ರಾಯಚೂರು ತಾಲೂಕಿನಲ್ಲಿರುವ ಎಲೆಬಿಚ್ಚಾಲಿ ಶ್ರೀ ರಾಘವೇಂದ್ರ ಸ್ವಾಮಿಗಳು ತಪಸ್ಸು ಗೈದ ಜಪಕಟ್ಟೆ ಸಂಬಂದಿಸಿದಂತೆ 4 ಎಕರೆ ಜಮೀನಲ್ಲಿ 2 ಎಕರೆ 33 ಜಮೀನು ಸರ್ಕಾರಕ್ಕೆ ಸೇರಿದ್ದರಿಂದ ಇಂದು ಸಮೀಕ್ಷೆಗಾಗಿ ತೆರೆಳಿದ ಅಧಿಕಾರಿಗಳ ಕಾರ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಯರಗೇರಾ ಪೊಲೀಸರು 12ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿರುವ ಘಟನೆ ಜರುಗಿದೆ.
ಕಳೆದ ಅನೇಕ ವರ್ಷಗಳಿಂದ ಭೂಮಿಯನ್ನು ಉಳುಮೆ ಮಾಡುತ್ತಿರುವ ರೈತರು ಸರ್ವೆ ಕಾರ್ಯಕ್ಕೆ ಆಕ್ಷೇಪಿಸಿ ವಿರೋಧಿಸಿದ್ದಾರೆ. ಮಂತ್ರಾಲಯ ಮಠ ಸರ್ಕಾರಕ್ಕೆ ಪತ್ರ ಬರೆದು ಮಂತ್ರಾಲಯ ಸೇರಿದ ಐತಿಹಾಸಿಕ ಸ್ಥಳ ಅಭಿವೃದ್ದಿಗೆ ಮಠದ ಸುಪರ್ದಿಗೆ ನೀಡುವಂತೆ ಪತ್ರ ಬರೆಯಲಾಗಿತ್ತು ಎಂದು ಹೇಳಲಾಗಿದೆ.
ರಾಯರ ಜಪಕಟ್ಟೆಯೂ ಸುಪರ್ದಿಗೆ ಪಡೆಯಲು ಮಂತ್ರಾಲಯ ಮಠ ಪ್ರಯತ್ನಿಸಿತ್ತು. ಕಂದಾಯ ಇಲಾಖೆ ಅಧಿಕಾರಿಗಳು ಇಂದು ಭೂ ದಾಖಲೆ ಅಧಿಕಾರಿಗಳು, ಕಂದಾಯ ಹಾಗೂ ಪೊಲೀಸ್ ಬಂದೋಬಸ್ನೊಂದಿಗೆ ಸರ್ವೆಗೆ ತೆರಳಿದ್ದರು. ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಬಿಗುವಿನ ವಾತಾವರಣ ತಲೆದೂರಿತ್ತು. ಉಳುಮೆ ಮಾಡುತ್ತಿರುವ ರೈತರು ಕಂದಾಯ ಇಲಾಖೆ ನೋಟಿಸ್ ನೀಡದೇ ಏಕಾಏಕಿ ತೆರವುಗೊಳಿಸಲು ಬಂದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಪರಸ್ಥಿತಿ ಕೈ ಮೀರುತ್ತಿದ್ದಂತೆ ಯರಗೇರಾ ಪೊಲೀಸರು ಜನರನ್ನು ವಶಕ್ಕೆ ಪಡೆದು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದರು. ಕಂದಾಯ ಇಲಾಖೆ ದಾಖಲೆಯಂತೆ ಸರ್ವೆ ನಂಬರ್ನಲ್ಲಿ ಸರ್ಕಾರವೆಂದು ನಮೂದಾಗಿರುವುದರಿಂದ ರೈತರಿಗೆ ನೋಟಿಸ್ ನೀಡಲು ಬರುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದರಿಂದ ರೈತರು ಆಕ್ಷೇಪ ವ್ಯಕ್ತಪಡಿಸಿದರು. ಅಧಿಕಾರಿಗಳು ಸರ್ವೆ ಕಾರ್ಯ ಮುಂದುವರೆಸಿದ್ದು ಅಧಿಕಾರಿಗಳು ನೀಡುವ ವರದಿ ಆಧಾರದ ಮೇಲೆ ಸರ್ಕಾರ ಅಂತಿಮ ಆದೇಶ ಹೊರಡಿಸಬೇಕಿದೆ.
This video cannot be played in your browser. Open the video directly
ಇದನ್ನೂ ಓದಿ : ಬೀದರ್ | ಪತ್ರಕರ್ತರ ಲೇಖನಿ ಸತ್ಯದ ಪರವಾಗಿರಲಿ : ಸಭಾಧ್ಯಕ್ಷ ಯು.ಟಿ.ಖಾದರ್
ಕಳೆದ ಅನೇಕ ವರ್ಷಗಳಿಂದ ಮಂತ್ರಾಲಯ ಮಠ ಜಪದಕಟ್ಟೆಯನ್ನು ಮಠದ ಸುಪರ್ದಿಗೆ ಪಡೆಯುವಪ್ರಯತ್ನ ನಡೆಸುತ್ತಾ ಬಂದಿತ್ತು. ಅನೇಕ ವರ್ಷಗಳಿಂದ ಜಪದ ಕಟ್ಟೆಯನ್ನು ಟ್ರಸ್ಟ್ನಿಂದ ನಿರ್ವಹಿಸಲಾಗತ್ತಿತ್ತು. ಆದರೆ ಒತ್ತಾಯದಿಂದ ಮಂತ್ರಾಲಯ ಮಠ ಸೇರ್ಪಡೆ ಮಾಡುವ ಪ್ರಯತ್ನದ ವಿರುದ್ದ ಟ್ರಸ್ಟ್ ಪದಾಧಿಕಾರಿಗಳು ಕೊರ್ಟ್ ಮೊರೆ ಹೋಗಿದ್ದರು. ಟ್ರಸ್ಟ್ ಸ್ವಾಧೀನದಲ್ಲಿಯೇ ಜಪಕಟ್ಟೆ ನಿರ್ವಹಣೆ ಮಾಡಲಾಗತ್ತಿದೆ. ಸರ್ಕಾರಿ ಜಮೀನು ಇರುವ ಕುರಿತು ಗೊಂದಲಗಳು ಮುಂದುವರೆದಿವೆ. ಅಧಿಕಾರಿಗಳು ಸರ್ವೆ ಕಾರ್ಯ ಮುಂದುವರೆಸಿದ್ದಾರೆ ಎನ್ನಲಾಗಿದೆ.





