ಲೋಕಸಭಾ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ 56 ನೇ ವರ್ಷದ ಹುಟ್ಟುಹಬ್ಬವನ್ನು ಶುಕ್ರವಾರ ಅವರ ಅಭಿಮಾನಿಗಳು ನಗರದ ನಚಿಕೇತನ ನಿಲಯದ ಅಂಬೇಡ್ಕರ್ ಪುತ್ಥಳಿ ಮುಂದೆ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಆಚರಣೆ ಮಾಡಿದರು
ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಎಸ್ಟಿ ಘಟಕದ ಜಿಲ್ಲಾ ಅಧ್ಯಕ್ಷ ಎನ್.ಅಂಬರೀಷ್ ಮಾತನಾಡಿ ದೇಶದಲ್ಲಿ ಶೋಷಣೆಗೆ ಒಳಪಟ್ಟವರ ಪರವಾಗಿ ಜನರ ನಾಡುಮಿಡಿತದೊಂದಿಗೆ
ಅಂಬೇಡ್ಕರ್ ಚಿಂತನೆ ಮತ್ತು ಅಲೋಚನೆಗಳನ್ನು ಜೀವಂತವಾಗಿ ಇಟ್ಟುಕೊಳ್ಳುವ ಮೂಲಕ ಸಂವಿಧಾನ ಉಳಿವಿಗೆ ಬಡವರ ಪರವಾಗಿ ಸಾಮಾಜಿಕ ನ್ಯಾಯ ಕಾಪಾಡಲು ಮುಂದಾಗಿರುವ ರಾಹುಲ್ ಗಾಂಧಿಯವರು ಭವಿಷ್ಯದಲ್ಲಿ ಪ್ರಧಾನಿಯಾಗಿ ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಹಾದಿಯಲ್ಲಿ ದೇಶವನ್ನು ಮುನ್ನಡೆಸಲಿ ಎಂದು ಆಶಿಸಿದರು.
ಇದನ್ನು ಓದಿದ್ದೀರಾ..?ಕೋಲಾರ | ಸಕಾಲದಲ್ಲಿ ಪಿಂಚಣಿ ವಿತರಣೆ, ಬಲವಂತ ಭೂ ಸ್ವಾಧೀನ ಕೈಬಿಡುವಂತೆ ಒತ್ತಾಯಿಸಿ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ
ಕಾಂಗ್ರೆಸ್ ಮುಖಂಡ ಎಂ.ಚಂದ್ರಮೌಳಿ ಮಾತನಾಡಿ ದೇಶವನ್ನು ಉಳಿಸುವ ದೃಷ್ಟಿಯಿಂದ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಪಾದಯಾತ್ರೆ ಮಾಡಿ ಮೋದಿ ಸರ್ಕಾರವು ಜಾತಿ ಧರ್ಮಗಳ ಮಧ್ಯೆ ಬೆಂಕಿ ಇಟ್ಟಿದ್ದಾರೆ ಅ ಬೆಂಕಿಯನ್ನು ಹಾರಿಸಲು ರಾಹುಲ್ ಗಾಂಧಿಯವರು ಹೊಡೆದ ಮನಸ್ಸುಗಳನ್ನು ಒಗ್ಗೂಡಿಸಿ ದೇಶವನ್ನು ಕಟ್ಟುವ ಕೆಲಸ ಮಾಡಿದ್ದಾರೆ ಅವರ ಆಸೆಯಂತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನವನ್ನು ಪಡೆದು ಪ್ರಧಾನಿಯಾಲಿ ಎಂದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಅಬ್ದುಲ್ ಖಯ್ಯಾಮ್ ಖಾದ್ರಿಪುರ ಬಾಬು, ಕುರಿಗಳ ರಮೇಶ್, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸೈಯದ್ ಆಫ್ರೀದ್ ನಗರಸಭೆ ಮಾಜಿ ಸದಸ್ಯರಾದ ಷಫಿ, ರಫೀ, ಏಜಾಜ್, ಫಾರೂಕ್,, ಕಾಂಗ್ರೆಸ್ ಮುಖಂಡರಾದ ಚೊಕ್ಕಪುರ ಚೌಡಪ್ಪ, ರಾಜಕಲ್ಲಹಳ್ಳಿ ಶ್ರೀನಿವಾಸ್, ಗೋವಿಂದ್, ಸೈಫ್, ಏಜಾಜ್, ಸಿರಾಜ್, ಕೀಲುಕೋಟೆ ಭರತ್, ಫಾರುಕ್, ವಾಸು, ಅಭಿಷೇಕ್, ಯತೀಶ್, ಸಂಪತ್, ಪಿಳ್ಳಪ್ಪ,ಮುಂತಾದವರು ಬಿದ್ದರು




