ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ | ಜನರನ್ನು ಬಿಜೆಪಿ `ಏಪ್ರಿಲ್‌ ಫೂಲ್‌’ ಮಾಡಲು ಹೊರಟಿದೆ : ಜೆಡಿಎಸ್‌

Date:

  • ಬೆಲೆ ಇಳಿಕೆ ಚುನಾವಣಾ ಗಿಮಿಕ್ ಎಂದ ಜೆಡಿಎಸ್‌
  • ಮಾರ್ಚ್‌ ತಿಂಗಳಲ್ಲಿ ಸಿಲಿಂಡರ್ ಬೆಲೆ ₹350ಕ್ಕೆ ಏರಿಕೆ

2024ರ ಆರ್ಥಿಕ ವರ್ಷದ ಮೊದಲ ದಿನವೇ ಕೇಂದ್ರ ಸರ್ಕಾರ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜೆಡಿಎಸ್‌, “ಬಿಜೆಪಿಯು ಏಪ್ರಿಲ್‌ 1ರಂದು ₹92 ಇಳಿಕೆ ಮಾಡಿ ‘ಫೂಲ್’ ಮಾಡಲು ಹೊರಟಿದೆ” ಎಂದು ಟೀಕಿಸಿದೆ.

ವಾಣಿಜ್ಯ ಸಿಲಿಂಡರ್ ಬೆಲೆ 91.50 ರೂಪಾಯಿ ಇಳಿಕೆಯಾಗಿದೆ. ಇಂದಿನಿಂದಲೇ ಹೊಸ ದರಗಳನ್ನು ಜಾರಿಗೆ ತರಲಾಗಿದೆ. ಕಳೆದ ತಿಂಗಳು ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 350 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಈಗ 91.50 ರೂಪಾಯಿ ಇಳಿಕೆಯಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್‌, “ಕಳೆದ ತಿಂಗಳು ಸಿಲಿಂಡರ್‌ಗೆ ₹350 ಏರಿಕೆ ಮಾಡಿದ್ದ ಕೇಂದ್ರ ಸರ್ಕಾರ, ಏಪ್ರಿಲ್‌ 1ರಂದು ₹92 ಇಳಿಕೆ ಮಾಡಿ ‘ಫೂಲ್’ ಮಾಡಲು ಹೊರಟಿದೆ” ಎಂದು ವ್ಯಂಗ್ಯವಾಡಿದೆ.

“ಚುನಾವಣೆವರೆಗೂ ಪ್ರಜೆಗಳನ್ನು ಎಷ್ಟು ಬೇಕೋ ಅಷ್ಟು ಲೂಟಿ ಮಾಡಿ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಣ್ಣೊರೆಸುವ ನಾಟಕವನ್ನು ರಾಜ್ಯ ಬಿಜೆಪಿ ಈ ಹಿಂದಿನಿಂದಲೂ ಮಾಡುತ್ತಾ ಬಂದಿದೆ” ಎಂದು ಕಿಡಿಕಾರಿದೆ.

ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಕುರಿತು ಹರಿಹಾಯ್ದ ಜೆಡಿಎಸ್‌, “ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸಿಲಿಂಡರ್ ಬೆಲೆ ದುಪ್ಪಟ್ಟಾಯಿತು. ದೇಶದ ಸಾಮಾನ್ಯ ಜನರಿಗೆ ನೀಡಲಾಗಿದ್ದ ಸಬ್ಸಿಡಿಯನ್ನು ನೀಡುತ್ತಿಲ್ಲ” ಎಂದು ಟ್ವೀಟ್ ಮಾಡಿದೆ.

“ಆದರೆ, ಬಿಜೆಪಿಯ 25 ಸಂಸದರು ಈ ಯಾವ ವಿಚಾರಕ್ಕೂ ಧ್ವನಿ ಎತ್ತುತ್ತಿಲ್ಲ. ಬಸವರಾಜ ಬೊಮ್ಮಾಯಿ ಅವರಂತೂ 40% ರಾಜ್ಯದಿಂದ ಎತ್ತುವಳಿ ಮಾಡಿ ದೆಹಲಿಗೆ ಕಳುಹಿಸುವಲ್ಲಿ ಬ್ಯುಸಿ ಆಗಿದ್ದಾರೆ” ಎಂದು ಕುಟುಕಿದೆ.

ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಕಾಂಗ್ರೆಸ್‌ನ ಎರಡನೇ ಪಟ್ಟಿ ಸಿದ್ಧ: ವರಿಷ್ಠರ ಅನುಮೋದನೆಗೆ ಸಲ್ಲಿಕೆ

“ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಇಳಿಕೆಯಾಗುತ್ತಿದ್ದರೂ ಅದರ ಲಾಭವನ್ನು ಜನರಿಗೆ ವರ್ಗಾಯಿಸುವ ಯಾವ ಪ್ರಯತ್ನವನ್ನೂ ಕೇಂದ್ರ ಸರ್ಕಾರ ಕೈಗೊಂಡಿಲ್ಲ” ಎಂದು ಜೆಡಿಎಸ್‌ ಹೇಳಿದೆ.

“ಕೊರೊನಾ ಸಮಯದಲ್ಲಿ ಜನರು ಸಂಕಟದಲ್ಲಿದ್ದಾಗಲೂ ಬೆಲೆ ಏರಿಕೆ ಮಾಡಿ ಪ್ರಧಾನಿ ಮೋದಿ ದುಷ್ಟತನ ಮೆರೆದಿದ್ದರು. ಜನದ್ರೋಹಿ ಸರ್ಕಾರ ಮಾತ್ರ ಹೀಗೆ ಮಾಡಲು ಸಾಧ್ಯ” ಎಂದು ಜೆಡಿಎಸ್‌ ತರಾಟೆಗೆ ತೆಗೆದುಕೊಂಡಿದೆ.

“ಚುನಾವಣೆವರೆಗೆ ಬೆಲೆ ಏರಿಸಿ, ಚುನಾವಣೆ ವೇಳೆಗೆ ಬೆಲೆ ಇಳಿಕೆ ಮಾಡುವ ಬಿಜೆಪಿ, ಫಲಿತಾಂಶ ಬಂದ ಮರುದಿನ ಮತ್ತೆ ಬೆಲೆ ಏರಿಕೆ ಮಾಡಿದ್ದು ನಮ್ಮ ಕಣ್ಣ ಮುಂದಿದೆ” ಎಂದು ಹೇಳಿದೆ.

“ಇದು ಕೇಂದ್ರ ಸರ್ಕಾರದ ಅಹಂಕಾರದ ಪರಮಾವಧಿ. ಆದರೆ ಈ ಬಾರಿ ನಿಮ್ಮ ಕೊಬ್ಬು ರಾಜ್ಯ ಚುನಾವಣೆಯಲ್ಲಿ ಇಳಿಸಿ, ಮುಂದಿನ ಲೋಕಸಭಾ ಚುನಾವಣೆಗೆ ಇಲ್ಲಿಂದಲೆ ಸಂದೇಶ ನೀಡಲಿದ್ದೇವೆ” ಎಂದು ಟ್ವೀಟ್ ಮಾಡಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತನಿಖೆ ಆಗುವವರೆಗೂ ಸದನಕ್ಕೆ ಹೋಗಲ್ಲ; ತಮ್ಮದೇ ಸರ್ಕಾರದ ವಿರುದ್ಧ ಬಿ.ಆರ್ ಪಾಟೀಲ್ ಕಿಡಿ

ಕಳೆದ ಸದನದಲ್ಲಿ ನನ್ನ ಪ್ರಶ್ನೆಗೆ ಉತ್ತರಿಸಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ...

ಕಲಬುರಗಿ | ಸಕಾಲ ಅರ್ಜಿ ವಿಲೇವಾರಿ : ಕಲಬುರಗಿಗೆ ರಾಜ್ಯದಲ್ಲೇ ನಂಬರ್‌ 1 ಸ್ಥಾನ

ಕಾಲಮಿತಿಯಲ್ಲಿ ಸರ್ಕಾರಿ ಸೇವೆ ನೀಡುವ ಸಕಾಲ ಯೋಜನೆಯಡಿ ನವೆಂಬರ್ ತಿಂಗಳ ಅರ್ಜಿ...

3ನೇ ಕಂತಿಗಾಗಿ ಮತ್ತೆ ಬಂದ ಸುರ್ಜೇವಾಲ: ಸಿ ಟಿ ರವಿ ಆರೋಪ

ಕಾಂಗ್ರೆಸ್ ಯಾವಾಗಲೂ ಚುನಾವಣೆ ನಡೆಸುವುದೇ ಕಡೇ 3 ದಿನದಲ್ಲಿ ...