳಿಸಲು, ಶಿಕ್ಷಣದ ಮೇಲಿನ ಈ ದಾಳಿಯನ್ನು ವಿರೋಧಿಸಬೇಕು” ಎಂದು ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಕರೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಒಂದು ನಿಮಿಷದ ಓದು | ಎಸ್ಸೆಸ್ಸೆಲ್ಸಿ ಮೌಲ್ಯಮಾಪಕರ ಸಂಭಾವನೆ ಹೆಚ್ಚಳ