ಥ್ಯಾಕರೆಯ ತಲೆಗೆ ಗುಂಡಿಟ್ಟಿದ್ದ ವೀರ ಅಮಟೂರು ಬಾಳಪ್ಪನವರ ಇತಿಹಾಸವನ್ನು ದೇಶಕ್ಕೆ ತಿಳಿಸಬೇಕಿದೆ

Date:

ಸ್ವಾತಂತ್ರೋತ್ಸವದ ಈ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಪ್ರಾಣ ನೀಡಿದ ವೀರರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ. ರಾಣಿ ಚೆನ್ನಮ್ಮಳ ಕಿತ್ತೂರು ಸಂಸ್ಥಾನಕ್ಕೆ ಮೊದಲ ಜಯ ತಂದುಕೊಟ್ಟ ವೀರರಲ್ಲಿ ಅಮಟೂರು ಬಾಳಪ್ಪನವರು ಸಹ ಒಬ್ಬರಾಗಿದ್ದಾರೆ.

- Advertisement -

ಅಕ್ಟೋಬರ್‌ 21, 1824. ಬ್ರಿಟಿಷ್‌ ಅಧಿಕಾರಿ, ಧಾರವಾಡದ ಕಲೆಕ್ಟರ್‌ ಆಗಿದ್ದ ಥ್ಯಾಕರೆ ನೇತೃತ್ವದಲ್ಲಿ ಬ್ರಿಟೀಷ್‌ ಸೈನ್ಯವು ಕಿತ್ತೂರಿನ ಮೇಲೆ ಆಕ್ರಮಣ ಮಾಡಲು ಸನ್ನದ್ಧವಾಗಿ ಕಿತ್ತೂರು ಕೋಟೆಯ ಮೇಲೆ ಯುದ್ದ ಸಾರಿತ್ತು. ಅಕ್ಟೋಬರ್ 23ರಂದು ಕಿತ್ತೂರು ಕೋಟೆ ಮೇಲೆ ಬ್ರಿಟೀಷರು ಫಿರಂಗಿ ದಾಳಿ ನಡೆಸಿದ್ದರು. ಇನ್ನೇನು ಬ್ರಿಟಿಷರಿಗೆ ಯುದ್ದದಲ್ಲಿ ಜಯವಾಗಲಿದೆ ಎನ್ನುವ ಸಂದರ್ಭದಲ್ಲಿಯೆ ಸರದಾರ ಗುರುಸಿದ್ದಪ್ಪನವರ ನಾಯಕತ್ವದಲ್ಲಿ ಕಿತ್ತೂರಿನ ಸೈನ್ಯ, ಬ್ರಿಟಿಷರ ಸೈನ್ಯದ ಮೇಲೆ ಮುಗಿಬಿದ್ದಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ʻಬಳ್ಳಾರಿ ಚಲೋʼ ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಬಿಜೆಪಿ ಪಾದಯಾತ್ರೆ; ಲಾಭ...

ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದು ಕಾಂಗ್ರೆಸ್‌ ಬಿಜೆಪಿ ಪಕ್ಷವನ್ನು ಸಂಪೂರ್ಣವಾಗಿ ಮಣಿಸಿತ್ತು. ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ತನ್ನ ಪ್ರಾಬಲ್ಯವನ್ನು ಮುಂದುವರಿಸಿತು. ಇತ್ತೀಚೆಗೆ ನಡೆದ ಸಂಡೂರು ವಿಧಾನಸಭಾ ಕ್ಷೇತ್ರದ...

ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಸಮರ: ಕಕ್ಷೆಯಲ್ಲಿ ಆಯುಧಗಳನ್ನು ಇರಿಸಿದ್ದನ್ನು ಒಪ್ಪಿಕೊಂಡ...

ಉಪಗ್ರಹವನ್ನು ಸ್ಫೋಟಿಸದಿದ್ದರೂ ಬಾಹ್ಯಾಕಾಶದಲ್ಲಿ ಜಾಮರ್‌ಗಳು ಸಹ ಅತ್ಯಂತ ಮಾರಕವಾಗಿ ಪರಿಣಮಿಸಬಹುದು. ಇಂದಿನ ದಿನಗಳಲ್ಲಿ ಸಂಪರ್ಕ, ಹವಾಮಾನ ಮುನ್ಸೂಚನೆ, ವಿಮಾನ ಮತ್ತು ಹಡಗುಗಳ ಜಿಪಿಎಸ್ (GPS), ತುರ್ತು ಸೇವೆಗಳು ಮತ್ತು ಆರ್ಥಿಕ ಜಾಲಗಳು ಸಂಪೂರ್ಣವಾಗಿ...

ಗಣೇಶೋತ್ಸವ ಕೋಮು ಸೌಹಾರ್ದದ ಸೇತುವಾಗಲಿ; ಮನುಜ ಸಂಬಂಧದ ತಂತು...

ಗಣೇಶೋತ್ಸವ ಸಂಭ್ರಮ, ಭಕ್ತಿಯಿಂದ ಜನರು ಒಂದೆಡೆ ಸೇರಿ ಆಚರಿಸುವ ಹಬ್ಬ. ಆದರೆ ಇದೇ ಹಬ್ಬದ ಸಂದರ್ಭದಲ್ಲಿ ಕೆಲವೆಡೆ ಕೋಮು ಸಂಘರ್ಷಗಳು ನಡೆಯುತ್ತಿರುವುದು ಮಾತ್ರ ವಿಷಾದನೀಯ. ಭಾರತದಂತಹ ವಿವಿಧ ಧರ್ಮ, ಭಾಷೆ, ಸಂಸ್ಕೃತಿಗಳನ್ನು ಹೊಂದಿರುವ...

ರಾಣಿ ಚನ್ನಮ್ಮಳನ್ನು ಸೆರೆ ಹಿಡಿಯಬೇಕು ಇಲ್ಲವೆ ಹತ್ಯೆ ಮಾಡಬೇಕು ಎಂಬುದು ಬ್ರಿಟೀಷ್‌ ಅಧಿಕಾರಿಗಳ ಸಂಚಾಗಿತ್ತು. ಈ ಸಂದರ್ಭದಲ್ಲಿ ರಾಣಿ ಚೆನ್ನಮ್ಮಳ ಅಂಗರಕ್ಷಕನಾಗಿದದ್ದು ಅಮಟೂರು ಬಾಳಪ್ಪ. ಯುದ್ದದ ಸಂದರ್ಭದಲ್ಲಿ ಥ್ಯಾಕರೆಯು ರಾಣಿ ಚೆನ್ನಮ್ಮಳಿಗೆ ಗುರಿಯಿಟ್ಟಿದ್ದನ್ನು ಗಮನಿಸಿದ ಅಮಟೂರು ಬಾಳಪ್ಪ ನೇರವಾಗಿ ಥ್ಯಾಕರೆಯ ತಲೆಗೆ ಗುರಿಯಿಟ್ಟು ಗುಂಡು ಹಾರಿಸಿದ್ದರ ಪರಿಣಾಮ ಥ್ಯಾಕರೆಯು ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಬಿಟ್ಟಿದ್ದ. ಈ ಮೂಲಕ ಕಿತ್ತೂರಿನ ರಾಣಿ ಚೆನ್ನಮ್ಮಳ ಜೀವ ಉಳಿಸುವುದರೊಂದಿಗೆ ಕಿತ್ತೂರಿಗೆ ಮೊದಲ ಜಯ ತಂದುಕೊಡುವಲ್ಲಿ ಅಮಟೂರು ಬಾಳಪ್ಪನವರ ಸಾಹಸವು ಪ್ರಮುಖವಾಗಿದೆ.

ಬೆಳಗಾವಿ 25

ಈ ಘಟನೆಯಿಂದ ಕೋಪಗೊಂಡ ಭ್ರಿಟೀಷರು 1824 ಡಿಸೆಂಬರ್ ತಿಂಗಳಲ್ಲಿ ಕಿತ್ತೂರು ಕೋಟೆಯ ಮೇಲೆ ಆಕ್ರಮಣ ಮಾಡುತ್ತಾರೆ. ಈ ಸಂದರ್ಭದಲ್ಲಿ ಮಲ್ಲಪ್ಪ ಶೆಟ್ಟಿ ಮತ್ತು ವೆಂಕಟರಾಯರ ಕುತಂತ್ರದಿಂದ ಕಿತ್ತೂರು ಸಂಸ್ಥಾನದ ಫಿರಂಗಿಗಳನ್ನು ಅಶಕ್ತಗೊಳಿಸುತ್ತಾರೆ.

ಈ ಯುದ್ದದಲ್ಲಿ ರಾಣಿ ಚೆನ್ನಮ್ಮಳ ಅಂಗರಕ್ಷಕನಾಗಿದ್ದ ಅಮಟೂರು ಬಾಳಪ್ಪ, ಕಿತ್ತೂರಿನ ರಾಣಿಯ ಕಡೆಗೆ ಗುಂಡು ತಗುಲದಂತೆ ನೋಡಿಕೊಂಡು ಹೋರಾಡುತ್ತಾನೆ. ಆದರೆ 1824 ಡಿಸೆಂಬರ್ 4 ರಂದು ಕಿತ್ತೂರಿನ ವಾಚ್ ಟವರ್ ಅಂದರೆ ಗಡಾದ ಮರಡಿಯಲ್ಲಿ ಬ್ರಿಟೀಪ್ ಅಧಿಕಾರಿ ಚ್ಯಾಂಪ್ಲಿಯನ್ ರಾಣಿ ಚೆನ್ನಮ್ಮಳಿಗೆ ಗುಂಡು ಹಾರಿಸಲು ಮುಂದಾದಾಗ, ಆ ಗುಂಡಿಗೆ ಎದೆ ಕೊಟ್ಟು ಅಮಟೂರು ಬಾಳಪ್ಪ ವೀರಮರಣ ಹೊಂದುತ್ತಾನೆ.

WhatsApp Image 2024 08 14 at 12.28.56 AM

ಈ ಸಂದರ್ಭದಲ್ಲಿ ಸರ್ದಾರ್ ಗುರುಸಿದ್ದಪ್ಪ, ಸಂಗೊಳ್ಳಿ ರಾಯಣ್ಣ ಮತ್ತು ಸಹಚರರನ್ನು ಬಂಧಿಸಿ ಧಾರವಾಡದದ ಬಂಧೀಖಾನೆಯಲ್ಲಿ ಇಡಲಾಗುತ್ತದೆ. 1825 ಜನೇವರಿ 23ರಂದು ಸರ್ದಾರ ಗುರುಸಿದ್ದಪ್ಪನವರ ಹೊರತು ಪಡಿಸಿ ಉಳಿದವರನ್ನು ಬಿಡುಗಡೆ ಮಾಡಲಾಗುತ್ತದೆ‌.

ಇತಿಹಾಸದಲ್ಲಿ ಶತ್ರು ಸೈನ್ಯದ ಜೊತೆ ಹೋರಾಡಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಸ್ವಾತಂತ್ರ್ಯ ಹೋರಾಟಗಾರ ಅಮಟೂರು ಬಾಳಪ್ಪನವರ ಇತಿಹಾಸವನ್ನು ರಾಷ್ಟಕ್ಕೆಲ್ಲ ಮುಟ್ಟಿಸಬೇಕಾದ ನೈತಿಕ ಹೊಣೆಗಾರಿಕೆ ಈ ಭಾಗದ ವ್ಯವಸ್ಥೆಯ ಮೇಲಿದೆ.

WhatsApp Image 2025 11 17 at 5.27.06 PM
ಸುನಿಲ್ ಹಂಪನ್ನವರ
+ posts

ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಕುರಿ ಸಂಗೋಪನೆ ಸಂಘಗಳಿಗೂ ಶೂನ್ಯ ಬಡ್ಡಿದರ ಸಾಲಕ್ಕೆ ಆಗ್ರಹ

ಕುರಿ ಸಂಗೋಪನೆ ಹಾಗೂ ಉಣ್ಣೆ ಉತ್ಪಾದಕ ಸಹಕಾರ ಸಂಘಗಳಿಗೆ ಸಾಲ ಸೇರಿದಂತೆ...

ರಾಯಚೂರು | ಅವ್ಯವಹಾರ ದೂರು ನೀಡಿದ್ದಕ್ಕೆ ಡಿಡಿಪಿಐ ಬೆದರಿಕೆ: ಚನ್ನಬಸವ ಅರೋಲಿ ಆರೋಪ

ಮಾನ್ವಿ ತಾಲೂಕಿನ ಅರೋಲಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ...

ಧಾರವಾಡ | ಪ್ರತಿಯೊಬ್ಬರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅರಿಯಬೇಕು: ಎಫ್.ಹೆಚ್.ಜಕ್ಕಪ್ಪನವರ

"ಪ್ರತಿಯೊಬ್ಬರು ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಅದರ ಬೇರುಗಳನ್ನು ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ...

ವಿಜಯಪುರ | ಸಂವಿಧಾನ, ಪ್ರಜಾಪ್ರಭುತ್ವಕ್ಕೆ ದೇಶ ಒಗ್ಗೂಡಿಸುವ ಶಕ್ತಿಯಿದೆ: ಸುಪ್ರಿಯಾ ಬನಸೂಡೆ

ವೈವಿಧ್ಯತೆಯಲ್ಲಿ ಏಕತೆಯನ್ನು ರೂಪಿಸುವ ಶಕ್ತಿ ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗಿದೆ....