ಇಂದು ಬಿಲ್ಕಿಸ್ ಬಾನೊ, ನಾಳೆ ಇನ್ಯಾರೋ, ಕಾರಣಕೊಡಿ: ಗುಜರಾತ್ ಸರ್ಕಾರಕ್ಕೆ ಸುಪ್ರೀಂ ‍ಛಾಟಿ

Date:

ಅತ್ಯುನ್ನತ ಮಾನದಂಡ, ಅಧಿಕಾರವಿದ್ದರೂ, ನ್ಯಾಯಾಂಗದಿಂದ ಶಿಕ್ಷೆಗೊಳಗಾದ ಅಪರಾಧಿಗಳನ್ನು ಕಾರ್ಯಾಂಗ ಬಿಡುಗಡೆ ಮಾಡಬೇಕಾದರೆ ಸೂಕ್ತ ಕಾರಣಗಳನ್ನು ಕೊಡಲೇಬೇಕು ಎಂದು ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಕೇಂದ್ರ ಮತ್ತು ಗುಜರಾತ್ ಸರ್ಕಾರಕ್ಕೆ ತಾಕೀತು ಮಾಡಿದ ಸುಪ್ರೀಂ ಕೋರ್ಟ್

ಬಿಲ್ಕಿಸ್ ಬಾನೊ ಪ್ರಕರಣದ 11 ಅಪರಾಧಿಗಳನ್ನು ಶಿಕ್ಷೆಯ ಅವಧಿ ಪೂರ್ಣಗೊಳಿಸುವ ಮೊದಲೇ ಬಿಡುಗಡೆ ಮಾಡಲು ಸೂಕ್ತ ಕಾರಣಗಳನ್ನು ಕೊಡಿ ಎಂದು ಸುಪ್ರೀಂಕೋರ್ಟ್ ಗುಜರಾತ್ ಸರ್ಕಾರಕ್ಕೆ ಆದೇಶಿಸಿದೆ.

ಬಿಲ್ಕಿಸ್ ಬಾನೊ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರ ನ್ಯಾಯಪೀಠವು, “ಸಮಾಜದ ಮೇಲೆ ತೀವ್ರ ಪರಿಣಾಮ ಬೀರುವಂತಹ ಇಂತಹ ಕ್ರೂರ ಅಪರಾಧಗಳಿಗೆ ಬಿಡುಗಡೆ ಭಾಗ್ಯ ಕೊಟ್ಟಿದ್ದೀರಿ. ಸಾರ್ವಜನಿಕ ಹಿತಾಸಕ್ತಿ ಗಮನದಲ್ಲಿಟ್ಟು ಅಧಿಕಾರ ಚಲಾಯಿಸಬೇಕು” ಎಂದು ಗುಜರಾತ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ರಾಜ್ಯ ಸರ್ಕಾರದ ನಿರ್ಧಾರವನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ ಎಂದ ಮಾತ್ರಕ್ಕೆ ಆಲೋಚನೆ ಮಾಡದೇ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಬಾರದು ಎಂದು ನ್ಯಾಯಪೀಠ ಹೇಳಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ರಾಜ್ಯ ಸರ್ಕಾರ ಆಲೋಚಿಸಿ ನಿರ್ಧಾರ ಕೈಗೊಂಡಿದೆಯೇ ಎನ್ನುವುದು ಮುಖ್ಯ ಪ್ರಶ್ನೆ. ಈ ನಿರ್ಧಾರ ಕೈಗೊಳ್ಳಲು ಆಧಾರವಾಗಿರುವ ಅಂಶಗಳು ಯಾವುವು ಇತ್ಯಾದಿ ಮುಖ್ಯವಾಗುತ್ತದೆ. ನ್ಯಾಯಾಂಗದ ಆದೇಶದಲ್ಲಿ ಅಪರಾಧಿಗಳು ತಮ್ಮ ಮುಂದಿನ ಸಹಜ ಆಯಸ್ಸನ್ನು ಜೈಲಿನಲ್ಲಿ ಕಳೆಯಬೇಕು ಎಂದು ಹೇಳಲಾಗಿದೆ. ಆದರೆ ಕಾರ್ಯಾಂಗದ ಆದೇಶದಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆ. ಇಂದು ಈ ಮಹಿಳೆ (ಬಿಲ್ಕಿಸ್). ನಾಳೆ ನೀವೂ ಇರಬಹುದು ಅಥವಾ ನಾನೂ ಇರಬಹುದು. ವಸ್ತುನಿಷ್ಠವಾದ ಮಾನದಂಡಗಳು ಇರಬೇಕು. ನೀವು ಕಾರಣಗಳನ್ನು ಕೊಡದೆ ಇದ್ದಲ್ಲಿ, ನಾವೇ ತೀರ್ಮಾನಕ್ಕೆ ಬರಬೇಕಾಗುತ್ತದೆ” ಎಂದು ನ್ಯಾಯಮೂರ್ತಿ ಜೋಸೆಫ್ ಹೇಳಿದ್ದಾರೆ.

ಸಂತ್ರಸ್ತೆ ಬಿಲ್ಕಿಸ್ ಬಾನು ಸ್ವತಃ ಸಲ್ಲಿಸಿದ ಅರ್ಜಿಯೂ ಸೇರಿದಂತೆ, ಅತ್ಯಾಚಾರಿ ಅಪರಾಧಿಗಳನ್ನು ಅವಧಿಗೆ ಮುನ್ನ ಬಿಡುಗಡೆ ಮಾಡಿರುವ ಕುರಿತ ಅರ್ಜಿಗಳ ವಿಚಾರಣೆಯನ್ನು ನ್ಯಾಯಪೀಠ ಏಪ್ರಿಲ್ 18ರಂದು (ಮಂಗಳವಾರ) ನಡೆಸಿದೆ. ಈ ಪ್ರಕರಣದಲ್ಲಿ ಮಾರ್ಚ್ 27ರಂದು ಸಂಬಂಧಿಸಿದವರಿಗೆ ನ್ಯಾಯ ಪೀಠ ನೋಟಿಸ್ ಕಳುಹಿಸಿದೆ.

“ಕಾಂಗ್ರೆಸಿಗ ವೆಂಕಟ ರೆಡ್ಡಿ ಅವರಿಗೆ ವಿನಾಯಿತಿ ನೀಡಿ ಬಿಡುಗಡೆ ಮಾಡಿದಾಗಲೇ ನ್ಯಾಯಾಂಗ ಕಾನೂನನ್ನು ಸ್ಪಷ್ಟಪಡಿಸಿತ್ತು. ‘ಉತ್ತಮ ಕಾಂಗ್ರೆಸಿಗ’ ಎನ್ನುವ ಮಾನದಂಡವನ್ನು ನ್ಯಾಯಾಂಗ ತಿರಸ್ಕರಿಸಿ ಬಿಡುಗಡೆಯನ್ನು ರದ್ದುಗೊಳಿಸಿತ್ತು. ಅತ್ಯುನ್ನತ ಮಾನದಂಡ, ಅಧಿಕಾರವಿದ್ದರೂ, ಕಾರಣಗಳನ್ನು ಕೊಡಲೇಬೇಕು” ಎಂದು ನ್ಯಾಯಮೂರ್ತಿ ಜೋಸೆಫ್ ಪ್ರತಿವಾದಿಗಳಿಗೆ ತಾಕೀತು ಮಾಡಿದ್ದಾರೆ. 

ಅಲ್ಲದೆ, ಬಿಡುಗಡೆ ಮಾಡಿರುವ ವಿವರಗಳಿರುವ ಕಡತಗಳನ್ನು ಮುಂದಿಡುವಂತೆ ಕೇಳಿದ್ದಾರೆ. ಗುಜರಾತ್ ಸರ್ಕಾರಕ್ಕೆ ಮೇ 1ರೊಳಗೆ ಅಫಿದಾವತ್ ಸಲ್ಲಿಸಲು ಸುಪ್ರೀಂಕೋರ್ಟ್ ಸೂಚಿಸಿದೆ.

ಈ ಪ್ರಕರಣದ ವಿಚಾರಣೆಯನ್ನು ನ್ಯಾಯಪೀಠ ಮೇ 2ಕ್ಕೆ ಮುಂದೂಡಿದೆ. 

ಕೇಂದ್ರ ಮತ್ತು ಗುಜರಾತ್ ಸರ್ಕಾರದ ಪರ ವಾದಿಸಿದ ಎಎಸ್‌ಜಿ ಎಸ್‌ವಿ ರಾಜು ಅವರು ಮಾಧ್ಯಮಗಳಿಗೆ ಉತ್ತರಿಸಿ, “ಸೋಮವಾರದೊಳಗೆ ಅಫಿದಾವತ್ ಸಲ್ಲಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ” ಎಂದು ಹೇಳಿದ್ದಾರೆ.

ಆರಂಭದಲ್ಲಿ ಅಪರಾಧಿಗಳ ಪರ ವಕೀಲರು ಪ್ರತಿಕ್ರಿಯೆ ನೀಡಲು ಇನ್ನಷ್ಟು ಸಮಯ ಯಾಚಿಸಿದ್ದರು. ಆದರೆ ಅರ್ಜಿದಾರರ ಪರ ವಕೀಲರು ಇದಕ್ಕೆ ಬಲವಾಗಿ ವಿರೋಧಿಸಿದರು. “ಪ್ರತೀ ಬಾರಿ ಒಬ್ಬರಲ್ಲದಿದ್ದರೆ ಮತ್ತೊಬ್ಬರು ವಿಚಾರಣೆ ಮುಂದೂಡಲು ಹೇಳುತ್ತಿದ್ದಾರೆ” ಎಂದು ಅರ್ಜಿದಾರರ ವಕೀಲ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದರು.

ಈ ಸುದ್ದಿ ಓದಿದ್ದೀರಾ?: ಸುದ್ದಿ ನೋಟ | ಸುಪ್ರೀಂ ಕೋರ್ಟ್‌ನಲ್ಲಿ ಸಲಿಂಗ ವಿವಾಹ ಮಾನ್ಯತೆಗೆ ಸಲ್ಲಿಸಿದ ಅರ್ಜಿಗಳ ವಿಚಾರಣೆ

ಅಪರಾಧಿಗಳು ಪ್ರಕರಣದ ವಿಚಾರಣೆಯನ್ನು ತಡ ಮಾಡಲು ಸಮಯ ಕೇಳುತ್ತಿದ್ದಾರೆ ಎನ್ನುವ ವಾದವನ್ನು ನ್ಯಾಯಪೀಠ ಪುರಸ್ಕರಿಸಿತು. ಈಗಾಗಲೇ ಪ್ರತಿಕ್ರಿಯೆಗೆ ಸಾಕಷ್ಟು ಸಮಯ ಕೊಡಲಾಗಿದೆ ಎಂದು ನ್ಯಾಯಪೀಠ ಹೇಳಿದೆ. “ಪ್ರತೀಬಾರಿ ವಿಚಾರಣೆ ಸಂದರ್ಭ ಒಬ್ಬ ಆರೋಪಿ ವಿಚಾರಣೆ ಮುಂದೂಡಲು ಕೋರುತ್ತಾರೆ. ನಾಲ್ಕು ವಾರಗಳ ನಂತರ ಮತ್ತೊಬ್ಬ ಆರೋಪಿ ಪ್ರತಿಕ್ರಿಯೆ ಸಲ್ಲಿಸಲು ಸಮಯ ಕೇಳಬಹುದು. ಹೀಗಾದರೆ ಡಿಸೆಂಬರ್‌ವರೆಗೆ ಈ ಪ್ರಕರಣ ಮುಂದೂಡಬೇಕಾಗುತ್ತದೆ. ಇಂತಹ ತಡ ಮಾಡುವ ಕಾರ್ಯಯೋಜನೆ ಬಗ್ಗೆ ನಮಗೆ ಅರಿವಿದೆ” ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು.

ನಂತರ ಎಎಸ್‌ಜಿ ಎಸ್‌ವಿ ರಾಜು ಅವರು ವಿಚಾರಣೆಗೆ ಇನ್ನೊಂದು ಸ್ಥಿರ ದಿನಾಂಕವನ್ನು ನಿರ್ಧರಿಸುವಂತೆ ಸಲಹೆ ನೀಡಿದರು.

ವಿಚಾರಣೆ ಸಂದರ್ಭದಲ್ಲಿ ಅಪರಾಧಿಗಳಿಗೆ ಶಿಕ್ಷೆ ಅನುಭವಿಸುತ್ತಿದ್ದ ಅವಧಿಯಲ್ಲೂ ಅಕ್ಷರಶಃ ಮೂರು ವರ್ಷಗಳ ಪೆರೋಲ್ ನೀಡಿರುವುದನ್ನೂ ಸುಪ್ರೀಂ ಕೋರ್ಟ್ ಗಮನಿಸಿದೆ. “ಪ್ರತಿಯೊಬ್ಬ ಅಪರಾಧಿಗೂ 1000ಕ್ಕೂ ಹೆಚ್ಚು ದಿನಗಳ ಪೆರೋಲ್ ನೀಡಲಾಗಿದೆ. ಒಬ್ಬ ಅಪರಾಧಿಯಂತೂ 1500 ದಿನಗಳ ಪೆರೋಲ್ ಪಡೆದಿದ್ದರು. ನೀವು ಎಂಥಾ ನೀತಿ ಅನುಸರಿಸುತ್ತಿದ್ದೀರಿ” ಎಂದು ನ್ಯಾಯಪೀಠ ಗುಜರಾತ್ ಸರ್ಕಾರವನ್ನು ಪ್ರಶ್ನಿಸಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತದ ಮುಸ್ಲಿಮರು ಎಷ್ಟು ಸಂಪತ್ತು ಹೊಂದಿದ್ದಾರೆ? ಇಲ್ಲಿದೆ ಅಧ್ಯಯನದ ವರದಿ

ಪ್ರಧಾನಿ ನರೇಂದ್ರ ಮೋದಿ ಏ.21 ರಂದು ರಾಜಸ್ಥಾನದಲ್ಲಿ ಭಾಷಣ ಮಾಡುತ್ತಾ ಕಾಂಗ್ರೆಸ್...

ಹಾಸನ ಪೆನ್‌ಡ್ರೈವ್‌ ಪ್ರಕರಣ: ನಾಲ್ವರು ಸಂತ್ರಸ್ತೆಯರು ಆತ್ಮಹತ್ಯೆಗೆ ಯತ್ನ

ಹಾಸನದ ಪೆನ್‌ಡ್ರೈವ್‌ ಪ್ರಕರಣ ದಿನದಿಂದ ದಿನಕ್ಕೆ ಜಿಲ್ಲಾದ್ಯಂತ ಆತಂಕ ಹೆಚ್ಚಿಸ್ತಾ ಇದೆ....

ಬೀದರ್‌ | ಕಾಂಗ್ರೆಸ್‌ ಪ್ರಧಾನಿ ಅಭ್ಯರ್ಥಿ ಯಾರೆಂದು ಕೇಳಿದರೆ ಹೇಳುವುದಿಲ್ಲ : ಬಿ.ಎಸ್.ಯಡಿಯೂರಪ್ಪ

ರಾಜ್ಯದ ಉದ್ದಗಲಕ್ಕೂ ಸುತ್ತಿ ಬಂದಿದ್ದೇನೆ. ಭವಿಷ್ಯ ಹೇಳುತ್ತಿಲ್ಲ. ವಾಸ್ತವ ಹೇಳುತ್ತಿದ್ದೇನೆ. ಜೆಡಿಎಸ್‌-ಬಿಜೆಪಿ...

2025ರ ವೇಳೆಗೆ ಬಿಜೆಪಿ ಮೀಸಲಾತಿ ರದ್ದುಪಡಿಸಲಿದೆ: ತೆಲಂಗಾಣ ಸಿಎಂ ಆರೋಪ

ಮುಸ್ಲಿಮರಿಗೆ ಮೀಸಲಾತಿ ನೀಡುವ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ...