ಸರಕಾರ ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣ ಮಾಡಲು ಹೊರಟಿದ್ದು, ರೈತರಿಗೆ ಹಾಗೂ ಕೆಇಬಿ ಇಲಾಖೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಅನ್ಯಾಯ ಮಾಡುತ್ತಿರುವುದನ್ನು ಖಂಡಿಸಿ ಗದಗ ಪಟ್ಟಣದ ಜಿಲ್ಲಾಡಳಿತ ಭವನದ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಧ್ಯಕ್ಷ ಚೂನಪ್ಪ ಪೂಜಾರಿ ಆದೇಶದ ಮೇರೆಗೆ ಇಂದು ರೈತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ವಿಜಯಕುಮಾರ ಸುಂಕದ ಮಾತನಾಡಿ, “ರಾಜ್ಯ ಸರಕಕಾರಗಳು ರೈತರನ್ನೇ ಗುರಿಯಾಗಿಸಿಕೊಂಡು ವಿದ್ಯುತ್ ಖಾಸಗೀಕರಣ ಮಾಡಲು ಹೊರಟಿದೆ. ರೈತರನ್ನು ಬೀದಿಗೆ ತರುವಂತಹ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿದೆ” ಎಂದರು.
“23ರಂದು ಹಿಯರಿಂಗ್ ಇಟ್ಟುಕೊಂಡಿರುವುದನ್ನು ರದ್ದುಪಡಿಸಬೇಕು. ರಾಜ್ಯ ಸರಕಾರದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ನೇತೃತ್ವದಲ್ಲಿ ಇದನ್ನು ಹಿಂಪಡೆಯಬೇಕು” ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸುತ್ತದೆ.
“ರೈತರನ್ನು, ಜನಸಾಮಾನ್ಯರನ್ನು ಬೀದಿಗೆ ತರುವಂತಹ ಸರಕಾರಗಳು ಬಂದಿವೆ. ಈ ಸರಕಾರಗಳಿಗೆ ರೈತರ ಯೋಜನೆಗಳ ಕಾರ್ಯಕ್ರಮಗಳು ಯಾವವುಬಿಲ್ಲ. ಕೇಂದ್ರ ರಾಜ್ಯ ಸರಕಾರಗಳು ಜೆಸಿಬಿ ಸರಕಾರಗಳು. ಎಲ್ಲರೂ ಕಳ್ಳರೇ ಇದ್ದಾರೆ. ಇವ್ಯಾವು ರೈತರ ಅರಿವಿನ ಕಾರ್ಯಕ್ರಮಗಳು ಯಾವವು ಇಲ್ಲ. ಕೇವಲ ಕೈಗಾರಿಕೆಗಳನ್ನು ಖಾಸಗೀಕರಣ ಮಾಡುವುದು, ವಿದ್ಯುತ್ ಖಾಸಗೀಕರಣ ಮಾಡುವುದು, ಇಂತಹ ವ್ಯವಸ್ಥೆ ಕರ್ನಾಟಕದಲ್ಲಿ ನಡೆಯುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ವೇಳೆ ಈ ವಿದ್ಯುತ್ ಖಾಸಗೀಕರಣ ಕಾಯ್ದೆಯನ್ನು ಜಾರಿ ಮಾಡಲು ಹೊರಟರೆ ಇಡೀ ಮೂವತ್ತೊಂದು ಜಿಲ್ಲೆಯಲ್ಲಿಯೂ ರೈತ ಸಂಘದ ವತಿಯಿಂದ ಜಿಲ್ಲಾಡಳಿತದ ಮುಂದೆ ಅಹೋರಾತ್ರಿ ಧರಣಿ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡರು ಸಂಗಣ್ಣ ದಂಡಿನ ಮಾತನಾಡಿ, “ನಮ್ಮನ್ನಾಳುವ ಸರಕಾರಗಳು ರೈತರಿಗೆ, ಜನಸಾಮಾನ್ಯರಿಗೆ ಅನುಕೂಲ ಆಗುವ ಕಾಯ್ದೆಗಳನ್ನು, ಯೋಜನೆಗಳನ್ನು ತರಬೇಕು. ಆದರೆ ಇವರು ವಿದ್ಯುತ್ ಖಾಸಗೀಕರಣ ಮಾಡಲು ಹೊರಟಿದ್ದಾರೆ. ಖಾಸಗಿ ಕಂಪನಿಯವರು ಸಾವಿರಾರು ಕೋಟಿ ರೊಕ್ಕ ಕೊಡ್ತಾರ, ನಮಗ ರೈತರಿಗೆಲ್ಲಿ ರೊಕ್ಕ ಕೊಡೋಕ ಆಗುತ್ತ, ಅದಕ್ಕೆ ಸರಕಾರ ಖಾಸಗೀಕರಣ ಮಾಡಾಕ ಹೊಂಟಿದೆ” ಎಂದರು.

“ಬೆಳಕು, ಗಾಳಿ, ರಸ್ತೆ, ಆಸ್ಪತ್ರೆ, ಇವುಗಳನ್ನು ಸರಕಾರ ಎಲ್ಲರಿಗೂ ಕೊಡಲೆಬೇಕು. ಆದರ ಇವುಗಳನ್ನ ಒಬ್ಬೊಬ್ಬರಿಗೆ ಒಂದೊಂದು ಮಾರಾಟ ಮಾಡಕ ಹೋದ್ರ, ಇವರು ವಿಧಾನಸೌಧಕ್ಕೆ ಹೋಗಿ ಏನ ಮಾಡೋರು. ಎಲ್ಲದೂ ಅವರಿಗೆ ಕೊಟ್ರ, ಅವರ ನಮ್ಮನ್ನ ಆಳ್ತಾರ, ಇವರ ಹರಕಾತ ಏನ್ ಐತಿ. ಇವರಿಗೆ ನಾಚ್ಕಿ ಮಾನ ಮರ್ಯಾದಿ ಯಾವುದು ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕೂಡಲೇ ವಿದ್ಯುತ್ ಖಾಸಗೀಕರಣ ಮಾಡುವುದನ್ನು ಬಿಟ್ಟು, ರೈತರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗದಗ ತಾಲೂಕು ಅಧ್ಯಕ್ಷರುಬರಾಜು ಬಾಳಿಕಾಯಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಗುಡ್ಡಿಮಠ, ಚನ್ನಪ್ಪ ಉಪಾದಿ, ರೇಣಪ್ಪ ಪೂಜಾರಿ, ಬಿ.ಆರ್. ರಾತೋಡ್, ಸೋಮನಾಥ ಲಮಾಣಿ, ಮಂಜುನಾಥ ಹೊನ್ನಪ್ಪನವರ, ಶರಣಪ್ಪ ಹೊನ್ನಪ್ಪನವರ, ಸಯ್ಯದ್ ಮುಲ್ಲಾ, ಮುದಕಣ್ಣ ಮಜ್ಜಿಗುಡ್ಡ, ಡಿಎಸ್ಎಸ್ ನುಖಂಡರಯ ಬಸವರಾಜ ಕಾಳೆ, ಹನಮಂತ ಚಲವಾದಿ, ಕರವೇ ಜಿಲ್ಲಾಧ್ಯಕ್ಷ ಪರ್ವತಗೌಡ




