ಭಾರತದ ಶಕ್ತಿ ಗ್ರಾಮ ಮತ್ತು ಮಹಿಳೆಯರಲ್ಲಿದೆ. ಗ್ರಾಮೀಣ ಬದುಕಿನ ಸೊಗಡು ಹಾಗೂ ಮಹಿಳಾ ಶಕ್ತಿಯನ್ನು ದೇಶದ ಗಲ್ಲಿ ಗಲ್ಲಿಗಳಲ್ಲಿಯೂ ಕಾಣಬಹುದು ಎಂದು ಕೆಪಿಎಸ್ ಶಾಲೆ ಸಾಲಾಪೂರದ ಶಿಕ್ಷಕ ವಿಠ್ಠಲ ಕಟಗಿ ಹೇಳಿದರು.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಾಪೂರ ಗ್ರಾಮದಲ್ಲಿ ಗುರ್ಜಿ ಟೀಮ್ ಹಾಗೂ ನಾಟ್ಯಯೋಗ ಟ್ರಸ್ಟ್ ಸಾಲಾಪೂರ ಇವರ ಸಹಯೋಗದಲ್ಲಿ ನಡೆದ ಜಾನಪದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಹೆಣ್ಣಿನಲ್ಲಿ ಅಪಾರ ತಾಳ್ಮೆ ಮತ್ತು ಶಕ್ತಿಯಿದೆ. ಅದಕ್ಕಾಗಿಯೇ ಭೂಮಿಯನ್ನು ‘ಭೂಮಿ ತಾಯಿ’ ಎಂದು ಕರೆಯಲಾಗುತ್ತದೆ. ಗ್ರಾಮ ಮತ್ತು ಹೆಣ್ಣು ನಮ್ಮ ದೇಶದ ಪ್ರಮುಖ ಶಕ್ತಿಗಳಾಗಿವೆ ಎಂದು ಹೇಳಿದರು.
ಭಾರತದ ಸಂಸ್ಕೃತಿ, ಪರಂಪರೆ ಹಾಗೂ ಜೀವನ ಮೌಲ್ಯಗಳು ಜಾನಪದ ಕಲೆಗಳಲ್ಲಿ ಅಡಗಿವೆ. ಜಾನಪದ ಸಾಹಿತ್ಯವು ಇತರ ಸಾಹಿತ್ಯ ಪ್ರಕಾರಗಳಿಗೆ ಸರಿಸಮನಾದ ಶ್ರೀಮಂತಿಕೆಯನ್ನು ಹೊಂದಿದೆ. ನಮ್ಮ ಹಿರಿಯರು ಬಾಯಿಂದ ಬಾಯಿಗೆÍಹರಿಸಿದ ತತ್ವ, ಅನುಭವ ಮತ್ತು ಜೀವನ ಮೌಲ್ಯಗಳು ಜಾನಪದ ಕಲೆಯಲ್ಲಿ ಕಾಣಸಿಗುತ್ತವೆ. ವಿಶ್ವವಿದ್ಯಾಲಯಗಳಲ್ಲಿ ಕಲಿಯಲಾಗದ ಅನೇಕ ಮೌಲ್ಯಯುತ ವಿಚಾರಗಳನ್ನು ಜಾನಪದ ಪರಂಪರೆ ಕಲಿಸುತ್ತದೆ ಎಂದರು.
This video cannot be played in your browser. Open the video directly
ಸಾಲಾಪೂರ ಗ್ರಾಮವು ಜಾನಪದ ಸಾಹಿತ್ಯದ ಸೊಗಡನ್ನು ಹೊಂದಿದೆ. ಈ ದಿನ.ಕಾಮ್ ನಲ್ಲಿ ಪ್ರಕಟವಾದ ‘ಗುರ್ಜಿ’ ವರದಿಯ ಪ್ರಚಾರವು ನೂರು ವರ್ಷಗಳ ಹಿಂದಿನ ಗ್ರಾಮೀಣ ದಿನಗಳನ್ನು ನೆನಪಿಸುವಂತಾಗಿದೆ ಎಂದು ವಿಠ್ಠಲ ಕಟಗಿ ಹೇಳಿದರು.

ರಂಗಭೂಮಿ ನಿರ್ದೇಶಕ ಕಲ್ಲಪ್ಪ ಪೂಜೇರ ಸ್ವಾಗತಿಸಿದರು. ಜಾನಪದ ಕಲಾವಿದ ಉದಯ ಕುರಿ, ಗುರ್ಜಿ ಟೀಮ್ ಸದಸ್ಯರಾದ ರತ್ನಾ ಪೂಜೇರ ಹಾಗೂ ಮಲ್ಲವ್ವ ಭಟಕುರ್ಕಿ ಉಪಸ್ಥಿತರಿದ್ದರು.




